ಮೂರು ಶಾಲೆಗಳಲ್ಲಿ ಕನ್ನಡಪ್ರಭ ಪತ್ರಿಕೆಯ ವಿದ್ಯಾರ್ಥಿ ಮಿತ್ರ ಬಿಡುಗಡೆ

| N/A | Published : Jun 14 2025, 03:16 AM IST / Updated: Jun 14 2025, 11:01 AM IST

ಸಾರಾಂಶ

ಕನ್ನಡಪ್ರಭ ಪತ್ರಿಕೆಯು ವಿದ್ಯಾರ್ಥಿಗಳಿಗಾಗಿ ಹೊರತಂದಿರುವ ಕನ್ನಡಪ್ರಭ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಮೈಸೂರಿನ ನಾರಿಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಸಿ.ಎಸ್. ಮುರಳೀಧರ್ತಾಲೂಕಿನ ತಡಿಮಾಲಂಗಿ, ತಲಕಾಡು ಮತ್ತು ಮೇದಿನಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಡುಗಡೆ ಮಾಡಿದರು.

  ಟಿ. ನರಸೀಪುರ : ಕನ್ನಡಪ್ರಭ ಪತ್ರಿಕೆಯು ವಿದ್ಯಾರ್ಥಿಗಳಿಗಾಗಿ ಹೊರತಂದಿರುವ ಕನ್ನಡಪ್ರಭ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಮೈಸೂರಿನ ನಾರಿಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಸಿ.ಎಸ್. ಮುರಳೀಧರ್ತಾಲೂಕಿನ ತಡಿಮಾಲಂಗಿ, ತಲಕಾಡು ಮತ್ತು ಮೇದಿನಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಡುಗಡೆ ಮಾಡಿದರು.

ನಂತರ ಅವರು ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿಗೆ ಕನ್ನಡಪ್ರಭ ವಿದ್ಯಾರ್ಥಿ ಮಿತ್ರ ಪತ್ರಿಕೆಯು ಉತ್ತಮ ವೇದಿಕೆಯಾಗಿದ್ದು, ಉನ್ನತ ಫಲಿತಾಂಶ ಪಡೆಯಲು ಈ ಪತ್ರಿಕೆ ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರವಾಗಿದೆ. 

ಅಲ್ಲದೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹ ಈ ಪತ್ರಿಕೆ ಬಹಳ ಅನುಕೂಲಕರವಾಗಿದ್ದು, ಉತ್ತಮ ಮಾಹಿತಿಯನ್ನು ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಿದೆ. ಇದನ್ನು ವಿದ್ಯಾರ್ಥಿಗಳು ಪ್ರತಿನಿತ್ಯ ಓದಿಕೊಂಡು ಉತ್ತಮ ಫಲಿತಾಂಶ ಪಡೆಯಬೇಕೆಂದು ಅವರು ಕರೆ ನೀಡಿದರು.

ಸಿ.ಎಸ್. ಮುರಳೀಧರ್ಅವರು ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲಿ ಎಂದು ಪ್ರತಿವರ್ಷ ವಿದ್ಯಾರ್ಥಿ ಮಿತ್ರ ಹಾಗೂ ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳಿ ಉಚಿತವಾಗಿ ವಿತರಿಸುತ್ತಿದ್ದಾರೆ.ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಬಿಆರ್.ಸಿ ನಾಗೇಶ್, ನಾರಿಟ್ರಸ್ಟ್ ನ ಎ.ವಿ. ದೀಪಕ್, ಕನ್ನಡಪ್ರಭ ಪತ್ರಿಕೆಯ ಉಪ ವ್ಯವಸ್ಥಾಪಕ ಡಿ. ಶ್ರೀಧರ್ ಭಾಗವಹಿಸಿದ್ದರು.

Read more Articles on