ಹುಲ್ಲೇಹಳ್ಳಿ ಗ್ರಾಮ ಪಂಚಾಯ್ತಿಗೆ ರುದ್ರಪ್ಪ ಅಧ್ಯಕ್ಷರಾಗಿ ಆಯ್ಕೆ

| Published : Jul 28 2024, 02:02 AM IST

ಹುಲ್ಲೇಹಳ್ಳಿ ಗ್ರಾಮ ಪಂಚಾಯ್ತಿಗೆ ರುದ್ರಪ್ಪ ಅಧ್ಯಕ್ಷರಾಗಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಹುಲ್ಲೇಹಳ್ಳಿಯ ಗ್ರಾಮಪಂಚಾಯ್ತಿ ಹಿಂದಿನ ಅಧ್ಯಕ್ಷರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ಬ್ಯಾಗಡೇಹಳ್ಳಿ ಬಿ.ರುದ್ರಪ್ಪ ಜಯಶೀಲರಾಗಿದ್ದಾರೆಂದು ತಾಲೂಕು ಚುನಾವಣಾ ಕಾರ್ಯ ನಿರ್ವಾಹಕಾಧಿಕಾರಿ ಸಿ.ಆರ್.ಪ್ರವೀಣ್ ಘೋಷಣೆ ಮಾಡಿದರು.

ಬೀರೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್ ಘೋಷಣೆ

ಕನ್ನಡಪ್ರಭ ವಾರ್ತೆ, ಬೀರೂರು

ಹುಲ್ಲೇಹಳ್ಳಿಯ ಗ್ರಾಮಪಂಚಾಯ್ತಿ ಹಿಂದಿನ ಅಧ್ಯಕ್ಷರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ಬ್ಯಾಗಡೇಹಳ್ಳಿ ಬಿ.ರುದ್ರಪ್ಪ ಜಯಶೀಲರಾಗಿದ್ದಾರೆಂದು ತಾಲೂಕು ಚುನಾವಣಾ ಕಾರ್ಯ ನಿರ್ವಾಹಕಾಧಿಕಾರಿ ಸಿ.ಆರ್.ಪ್ರವೀಣ್ ಘೋಷಣೆ ಮಾಡಿದರು.

ನಂತರ ಮಾತನಾಡಿ, ಹಿಂದಿನ ಅಧ್ಯಕ್ಷರಾಗಿದ್ದ ವೈ.ಪಿ. ಲೋಕೇಶ್ ಅವಧಿ ಮುಗಿದ ಹಿನ್ನಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದರಿಂದ ಇಂದು ಚುನಾವಣೆ ನಡೆಯಿತು. ಹುಲ್ಲೇಹಳ್ಳಿ ಪಂಚಾಯ್ತಿಯಲ್ಲಿ 11 ಸದಸ್ಯರ ಬಲವಿದ್ದು , ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದಿದೆ. ಸದಸ್ಯರಾದ ಬಿ.ರುದ್ರಪ್ಪ ಮತ್ತು ನರಸಿಂಹ ಮೂರ್ತಿ ಚುನಾವಣೆಗೆ ಸ್ಪರ್ಧಿಸಿದ್ದರು. ನರಸಿಂಹಮೂರ್ತಿ 4 ಮತ ಪಡೆದರೆ. ರುದ್ರಪ್ಪ 7 ಮತ ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಮಳೆ ನಡುವೆಯೂ ಶಾಂತಯುತವಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು ಎಂದರು.

ನೂತನ ಅಧ್ಯಕ್ಷ ಬ್ಯಾಗಡೇಹಳ್ಳಿ ರುದ್ರಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಇದೇ ಮೊದಲನೇ ಬಾರಿಗೆ ಚುನಾವಣೆ ಪ್ರಕ್ರಿಯೆ ನಡೆದಿರುವುದು. ಹಿಂದೆಲ್ಲ ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ನನಗೆ ಮತದಾನ ಮಾಡಿ ಆರಿಸಿರುವ ಸದಸ್ಯರಿಗೆ ಹಾಗೂ ನನ್ನ ಕ್ಷೇತ್ರದ ಜನತೆಗೆ ಚಿರಋಣಿಯಾಗಿರುತ್ತೇನೆ ಎಂದರು.

ಶಾಸಕ ಕೆ.ಎಸ್. ಆನಂದ್ ಸಹಕಾರ ಪಡೆದು ನಮ್ಮ ಗ್ರಾಮ ಪಂಚಾಯ್ತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಜೊತೆಗೆ ಸ್ವಚ್ಛ ಗ್ರಾಮ ಪಂಚಾಯ್ತಿಗೆ ಬೇಕಾದ ಅನುದಾನ ತರಲು ಪ್ರಯತ್ನಿಸುತ್ತೇನೆ. ಜನರ ಕಷ್ಟ ಕಾರ್ಪಣ್ಯ ತೊಡೆದು ಹಾಕಲು ಕೈಜೋಡಿಸುತ್ತೇನೆ. ಮುಂದಿನ 1.5 ವರ್ಷದ ಅವಧಿಯಲ್ಲಿ ಪಂಚಾಯ್ತಿಯಡಿ ಬರುವ ಗ್ರಾಮಗಳನ್ನು ಆದರ್ಶ ಗ್ರಾಮಗಳತ್ತ ಮಾಡಲು ಎಲ್ಲಾ ಸಹಕಾರ ಪಡೆದು ಕಾರ್ಯನಿರ್ವಹಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮಣಪ್ಪ, ಸದಸ್ಯರಾದ ಶಾಂತಮ್ಮ ಕುಮಾರ್, ನಾಗಮ್ಮ ಮಲ್ಲಾಭೋವಿ, ಪಿಡಿಒ ಮಂಜುನಾಥ್ ಸೇರಿದಂತೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.೨೬ ಬೀರೂರು ೧

ಬೀರೂರು ಹೋಬಳಿ ಹುಲ್ಲೇಹಳ್ಳಿ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಬ್ಯಾಗಡೇಹಳ್ಳಿ ರುದ್ರಪ್ಪನವರಿಗೆ ಚುನಾವಣಾ ಅಧಿಕಾರಿ ಇಒ ಸಿ.ಆರ್. ಪ್ರವೀಣ್ ಆಯ್ಕೆ ಪ್ರಮಾಣ ಪತ್ರ ವಿತರಿಸಿದರು.