ಸಾರಾಂಶ
- ಹೊನ್ನಾಳಿಯಲ್ಲಿ ದಕ್ಷಿಣ ಪ್ರಾಂತ ಕಾರ್ಯಕಾರಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್
- - - ಕನ್ನಡಪ್ರಭ ವಾರ್ತೆ ಹೊನ್ನಾಳಿಸಂಘದ ಶತಮಾನೋತ್ಸವ ಸಂದರ್ಭದಲ್ಲಿ ದೇಶವ್ಯಾಪಿ ಸಂಘದ ಕಾರ್ಯ ಚಟುವಟಿಕೆಗಳು ಮತ್ತಷ್ಟು ವಿಸ್ತಾರ ಆಗಬೇಕು ಎಂದು ಆರ್ಎಸ್ಎಸ್ ದಕ್ಷಿಣ ಪ್ರಾಂತ ಕಾರ್ಯಕಾರಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಹೊನ್ನಾಳಿಯಲ್ಲಿ ಸೋಮವಾರ ವಿಜಯದಶಮಿ ಅಂಗವಾಗಿ ನಡೆದ ಪಥಸಂಚಲನ ನಂತರ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಭಾರತದ ಇತಿಹಾಸ ಸೋಲಿನ ಇತಿಹಾಸ ಅಲ್ಲ. ನಮ್ಮದು ಸೋಲಿನ ಇತಿಹಾಸವೆಂದು ಸುಳ್ಳು ಹೇಳಲಾಯಿತು. ಅದನ್ನೇ ಮಕ್ಕಳಿಗೂ ಪಠ್ಯದಲ್ಲಿ ಕಲಿಸಲಾಯಿತು. ಈಗಲೂ ಕಲಿಸಲಾಗುತ್ತಿದೆ. ದಾಳಿಕೋರ, ದುಷ್ಟ ಅಕ್ಬರ್ನನ್ನು ಗ್ರೇಟ್ ಎಂದು ಕಲಿಸಲಾಗುತ್ತಿದೆ. ಇಂತಹ ದುರ್ದೈವ ಮತ್ತು ಅಸತ್ಯಗಳು ನಮ್ಮ ಮಕ್ಕಳ ಪಠ್ಯದಲ್ಲಿವೆ ಎಂದರು.ತಾಲೂಕು ಸಂಘಚಾಲಕ ಜಿತೇಂದ್ರ ಬಿಸಾಟಿ ಇದ್ದರು. ಆರ್ಎಸ್ಎಸ್ ಜಿಲ್ಲಾ ಕಾರ್ಯವಾಹ ಮಾರುತಿ, ಸ್ವಯಂಸೇವಕರಾದ ಅರುಣ್ಕುಮಾರ್, ಶ್ರೀನಿವಾಸ, ವಾದಿರಾಜ ಕಮರೂರು, ಗುರುಶಂಕರ, ಭರತ್ ಸತ್ತಿಗಿ, ಸಂತೋಷ್, ಶ್ರೀನಿವಾಸ್ ಕಮ್ಮಾರಗಟ್ಟೆ, ಬಸವನಗೌಡ, ಮೊದಲಾದವರಿದ್ದರು.
ಮಳೆ, ಸಿಡಿಲಿನ ಮಧ್ಯೆಯೇ ಪಥ ಸಂಚಲನ:ಹೊನ್ನಾಳಿ ಪಟ್ಟಣದಲ್ಲಿ ಗಣವೇಷಧಾರಿ ಸ್ವಯಂ ಸೇವಕರ ಪಥ ಸಂಚಲನ ಆರಂಭ ಆಗುತ್ತಿದ್ದಂತೆ ಮಳೆಯೂ ಶುರುವಾಯಿತು. ಸುರಿಯುವ ಮಳೆ, ಗುಡುಗು- ಸಿಡಿಲಿನ ಅಬ್ಬರದಲ್ಲೇ ಸ್ವಯಂಸೇವಕರು ಹೆಜ್ಜೆ ಹಾಕಿದರು. ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ಮುಖಂಡ ಎ.ಬಿ. ಹನುಮಂತಪ್ಪ, ಯಕ್ಕನಹಳ್ಳಿ ಜಗದೀಶ, ಶಿವಾನಂದ, ಕೆ.ವಿ. ಚನ್ನಪ್ಪ, ಎಂ.ಆರ್.ಮಹೇಶ್ ಮೊದಲಾದವರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
- - - -21ಎಚ್.ಎಲ್.ಐ1:ಹೊನ್ನಾಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಳೆ ಆರ್ಭಟದಲ್ಲೇ ಸ್ವಯಂ ಸೇವಕರು ಪಥಸಂಚಲನ ನಡೆಸಿದರು.