ಸಾರಾಂಶ
ಮಹಾಲಿಂಗಪುರ ಪಟ್ಟಣದ ವ್ಯಾಪ್ತಿಯ ಕೆಂಗೇರಿಮಡ್ಡಿ ಬಡಾವಣೆಯ ಸರ್ವೇ ನಂ.29/1 ಜಮೀನಿನಲ್ಲಿ ವಾಸಿಸುತ್ತಿರುವ ಸುಮಾರು 520 ಬಡಕುಟುಂಬಗಳಿಗೆ ಸರ್ಕಾರ ಅಧಿಕೃತ ಉತಾರ ನೀಡಬೇಕು ಒತ್ತಾಯಿಸಿದ ಬಡವಾಣೆ ಸದಸ್ಯರು ಸೋಮವಾರ ಬೆಳಗ್ಗೆ ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿಗೃದಲ್ಲಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ವ್ಯಾಪ್ತಿಯ ಕೆಂಗೇರಿಮಡ್ಡಿ ಬಡಾವಣೆಯ ಸರ್ವೇ ನಂ.29/1 ಜಮೀನಿನಲ್ಲಿ ವಾಸಿಸುತ್ತಿರುವ ಸುಮಾರು 520 ಬಡಕುಟುಂಬಗಳಿಗೆ ಸರ್ಕಾರ ಅಧಿಕೃತ ಉತಾರ ನೀಡಬೇಕು ಒತ್ತಾಯಿಸಿದ ಬಡವಾಣೆ ಸದಸ್ಯರು ಸೋಮವಾರ ಬೆಳಗ್ಗೆ ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿಗೃದಲ್ಲಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಶೇಖರ ಅಂಗಡಿ, ಪುರಸಭೆ ವ್ಯಾಪ್ತಿಯ ಕೆಂಗೇರಿಮಡ್ಡಿ ಬಡಾವಣೆ ಕಂದಾಯ ಇಲಾಖೆ ಮತ್ತು ಪುರಸಭೆಗೆ ಸೇರಿದ ಜಾಗದಲ್ಲಿ ಸುಮಾರು 520 ಬಡ ಕುಟುಂಬಗಳು 1-1-2010 ಕ್ಕಿಂತ ಮುಂಚಿತವಾಗಿ ಮನೆ ಅಥವಾ ನಿವೇಶನ ಹೊಂದಿಲ್ಲ. ಕರ್ನಾಟಕ ಭೂಕಂದಾಯ ನಿಯಮಾವಳಿ 1966, ನಿಯಮ 108ಯು ಮತ್ತು 108 ಆರ್.ಡಿ ಅಡಿಯಲ್ಲಿ ಈ ನಿವಾಸಿಗಳು ಆದೇಶ ಪತ್ರಗಳ ಸಕ್ರಮಕ್ಕೆ ಅರ್ಹರಿರುವುದಾಗಿ ತಹಸೀಲ್ದಾರ್ 8-3-2023ರಂದು ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಹಂಗಾಮಿ ಆದೇಶ ಪತ್ರ ನೀಡಿದ್ದಾರೆ.
ಈ ನಿವಾಸಿಗಳು ಹಂಗಾಮಿ ಆದೇಶದ ಷರತ್ತುಗಳಿಗೆ ಅರ್ಹರಿದ್ದಾರೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದರೂ ಆದೇಶದ ಎಲ್ಲಾ ಷರತ್ತುಗಳನ್ನು ಫಲಾನುಭವಿಗಳು ಪೂರೈಸಲು ಸಿದ್ಧರಿದ್ದರೂ ಇದುವರೆಗೂ ಅಧಿಕೃತ ಉತಾರ ನೀಡಿಲ್ಲ.ಇಲ್ಲಿನ ನಿವಾಸಿಗಳು ಕೂಲಿ ಕಾರ್ಮಿಕರು, ನಿರ್ಗತಿಕರು, ಕಡುಬಡವರಾಗಿದ್ದು, ಈ ಪತ್ರ ತಲುಪಿದ ಒಂದು ವಾರದೊಳಗೆ ಎಲ್ಲರಿಗೂ ಅಧಿಕೃತ ಉತಾರ ನೀಡಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಕಂದಾಯ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಸ್ಥಳೀಯ ಮುಖ್ಯಾಧಿಕಾರಿಗೂ ಮನವಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರಾದ ಮಹಾನಿಂಗ ಶಿವಣಗಿ, ಮಹಾದೇವ ಸಾವಂತ, ಶ್ರೀಶೈಲ ದೊಡಮನಿ, ನಾಗಲಿಂಗ ಬಡಗೇರ, ಶಿವಾನಂದ ಹೂಗಾರ, ಸುರೇಶ ಗೌಂಡಿ ಸೇರಿದಂತೆ ಹಲವರು ಇದ್ದರು.