ರೈನೋಸರಸ್ ದುಂಬಿ ನಿರ್ವಹಣೆ ಕಾರ್ಯಕ್ರಮ

| Published : Aug 03 2025, 11:45 PM IST

ಸಾರಾಂಶ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ, ಕೃಷಿ ಮಹಾ ವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಬಿ. ಎಸ್. ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ತಾಲೂಕಿನ ಕೆ ಆಲದಹಳ್ಳಿಯಲ್ಲಿ ತೆಂಗಿನಲ್ಲಿ ರೈನೋಸರಸ್ ದುಂಬಿ ನಿರ್ವಹಣೆ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ರೈನೋಸರಸ್ ದುಂಬಿಯಿಂದ ಆಗುವ ಸಮಸ್ಯೆಗಳು, ಅದರ ಲಕ್ಷಣಗಳು, ಅದರ ಜೀವನ ಚಕ್ರ ಹಾಗೂ ಅದರ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಿಳಿಸಿ ಕೊಡಲಾಯಿತು. ರೈನೋಸರಸ್ ದುಂಬಿಯ ಪ್ರೌಢಾವಸ್ಥೆ, ಮರಿ ಎಲ್ಲವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು.

ಹಾಸನ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ, ಕೃಷಿ ಮಹಾ ವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಬಿ. ಎಸ್. ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ತಾಲೂಕಿನ ಕೆ ಆಲದಹಳ್ಳಿಯಲ್ಲಿ ತೆಂಗಿನಲ್ಲಿ ರೈನೋಸರಸ್ ದುಂಬಿ ನಿರ್ವಹಣೆ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ ಸೌಮ್ಯ ಇ, ಸಹಾಯಕ ಪ್ರಾಧ್ಯಾಪಕರು, ಕೃಷಿ ಕೀಟ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಇವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಶಿಬಿರಾರ್ಥಿಗಳಾದ ಶರತ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರೈನೋಸರಸ್ ದುಂಬಿಯಿಂದ ಆಗುವ ಸಮಸ್ಯೆಗಳು, ಅದರ ಲಕ್ಷಣಗಳು, ಅದರ ಜೀವನ ಚಕ್ರ ಹಾಗೂ ಅದರ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಿಳಿಸಿ ಕೊಡಲಾಯಿತು. ರೈನೋಸರಸ್ ದುಂಬಿಯ ಪ್ರೌಢಾವಸ್ಥೆ, ಮರಿ ಎಲ್ಲವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ರೈತರೆಲ್ಲರೂ ತಮ್ಮ ಸಂದೇಹಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಸೌಮ್ಯ ಅವರೊಂದಿಗೆ ಚರ್ಚಿಸಿ ಉತ್ತರಗಳನ್ನು ಕಂಡುಕೊಂಡರು. ರೈತರ ಉತ್ತಮ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.