ರಾಮಾಯಣ, ಮಹಾಭಾರತ ಹಿಂದುಳಿದವರ ಕೊಡುಗೆ
KannadaprabhaNewsNetwork | Published : Oct 30 2023, 12:30 AM IST
ರಾಮಾಯಣ, ಮಹಾಭಾರತ ಹಿಂದುಳಿದವರ ಕೊಡುಗೆ
ಸಾರಾಂಶ
ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ಜಗತ್ತಿಗೆ ನೀಡಿದವರು ಹಿಂದುಳಿದ ಜನಾಂಗದವರೇ ಆಗಿದ್ದು, ಇವೆರೆಡೂ ಮಹಾಕಾವ್ಯಗಳ ಮೂಲಕ ಜಗತ್ತಿಗೆ ಸತ್ಯ, ನ್ಯಾಯ, ಧರ್ಮದ ಮಾರ್ಗದರ್ಶನ ನೀಡಲಾಗಿದೆ ಎಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ತಿಳಿಸಿದರು.
11 ದಿನಗಳ ವಾಲ್ಮೀಕಿ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ರಾಜನಹಳ್ಳಿ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅಭಿಮತ ಕನ್ನಡಪ್ರಭ ವಾರ್ತೆ ದಾವಣಗೆರೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ಜಗತ್ತಿಗೆ ನೀಡಿದವರು ಹಿಂದುಳಿದ ಜನಾಂಗದವರೇ ಆಗಿದ್ದು, ಇವೆರೆಡೂ ಮಹಾಕಾವ್ಯಗಳ ಮೂಲಕ ಜಗತ್ತಿಗೆ ಸತ್ಯ, ನ್ಯಾಯ, ಧರ್ಮದ ಮಾರ್ಗದರ್ಶನ ನೀಡಲಾಗಿದೆ ಎಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ತಿಳಿಸಿದರು. ನಗರದ ಹೈಸ್ಕೂಲ್ ಮೈದಾನದಲ್ಲಿ ಭಾನುವಾರದಿಂದ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಹಾಗೂ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿಯಿಂದ ಆರಂಭವಾದ 11 ದಿನಗಳ ಸಾರ್ವಜನಿಕ ವಾಲ್ಮೀಕಿ ಜಯಂತಿಗೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮವೆಂದರೆ ತ್ಯಾಗ. ತ್ಯಾಗದ ಮೂಲಕವೇ ಧರ್ಮ ಸ್ಥಾಪನೆಯಾಗು ತ್ತದೆಂದು ವಾಲ್ಮೀಕಿ ಮಹರ್ಷಿಗಳು ಹೇಳಿದ್ದಾರೆ ಎಂದರು. ಅಣ್ಣ-ತಮ್ಮಂದಿರ ತ್ಯಾಗ ರಾಮಾಯಣದಲ್ಲಿದೆ. ಅಣ್ಣ-ತಮ್ಮಂದಿರ ಜಗಳ ಮಹಾಭಾರತದಲ್ಲಿದೆ. ಈ ಎರಡೂ ವ್ಯತ್ಯಾಸಗಳ ಮಹಾಕಾವ್ಯವ ರಚಿಸಿದವರು ಹಿಂದುಳಿದ ಜನಾಂಗದವರು. ವಾಲ್ಮೀಕಿ, ವ್ಯಾಸ ಮುನಿಗಳು ತಮ್ಮ ಮಹಾನ್ ಗ್ರಂಥಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. 