ಎತ್ತಿನಹೊಳೆ ಯೋಜನೆ ಪೈಪ್ಲೈನ್ ಒಡೆದು ಭಾರಿ ಪ್ರಮಾಣದ ನೀರು ಪೋಲು ಪ್ರಕರಣ ಸಂಬಂಧ ಅಧಿಕಾರಿಗಳು ಪೈಪ್ಲೈನ್ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.126 ಕಿ.ಮೀ. ಅಳವಡಿಸಿರುವ ಪೈಪ್ಲೈನ್ನಲ್ಲಿ ಅಂದಾಜು 20 ಸಾವಿರ ಜಾಯಿಂಟ್ಗಳಿದ್ದು ನೀರಿನ ರಭಸಕ್ಕೆ ಒಂದು ಜಾಯಿಂಟ್ ಒಡೆದು ಬಾರಿ ಪ್ರಮಾಣದ ನೀರು ವೇಸ್ಟ್ ಆಗಿತ್ತು. ಶೀಘ್ರವೇ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಗುಣಮಟ್ಟದ ಕಾಮಗಾರಿ ನಡೆಸಲು ಆದ್ಯತೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಕಲೇಶಪುರ: ಎತ್ತಿನಹೊಳೆ ಯೋಜನೆ ಪೈಪ್ಲೈನ್ ಒಡೆದು ಭಾರಿ ಪ್ರಮಾಣದ ನೀರು ಪೋಲು ಪ್ರಕರಣ ಸಂಬಂಧ ಅಧಿಕಾರಿಗಳು ಪೈಪ್ಲೈನ್ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಹಲಸುಲಿಗೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ಎತ್ತಿನಹೊಳೆ ಯೋಜನೆಯ ಪೈಪ್ಲೈನ್ ಹೊಡೆದು 8 ಕೋಟಿ ಲೀಟರ್ ನೀರು ಪೋಲಾಗಿತ್ತು. ಸ್ಥಳಕ್ಕೆ ಎತ್ತಿನಹೊಳೆ ಯೋಜನೆ ಎಂಜಿನಿಯರ್ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಅಧಿಕಾರಿಗಳು ಪೈಪ್ಲೈನ್ ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಪೈಪ್ನಲ್ಲಿ ಉಳಿದಿರುವ ನೀರನ್ನು ಪೈಪ್ಗೆ ರಂಧ್ರಗಳನ್ನು ಕೊರೆದು ತಗ್ಗು ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ. 126 ಕಿ.ಮೀ. ಅಳವಡಿಸಿರುವ ಪೈಪ್ಲೈನ್ನಲ್ಲಿ ಅಂದಾಜು 20 ಸಾವಿರ ಜಾಯಿಂಟ್ಗಳಿದ್ದು ನೀರಿನ ರಭಸಕ್ಕೆ ಒಂದು ಜಾಯಿಂಟ್ ಒಡೆದು ಬಾರಿ ಪ್ರಮಾಣದ ನೀರು ವೇಸ್ಟ್ ಆಗಿತ್ತು. ಶೀಘ್ರವೇ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಗುಣಮಟ್ಟದ ಕಾಮಗಾರಿ ನಡೆಸಲು ಆದ್ಯತೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.