ಸಾರಾಂಶ
ಕೆಐಎಡಿಬಿ ಅಧಿಸೂಚನೆಯಂತೆ ದೇವನಹಳ್ಳಿ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಭಾಗದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಿದರೆ ಜಮೀನು ಬಿಟ್ಟು ಕೊಡಲು ಸಿದ್ಧ. ರೈತರ ಪರ ಹೋರಾಟ ಸಮಿತಿಯಿಂದ ಅಭ್ಯಂತರವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೆಐಎಡಿಬಿ ಅಧಿಸೂಚನೆಯಂತೆ ದೇವನಹಳ್ಳಿ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಭಾಗದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಿದರೆ ಜಮೀನು ಬಿಟ್ಟು ಕೊಡಲು ಸಿದ್ಧ. ರೈತರ ಪರ ಹೋರಾಟ ಸಮಿತಿಯಿಂದ ಅಭ್ಯಂತರವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಹೇಳಿದರು. ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಭೂಸ್ವಾದಿನಕ್ಕೆ ಒಳಪಟ್ಟಿರುವ 13 ಹಳ್ಳಿಗಳ 2823 ಎಕರೆಯಲ್ಲಿ ಸರ್ಕಾರದ ಜಮೀನು ಬಿಟ್ಟು ಉಳಿದಂತೆ 1082 ಜನ ರೈತ ಖಾತೆದಾರಾರಿದ್ದು ಎಲ್ಲರಿಗೂ ನೊಟೀಸ್ ನೀಡಿ ಅಭಿಪ್ರಾಯ ಸಂಗ್ರಹಣೆ ಮಾಡಿರುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಕೆಐಎಡಿಬಿ ಭೂ ಸ್ವಾಧೀನಕ್ಕೆ ಅಧಿಸೂಚನೆ ನಂತರ ರಾಜ್ಯದ ಎಲ್ಲಿಯೂ ಈವರೆಗೂ ರೈತರ ಅಭಿಪ್ರಾಯ ಸಂಗ್ರಹಿಸಿ ಭೂ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ಮೊದಲ ಬಾರಿಗೆ ರೈತರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು. ಶಿಡ್ಲಘಟ್ಟ ತಾಲೂಕು ಅಭಿವೃದ್ಧಿ ಹೊಂದುವ ಜೊತೆಗೆ ಈ ಭಾಗದ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ತಾಲೂಕಿನ ಯಾವುದೇ ಭಾಗದಲ್ಲಿ ಕೈಗಾರಿಕಾ ಪ್ರದೇಶ ಮಾಡಿದರೂ ಸಹ ರೈತರ ಭೂಮಿಗಳಲ್ಲಿಯೇ ಮಾಡಬೇಕಲ್ಲ ಎಂದು ಪ್ರಶ್ನಿಸಿದರು.ಜಿಲ್ಲಾ ಉಸ್ತುವಾರಿ ಸಚಿವರು. ಸ್ಥಳಿಯ ಶಾಸಕರು ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಿ ಭೂಮಿ ಕಳೆದುಕೊಂಡ ಪ್ರತಿ ರೈತನ ಕುಟುಂಬಕ್ಕೆ ಒಂದು ಉದ್ಯೋಗ, ಉತ್ತಮ ಹೆಚ್ಚಿನ ಬೆಲೆ, ನೀಡಿದಲ್ಲಿ ನಿಮ್ಮ ಪೋಟೋಗಳನ್ನು ಪ್ರತಿ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತೇವೆಂದರು. ಜಿಲ್ಲಾ ಉಸ್ತುವಾರಿ ಸಚಿವರು ಹಸಿರು ಶಾಲು ಹಾಕಿಕೊಂಡಿರುವವರು ಮಾತ್ರ ರೈತರು ಹಸಿರು ಶಾಲು ಹಾಕದೇ ಇರುವವರೆಲ್ಲ ರೈತರಲ್ಲವೇ, ಎಂಬ ಹೇಳಿಕೆ ಸಮಂಜಸವಾಗಿರುತ್ತದೆ. ಏಕೆಂದರೆ ಕೇವಲ ನೂರು ಎಕರೆ ಜಮೀನು ಇರುವವರು ಮಾತ್ರ ರೈತರೇ, ದಿನಕ್ಕೆ ನೂರು ಲೀಟರ್ ಹಾಲು ಉತ್ಪಾದನೆ ಮಾಡುವವರು ರೈತರೇ ಅಥವಾ ರೈತ ಶಾಲು ಹಾಕಿಕೊಂಡವರು ಮಾತ್ರ ರೈತರು ಎಂದು ಯಾವುದಾದರೂ ಕಾನೂನುನಲ್ಲಿ ದಾಖಲೆ ಇದಿಯಾ?.
