ಜಿಲ್ಲೆಯಾದ್ಯಂತ ಸಂಭ್ರಮದಿಂದ ಸಂಕ್ರಾಂತಿ ಆಚರಣೆ

| Published : Jan 16 2024, 01:45 AM IST

ಸಾರಾಂಶ

ಚಾಮರಾಜನಗರಸೂರ್ಯಾರಾಧನೆಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸುಗ್ಗಿಯ ಕಾಲದ ಹಬ್ಬವಾದ ಈ ಹಬ್ಬದಲ್ಲಿ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಮಾಡಿ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡಿದರು. ಎಳ್ಳು, ಬೆಲ್ಲ ಸಕ್ಕರೆ ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚಿ ಸಂಭ್ರಮಿಸಿದರು. ಮನೆ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕುಳ್ಳಿರಿಸಿ, ಆರತಿ ಮಾಡಿ, ಎಳ್ಳು ಬೆಲ್ಲ ಬೀರಲಾಯಿತು. ಮನೆಗಳ ಮುಂದೆ ಮಾವಿನಸೊಪ್ಪು, ಅನ್ನಸೊಪ್ಪು ಕಟ್ಟಲಾಗಿತ್ತು.

ಮನೆ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕುಳ್ಳಿರಿಸಿ ಆರತಿ ಮಾಡಿ ಎಳ್ಳು ಬೆಲ್ಲ ಬೀರಿ ಸಂಭ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರಸೂರ್ಯಾರಾಧನೆಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸುಗ್ಗಿಯ ಕಾಲದ ಹಬ್ಬವಾದ ಈ ಹಬ್ಬದಲ್ಲಿ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಮಾಡಿ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡಿದರು. ಎಳ್ಳು, ಬೆಲ್ಲ ಸಕ್ಕರೆ ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚಿ ಸಂಭ್ರಮಿಸಿದರು. ಮನೆ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕುಳ್ಳಿರಿಸಿ, ಆರತಿ ಮಾಡಿ, ಎಳ್ಳು ಬೆಲ್ಲ ಬೀರಲಾಯಿತು. ಮನೆಗಳ ಮುಂದೆ ಮಾವಿನಸೊಪ್ಪು, ಅನ್ನಸೊಪ್ಪು ಕಟ್ಟಲಾಗಿತ್ತು.ಗ್ರಾಮಾಂತರ ಪ್ರದೇಶದ ಕೆಲ ಗ್ರಾಮಗಳಲ್ಲಿ ರೈತಾಪಿ ವರ್ಗ ದನಕರುಗಳಿಗೆ ಮೈ ತೊಳೆದು, ಸಿಂಗರಿಸಿ ಭೂತಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸಿದರು.ದೇವಸ್ಥಾನಗಳಲ್ಲಿ ದೇವರನ್ನು ವಿಶೇಷವಾಗಿ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು, ಧರ್ನುಮಾಸದ ಕೊನೆಯ ದಿನವು ಇದಾದ್ದರಿಂದ ಮುಂಜಾನೆಯೇ ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ನಗರದ ಹರಳುಕೋಟೆ ಜನಾರ್ಧನಸ್ವಾಮಿ ದೇವಸ್ಥಾನ ಮುಂಭಾಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗೋಪೂಜೆ ನಡೆಯಿತು ನ್ಯಾಯಾಧೀಶರಾದ ಶ್ರೀಧರ್ ಮತ್ತು ಚಂಪಾರವರು ಕುಟುಂಬ ಸಮೇತ ಗೋಪೂಜೆ ಮಾಡಿ, ಎಲ್ಲರಿಗೂ ಒಳ್ಳೆಯದನ್ನ ಬಯಸಿ ಮಳೆ ಬೆಳೆ ಸಮೃದ್ಧಿ ಆಗಲಿ ಎಂದು ಹಾಗೂ ದೇಶ ಕಾಯೋ ಯೋಧರು ಸುರಕ್ಷಿತವಾಗಿರಲಿ ಎಂದು ಶ್ರೀ ಜನಾರ್ದನ ದೇವರಲ್ಲಿ ಪ್ರಾರ್ಥಿಸಿದರು. ಅರ್ಚಕ ಅನಂತಪ್ರಸಾದ್ ಜನಾರ್ದನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ನೆರವೇರಿಸಿದರು. ನಗರದ ಶ್ರೀದೇವಿ ಭೂದೇವಿಸಮೇತ ಕಾಡು ನಾರಾಯಾಣಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ರಾಮಚಂದ್ರು ನೇತೃತ್ಬದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀದೇವಿ ಭೂದೇವಿ ನಾರಾಯಣ ಸ್ವಾಮಿಗೆ ಶ್ರೀನಿವಾಸನ ಅಲಂಕಾರ ಮಾಡಿ, ಮೆರವಣಿಗೆ ಮಾಡಲಾಯಿತು. ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಎಳ್ಳು ಬೆಲ್ಲ ಪ್ರಸಾದ ಪ್ರಸಾದ ವಿನಿಯೋಗ ಮಾಡಲಾಯಿತು.ಸುಗ್ಗಿ ಜಾತ್ರೆ:

ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿಗೆ ಸೇರಿದ ಕರಡಿಹಳ್ಳದದಲ್ಲಿ ಕುಂಬೇಶ್ವರ ಸ್ವಾಮಿಯ ಸುಗ್ಗಿ ಜಾತ್ರೆಯು ಅದ್ಧೂರಿಯಾಗಿ ನಡೆಯಿತು. ಸಂಕ್ರಾಂತಿ ಹಬ್ಬದಂದು ಪ್ರತಿವರ್ಷ ಕುಂಬೇಶ್ವರ ಕಾಲೋನಿಯ ಸಮೀಪದ ಕರಡಿಹಳ್ಳದ ಬಳಿ ಇರುವ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ಸುಗ್ಗಿ ಜಾತ್ರೆ ನಡೆಯುತ್ತಿದೆ.ಬೆಳಗ್ಗೆ ದೇವಸ್ಥಾನದ ಹತ್ತಿರವಿರುವ ಸುವರ್ಣಾವತಿ:

ನದಿಯ ನೀರಿನಲ್ಲಿ ಮಹದೇಶ್ವರ ವಿಗ್ರಹ ಮೂರ್ತಿಗೆ ಅಭಿಷೇಕ ಮಾಡಿ ನಂತರ ಹುಲಿವಾಹನಕ್ಕೆ ಪೂಜೆ ಸಲ್ಲಿಸಿ ಸತ್ತಿಗೆ, ಡೊಳ್ಳುಕುಳಿತ ದೊಂದಿಗೆ ಮರವಣಿಗೆಯಲ್ಲಿ ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ರೈತರು ತಾವು ಬೆಳೆದ ಧಾನ್ಯವನ್ನು ದೇವರಿಗೆ ಅರ್ಪಿಸಿದರು. ಸಂಕಾಂತ್ರಿ ಜಾತ್ರೆಗೆ ಬೆಂಗಳೂರು, ಮೈಸೂರು, ಹಾಗೂ ಚಾಮರಾಜನಗರ ಜಿಲ್ಲೆಯ ಸುತ್ತ ಮುತ್ತಲಿನ ರೈತರು, ಭಕ್ತರು ಭಾಗವಹಿಸಿದ್ದರು. ನಂತರ ಪ್ರಸಾದ ವಿನಿಯೋಗ ನಡೆಯಿತು.ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ವಾಟಾಳ್ ಬಾಬು, ನಾಗರಾಜು, ಪುಟ್ಟಸ್ವಾಮಿ, ಸಿದ್ದಪ್ಪ, ಋಷಬೇಂದ್ರ, ಕುಮಾರ, ವೆಂಕಟಶೆಟ್ಟಿ, ರಾಚಪ್ಪ, ಮಂದೇಶ್, ಕಮಲೇಶ್, ಕಾರ್ ನಾಗೇಶ್, ನಾರಾಯಣ, ಶೇಷಪ್ಪ, ಕುಂಬೇಶ್ವರ ಯುವಕರ ಸಂಘ, ೮ ಗ್ರಾಮದ ಯಜಮಾನರು ಹಾಗೂ ಸದಸ್ಯರು ಭಾಗವಹಿಸಿದ್ದರು.