5 ಸಾವಿರ ವರ್ಷಗಳ ಹಿಂದೆಯೇ ಧಾರ್ಮಿಕ ಸಂವಿಧಾನ ಬರೆದಿದ್ದಾರೆ. ಇಂತಹವರ ಜಯಂತಿ ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಅವರು ಹೇಳಿದರು. ಕೇವಲ ಒಂದು ದಿನಕ್ಕೆ ಸೀಮಿತವಾಗದೇ 11 ದಿನಗಳ ಜಯಂತಿ ಆಚರಿಸುತ್ತಿರುವುದು ಸ್ವಾಗತಾರ್ಹ. ಇಂತಹ ಕಾರ್ಯಕ್ಕೆ ರಾಜನಹಳ್ಳಿ ಶ್ರೀಮಠದ ಸಂಪೂರ್ಣ ಸಹಕಾರ ಇರುತ್ತದೆ. ಕಳೆದ ವರ್ಷಕ್ಕಿಂತ ಈ ಸಲ ಉತ್ಸವ ವಿಜೃಂಭಣೆಯಿಂದ ಆಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ವಾಲ್ಮೀಕಿ ಜಯಂತಿ ಇನ್ನೂ ವಿಶಾಲ ರೂಪು ಪಡೆಯಲಿದೆ. ನಶಿಸಿ ಹೋಗುತ್ತಿರುವ ದೇಸೀ ಸೊಗಡು, ಜಾನಪದ ಕಲೆ, ಕಲಾವಿದರನ್ನು ಬೆಳಕಿಗೆ ತರುವ ಪ್ರಯತ್ನವೂ ಮಹರ್ಷಿ ವಾಲ್ಮೀಕಿ ಜಯಂತಿ ಮೂಲಕ ಆಗುತ್ತಿರುವುದು ಹೆಮ್ಮೆದ ಸಂಗತಿ. ಈ ಕಾರ್ಯಕ್ರಮ ನಾಡಿಗೆ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ವಾಲ್ಮೀಕಿ ಪ್ರೊಟೆಕ್ಷನ್ ಆಕ್ಟ್ ಕಾಯ್ದೆ ಮಾದರಿಯಲ್ಲೇ ರಾಜ್ಯದಲ್ಲೂ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ವಾಲ್ಮೀಕಿ ಸಮುದಾಯ ನಮ್ಮ ಸೋದರ ಸಮಾಜವಾಗಿದ್ದು, ಎಂದೆಂದಿಗೂ ಈ ಸಮುದಾಯ ನನ್ನನ್ನು ಬೆಂಬಲಿಸಿಕೊಂಡು ಬಂದಿದೆ. ಇದಕ್ಕಾಗಿ ನಾನು ಸಮಾಜಕ್ಕೆ ಅಭಾರಿ ಎಂದು ಹೇಳಿದರು. ಸಮಾಜದ ಮುಖಂಡ ಹೊದಿಗೆರೆ ರಮೇಶ ಮಾತನಾಡಿ, ಚನ್ನಗಿರಿಯಲ್ಲಿ ವಾಲ್ಮೀಕಿ ಪುತ್ಥಳಿ ತೆರವು ಮಾಡಿದ್ದು ಸರಿಯಲ್ಲ. ಪುರಸಭೆ ಒಪ್ಪಿಗೆ ಪಡೆದು, ಜಿಲ್ಲಾಧಿಕಾರಿಗಳ ಕಚೇರಿಗೆ ಕಡತ ಬಂದಿದೆ. 30 ದಿನಗಳ ನೋಟಿಸ್ ಅವಧಿಯಲ್ಲಿದ್ದು, ಈ ಕೆಲಸ ಆಗುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಚನ್ನಗಿರಿಯಲ್ಲಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಪನೆ ನಿಶ್ಚಿತವಾಗಿ ಆಗಲಿದೆ ಎಂದು ತಿಳಿಸಿದರು. ಮುಖಂಡರಾದ ಎಸ್.ಎಂ.ಪಿ.ತಿಪ್ಪೇಸ್ವಾಮಿ, ಎಲೋದಹಳ್ಳಿ ರವಿ, ಗುಮ್ಮನೂರು ಬಸವರಾಜ, ಹೂವಿನಮಡು ನಾಗರಾಜ, ಇಟಗಿ ಹನುಮಂತ, ಕರಿಯಪ್ಪ ನಾಯಕ, ಆಲೂರು ಪರಶುರಾಮ, ಪಾಲಿಕೆ ಸದಸ್ಯ ಪಾಮೇನಹಳ್ಳಿ ಗೌಡ್ರ ನಾಗರಾಜ, ಗಣೇಶ್ ಹುಲ್ಮನಿ ಇತರರು ಇದ್ದರು. ಝೀ ಟಿವಿ ಸರಿಗಮಪ ಗಾಯನ ಸ್ಫರ್ಧೆಯಲ್ಲಿ ಅಂತಿಮ ಘಟ್ಟಕ್ಕೆ ಬಂದಿದ್ದ ಶ್ವೇತಾರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಪಿ.ಬಿ.ರಸ್ತೆಯ ತಹಸೀಲ್ದಾರ್ ಕಚೇರಿ ಸಮೀಪದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಮೆರವಣಿಗೆಗೆ ರಾಜನಹಳ್ಳಿಯ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಚಾಲನೆ ನೀಡಿ ಶುಭ ಹಾರೈಸಿದರು. ಯುವ ಉದ್ಯಮಿ ಸಮರ್ಥ ಎಂ.ಶಾಮನೂರು ಇತರರು ಹೆಜ್ಜೆ ಹಾಕಿದರು. ಮಹರ್ಷಿ ವಾಲ್ಮೀಕಿ ಭಾವಚಿತ್ರದ ಬೃಹತ್ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಅದ್ದೂರಿಯಾಗಿ ಜರುಗಿತು. ............................. ಬೆಂಗಳೂರಿನಲ್ಲಿ ನಡೆದ ಪ್ರಧಾನ ಸಮಾರಂಭ ಶ್ರೀ ವಾಲ್ಮೀಕಿ ಜಯಂತಿಯಲ್ಲಿ ರಾಜ್ಯದಲ್ಲಿ ಪ್ರತ್ಯೇಕ ಪರಿಶಿಷ್ಟ ಪಂಗಡದ ಸಚಿವಾಲಯ ರಚನೆ ಮಾಡುವುದಾಗಿ ಸರ್ಕಾರವು ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ರಾಜ್ಯದ ಸಮಸ್ತ ನಾಯಕ ಸಮಾಜ ಧನ್ಯವಾದ ಅರ್ಪಿಸಲಿದೆ. ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠ. -------------------- ಪಂಜಾಬ್ ಮಾದರಿ ಕಾನೂನು ರಾಜ್ಯದಲ್ಲೂ ಜಾರಿ ಮಾಡಿ: ಸಮಾಜದ ಯುವ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಪಂಜಾಬ್ನಲ್ಲಿ ವಾಲ್ಮೀಕಿ ಪ್ರೊಟೆಕ್ಷನ್ ಆಕ್ಟ್ ಇದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕಾಯ್ದೆ ತರುವಂತೆ ಸರ್ಕಾರಕ್ಕೆ ಕಳೆದ ವರ್ಷ ಮನವಿ ಮಾಡಿದ್ದೆವು. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಈ ಬಗ್ಗೆ ಪ್ರಸ್ತಾವನೆ ಮಾಡಬೇಕು ಎಂದು ಒತ್ತಾಯಿಸಿದರು. ....................... ಕ್ಯಾಪ್ಷನ್ 29ಕೆಡಿವಿಜಿ10- ದಾವಣಗೆರೆಯಲ್ಲಿ 11 ದಿನಗಳ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಹಿನ್ನೆಲೆ ನಡೆದ ಮೆರವಣಿಗೆಗೆ ಚಾಲನೆ ನೀಡಿದ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ. ಶಾಸಕ ಕೆ.ಎಸ್.ಬಸವಂತಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ, ಹೊದಿಗೆರೆ ರಮೇಶ ಇತರರು ಇದ್ದರು. ..............