ನಮ್ಮ ಸಂವಿದಾನದ ಅಡಿಯಲ್ಲಿ ಬಾಯಿಂದ ಆಹಾರ ಸೇವೆನೆ ಮಾಡುವ ಪ್ರತಿಯೊಬ್ಬ ಭಾರತೀಯನಿಗೂ ಕೂಡ ವವ್ಯಸಾಯ ಮಾಡಲಿ ಮಾಡದೇ ಇರಲಿ ರೈತನ ಬಗ್ಗೆ ಧ್ವನಿ ಎತ್ತಬಹುದು. ರೈತರ ಹೋರಾಟಗಳಲ್ಲಿ ಬಾಗಿಯಾಗಬಹುದು. ಜಂಗಮಕೋಟೆ ಹೊಬಳಿಯಲ್ಲಿ ಪಿ ಎನ್ ಎಲ್, ಕಂಪನಿಯ ಹೆಸರಿನಲ್ಲಿ ಕೆಲ ಮಧ್ಯವರ್ತಿಗಳು ಅಮಾಯಕ ರೈತರಿಗೆ ಹೆಚ್ಚಿನ ಬೆಲೆ ನೀಡುವುದಾಗಿ ನಂಬಿಸಿ ಕೇವಲ 50 ಸಾವಿರ 1 ಲಕ್ಷ ಹಣ ನೀಡಿ ಜಿಪಿಎ, ಮಾಡಿಸಿಕೊಂಡು ಮೊಸ ಮಾಡಿದ್ದಾರೆ. ಆದರೆ ಪಹಣಿಯಲ್ಲಿ ರೈತರ ಹೆಸರು ಇರುವ ಕಾರಣ ಅವರ ಅಭಿಪ್ರಾಯ ಕೇಳಿದ್ದಾರೆ, ಇದರಲ್ಲಿ ತಪ್ಪೆನಿದೆ, ನೀವು ಪಿಎಸ್ ಎಲ್ ಕಂಪನಿಯ ಪರವಾಗಿ ಮಾತನಾಡಲು ನೀವು ಆ ಅಕ್ರಮ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದೀರಾ? ಎಂದು ಕೆಐಡಿಬಿಗೆ ಜಮೀನು ನೀಡಲು ವಿರೋಧಿಸುತ್ತಿರುವ ಬಣವನ್ನು ಪ್ರಶ್ನಿಸಿದರು. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸರ್ಕಾರದ ಕಾನೂನು ಯಾವ ರೀತಿ ಇದಿಯೋ ಆ ರೀತಿ ಅವರಿಗೆ ದತ್ತವಾದ ಅಧಿಕಾರವನ್ನು ಉಪಯೋಗಿಸಿಕೊಂಡು ತ್ವರಿತ ಗತಿಯಲ್ಲಿ ಜಮೀನು ಒಪ್ಪಿಗೆ ನೀಡಿದ ರೈತರಿಗೆ ಉತ್ತಮ ಬೆಲೆ, ಮನೆಗೊಂದು ಉದ್ಯೋಗ ನೀಡಿ ಬಹು ಬೇಗ ಕೈಗಾರಿಕೆಗಳನ್ನು ಸ್ಥಾಪಿಸಿ ಈ ಭಾಗದ ನಿರುದ್ಯೋಗ ನಿವಾರಣೆ ಮಾಡಬೇಕೇಂದು ಮನವಿ ಮಾಡಿದರು.ರಾಜ್ಯ ಉಪಾದ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಎ,ಎನ್,ಮುನೇಗೌಡ, ಎನ್,ಸಿ ಸುಬ್ರಮಣಿ, ನಡುಪಿನಾಯಕನಹಳ್ಳಿ ವಾಸುದೇವ ಮೂರ್ತಿ ,ಬಸವಪಟ್ಟಣ ಆಂಜಿನಪ್ಪ, ಪ್ರಭುಗೌಡ,ಮದುರಾಮದಾಸ್, ಯಣ್ಣಂಗೂರು ಪ್ರದೀಪ್, ನರಸಿಂಹಮೂರ್ತಿ, ವೈ,ಎಸ್ ಮದು, ರವಿ,ಪ್ರಮೋದ್, ಜಂಗಮಕೊಟೆ ಮಂಜುನಾದ್, ಚೀಂಮಗಲ ಚೆನ್ನಪ್ಪ, ಎಚ್,ಎನ್, ಕದೀರೇಗೌಡ, ಹುಸೇನ್ ಸಾಬ್ ಇದ್ದರು.