ಮಾಂಸಕ್ಕಾಗಿ ಕಡಿದ ಪ್ರಾಣಿಗಳ ಅವಶೇಷ ಚರಂಡಿಯಲ್ಲಿ ಪತ್ತೆ

| Published : Jun 18 2024, 12:56 AM IST

ಮಾಂಸಕ್ಕಾಗಿ ಕಡಿದ ಪ್ರಾಣಿಗಳ ಅವಶೇಷ ಚರಂಡಿಯಲ್ಲಿ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಕಿಡಿಗೇಡಿಗಳು ಪ್ರಾಣಿಗಳನ್ನು ಕಡಿದು ಮಾಂಸ ಮಾಡಿದ ಬಳಿಕ ಉಳಿದ ಅವಶೇಷಗಳನ್ನು ಚರಂಡಿಯಲ್ಲಿ ಎಸೆದುಹೋಗಿದ್ದಾರೆ ಎಂದು ಹೇಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅವಶೇಷಗಳನ್ನು ಬಿಸಾಡಿ ಮಲಿನಗೊಳಿಸಿದ ಬಗ್ಗೆ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್-ಕಲ್ಲಡ್ಕ ರಸ್ತೆಯ ಮಧ್ಯೆ ನರಹರಿ ಪರ್ವತದ ಬಳಿ ಚರಂಡಿಯಲ್ಲಿ ಮಾಂಸಕ್ಕಾಗಿ ಉಪಯೋಗಿಸಿದ ಪ್ರಾಣಿಯ ಅವಶೇಷಗಳು ಪತ್ತೆಯಾಗಿದ್ದು, ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.

ಘಟನೆಯ ಸುದ್ದಿ ತಿಳಿಯುತ್ತಲೇ ಬಂಟ್ವಾಳ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಅನಂತಪದ್ಮನಾಭ ಮತ್ತು ಎಸ್.ಐ‌. ರಾಮಕೃಷ್ಣ ಸ್ಥಳಕ್ಕೆ ಧಾವಿಸಿದರು. ಮೇಲ್ನೋಟಕ್ಕೆ ಇದು ಕೋಳಿ ಹಾಗೂ ಕುರಿ, ಆಡುಗಳ ಅವಶೇಷಗಳಂತೆ ಕಾಣುತ್ತಿದ್ದು, ಪ್ರಸ್ತುತ ಗೋಹತ್ಯೆಯ ಆರೋಪಗಳು ಕೂಡ ಇರುವುದರಿಂದ ಪಶುಸಂಗೋಪನೆ ಇಲಾಖೆಯ ವೈದ್ಯರ ಮುಖೇನ ಪರೀಕ್ಷೆ ನಡೆಸಿದರು.

ಈ ಕುರಿತು ಬಂಟ್ವಾಳ ಶಾಸಕರಿಗೆ ಸ್ಥಳೀಯ ಬಿಜೆಪಿ ಪ್ರಮುಖರೋರ್ವರು ಮಾಹಿತಿ ನೀಡಿದ್ದು, ಶಾಸಕರು ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ, ಯಾವ ಪ್ರಾಣಿ ಎಂಬುದನ್ನು ಖಚಿತ ಪಡಿಸಿಕೊಂಡು ಗೊಂದಲ ಸೃಷ್ಟಿಯಾಗದಂತೆ ಇತ್ಯರ್ಥಪಡಿಸಲು ಸೂಚಿಸಿದ್ದರು. ಪೊಲೀಸರು ಪಶು ವೈದ್ಯರನ್ನು ಕರೆಸಿ ಅವಶೇಷಗಳ ಪರೀಕ್ಷೆ ನಡೆಸಿದಾಗ ಇದು ಕೋಳಿ, ಕುರಿ ಮತ್ತು ಆಡಿನ ಅವಶೇಷ ಎಂಬುದು ಖಾತರಿಯಾಯಿತು.

ಕಿಡಿಗೇಡಿಗಳು ಪ್ರಾಣಿಗಳನ್ನು ಕಡಿದು ಮಾಂಸ ಮಾಡಿದ ಬಳಿಕ ಉಳಿದ ಅವಶೇಷಗಳನ್ನು ಚರಂಡಿಯಲ್ಲಿ ಎಸೆದುಹೋಗಿದ್ದಾರೆ ಎಂದು ಹೇಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅವಶೇಷಗಳನ್ನು ಬಿಸಾಡಿ ಮಲಿನಗೊಳಿಸಿದ ಬಗ್ಗೆ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಗಳ ಅವಶೇಷಗಳನ್ನು ಎಸೆದುಹೋದವರ ಪತ್ತೆ ಕಾರ್ಯಕ್ಕೆ ನಗರ ಠಾಣಾ ಪೋಲೀಸರ ತಂಡ ಮುಂದಾಗಿದೆ.