ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಸ್ವಾತಂತ್ರ್ಯ ನಂತರ ಹಲವು ಸಮುದಾಯಗಳು ಸಂಘಟಿತರಾದ್ದರಿಂದ ಹಲವು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಸಮುದಾಯದ ಸಂಘಟನೆಗಳಲ್ಲಿ ಗಟ್ಟಿಧ್ವನಿಯ ಕೊರತೆಯ ಪರಿಣಾಮ ಪೂರ್ಣ ಪ್ರಮಾಣದ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಇಂದಿಗೂ ಸಾಧ್ಯವಾಗಿಲ್ಲ ಎಂದು ರಾಜ್ಯ ವಾಯು ಮಾಲಿನ್ಯ ಮಂಡಳಿ ಅಧ್ಯಕ್ಷರು ಹಾಗೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಥಮ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ನೌಕರರ ಪದೋನ್ನತಿ, ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡದಿರುವುದು ಸೇರಿದಂತೆ ಹಲವು ದೂರುಗಳನ್ನು ನನ್ನ ಬಳಿಗೆ ಹಲವರು ತರುತ್ತಾರೆ. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ನಾವು ಅರಿಯದಿದ್ದರೆ ನಾವಿನ್ನೂ ಎಲ್ಲಿದ್ದೇವೆ ಎಂದು ಅವಲೋಕನ ಮಾಡಿಕೊಳ್ಳಬೇಕಿದೆ ಎಂದರು.ಸಂವಿಧಾನದ ಹಕ್ಕನ್ನು ಅರ್ಥಮಾಡಿಕೊಳ್ಳದ ಹೊರತು ಸಮಸ್ಯೆ ಬಗೆಹರಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಎಸ್ಸಿ,ಎಸ್ಟಿ ನೌಕರರ ಪದನ್ನೋತಿ ವಿಷಯವಾಗಿ ರಾಜ್ಯಾಧ್ಯಕ್ಷರು ನನ್ನ ಗಮನ ಸೆಳೆದಿದ್ದಾರೆ. ಆದರೆ ಸಾಂವಿಧಾನಿಕ ಹಕ್ಕನ್ನೇ ಮೊದಲು ಅರ್ಥಮಾಡಿಕೊಂಡಿಲ್ಲ. ನನ್ನ ಸಮುದಾಯದವರು ಉನ್ನತ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಉದ್ಯೋಗ ಪಡೆದು, ವಿದ್ಯಾವಂತ ಸಮುದಾಯ ನನ್ನ ಜನರನ್ನ ರಕ್ಷಣೆ ಮಾಡುತ್ತಾರೆ. ನನ್ನ ಹೆಜ್ಜೆ ಗುರುತನ್ನು ನನ್ನ ಜನರಿಗೆ ತೋರಿಸುತ್ತಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಭಾವಿಸಿದ್ದರು. ಆದರೆ ಇಂದು ವಿದ್ಯಾವಂತರು, ತಿಳುವಳಿಕೆ ಯುಳ್ಳವರು, ಉದ್ಯೋಗಸ್ಥರು ಬಾಬಾ ಸಾಹೇಬರ ಹೆಸರಿನಲ್ಲಿ ಫಲಾನುಭವಿಗಳಾಗಿದ್ದಾರೆ ಎಂದರು.
ಅಂಬೇಡ್ಕರ್ ಅವರ ಆಶಯಗಳನ್ನು ಮೈಗೂಡಿಸಿಕೊಂಡು ಸಮುದಾಯಕ್ಕೆ ಕೊಡುಗೆ ನೀಡಬೇಕು. ಇಂದು ಸಮಾನ ಶಿಕ್ಷಣ ಸಿಗುತ್ತಿಲ್ಲ, ವಿದ್ಯಾವಂತರಾಗಿ ಮೀಸಲಾತಿ ಪಡೆದು ಉದ್ಯೋಗ ಪಡೆದವರು ನಿಮ್ಮ ಊರಿಗೆ ನಿಮ್ಮ ಪಕ್ಕದ ಮನೆಗಳಿಗೆ ನಿಮ್ಮಗಳ ಕೊಡುಗೆ ಏನು ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ, ನಮ್ಮಲ್ಲೆ ವೈಫಲ್ಯಗಳನ್ನು ಇಟ್ಟುಕೊಂಡು ಆಡಂಭರದ ಆಚರಣೆ ಮಾಡುವುದು ಬೇಡ ಎಂದು ಕಿವಿಮಾತು ಹೇಳಿದರು.ನಗರಸಭೆ ಅಧ್ಯಕ್ಷ ಕೆ.ಶೇಷದ್ರಿ (ಶಶಿ) ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾವೇಶದಲ್ಲಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ಪದಾಧಿಕಾರಿಗಳು ಬಹಳ ನೋವಿನಿಂದ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಮೊದಲು ನಿಮ್ಮಲ್ಲಿ ಶಿಕ್ಷಣ, ಸಂಘಟನೆ, ಹೋರಾಟ ಮೈಗೂಡಿಸಿಕೊಳ್ಳಬೇಕಿದೆ. ಸಂಘಟನೆ ಮತ್ತ? ಸಕ್ರಿಯವಾಗಬೇಕಿದೆ ಎಂದರು.ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಮಾತನಾಡಿ, ಸಮಾವೇಶ ಆಡಂಬರವಲ್ಲ, ಬದಲಿಗೆ ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯುವುದಾಗಿದೆ. ಸಂಘಟನೆ ರಾಜಕೀಯ ಸಂಘಟನೆಯಾಗದೆ ಕಳೆದ 20 ವರ್ಷಗಳಿಂದ ಸಕ್ರಿಯವಾಗಿ ರಾಜ್ಯಾದ್ಯಂತ ನಮ್ಮ ನೋವುಗಳಿಗಾಗಿ ಕೆಲಸ ನಿರ್ವಹಿಸುತ್ತಿದೆ. ನೋವು ಪರಿಹರಿಸಲು ಅರ್ಜಿ ಪಡೆಯುವವರಾಗಬೇಕೇ ಹೊರತು ಅರ್ಜಿ ಕೊಡುವವರಾಗಬಾರದು, ಆಗಾಗಿ ಎಲ್ಲರೂ ಎಚ್ಚೆತ್ತು ಪ್ರಜ್ಞಾವಂತರಾಗಿ ಸಂಘಟನೆಗೆ ಬಲ ತುಂಬಿ ಎಂದರು.
ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್.ಜೈಪ್ರಕಾಶ್ (ಜೆ.ಪಿ) ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ನೌಕರರ ಸಂಘದಲ್ಲಿ ಮೀಸಲಾತಿ ಸೇರಿದಂತೆ ನಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಸ್ವಾಭಿಮಾನದ ಸಮಾವೇಶ ಆಯೋಜನೆ ಮಾಡಿದ್ದೇವೆ. ನಮಗೆ ಸಹಕಾರ ಕೊಟ್ಟ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ಸಮಾವೇಶದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ ಮಾತನಾಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ರಾಜ್ಯ ಕಾರ್ಯದರ್ಶಿ ಅಶ್ವಿನಿ, ಡಿಡಿಪಿಐ ಬಸವರಾಜೇಗೌಡ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ವಿ.ಶಿವಕುಮಾರ್, ಸಹಾಯಕ ನಿರ್ದೇಶಕ ಡಾ. ಕುಮಾರ್, ಕಾರಾಗೃಹ ಅದೀಕ್ಷಕ ರಾಕೇಶ್ ಕಾಂಬಳೆ, ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪುಂಡರೀಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಮ್ಮ, ಸಮನ್ವಯ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಉಮೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಆರ್.ಸಿ. ವಿಜಯ್ ಕುಮಾರ್, ಜಿಲ್ಲಾ ಖಜಾಂಚಿ ಸುರೇಂದ್ರಕುಮಾರ್. ಎಸ್, ತಾಲೂಕು ಅಧ್ಯಕ್ಷ ಪುರು?ತ್ತಮ್, ಗೌರವ ಸಲಹೆಗಾರ ಗವಿಯಯ್ಯ, ತಾಲೂಕು ಅಧ್ಯಕ್ಷರಾದ ಶಂಕರಪ್ಪ, ರೇಣುಕಾಸ್ವಾಮಿ, ಜಯಣ್ಣ, ಸುರೇಂದ್ರ, ಶ್ರೀನಿವಾಸ ಮೂರ್ತಿ, ಪೌರ ಕಾರ್ಮಿಕ ಸೇವಾ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜು, ಜಿಲ್ಲಾಧ್ಯಕ್ಷ ಕೊಲ್ಲಾಪುರಿ, ಶಾಖಾ ಅಧ್ಯಕ್ಷ ದೇವೇಂದ್ರ ಸೇರಿದಂತೆ ಹಲವರು ಇದ್ದರು. ಕೋಟ್ :ನಮ್ಮ ಸರ್ಕಾರದ ಒಬ್ಬ ಸಚಿವರು ಮುಖ್ಯಮಂತ್ರಿಗಳಿಗೆ ತಪ್ಪು ಸಂದೇಶ ನೀಡಿದ್ದರು. ಅರಣ್ಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಎಸ್ಸಿ,ಎಸ್ಟಿ ನೌಕರ ಸಿಬ್ಬಂದಿಗೆ ಮೀಸಲಾತಿ ಕೊಡಿಸುವ ವಿಷಯವಾಗಿ ಶ್ರಮಿಸುತ್ತಿದ್ದೇನೆ. ಕರ್ನಾಟಕದ ಒಬ್ಬ ಶಾಸಕರು ನನಗೆ ಸಹಕಾರ ಕೊಡುತ್ತಿಲ್ಲ. ಸದನ ಸಮಿತಿಯ ಜವಾಬ್ದಾರಿ ಅರಿತು ಅಧ್ಯಯನ ಮಾಡಿ ಮಾಹಿತಿ ಪಡೆಯುತ್ತಿದ್ದೇನೆ.- ಪಿ.ಎಂ.ನರೇಂದ್ರಸ್ವಾಮಿ, ಶಾಸಕ. ಬಾಕ್ಸ್ ಜಿಲ್ಲೆಯ ಜನಪ್ರತಿನಿಧಿಗಳು ಗೈರಿಗೆ ಅಸಮಾಧಾನಸಮಾವೇಶಕ್ಕೆ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ ಅವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಸಿದರು. ಆದರೆ ಜಿಲ್ಲೆಯ ಜನಪ್ರತಿನಿಧಿಗಳಾದ ಡಿಸಿಎಂ ಡಿ.ಕೆ.ಶಿವಕುಮಾರ್, ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್, ಸಂಸದ ಡಾ.ಸಿ.ಎನ್.ಮಂಜುನಾಥ್ ಕಾರ್ಯಕ್ರಮಕ್ಕೆ ಗೈರಾಗಿರುವುದಕ್ಕೆ ಸಂಘಟಕರು ವೇದಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆಗೂ ಸಹ ವೇದಿಕೆ ಸಾಕ್ಷಿಯಾಯಿತು.ಬಾಕ್ಸ್ಒಒಡಿಗೆ ಮೀನಮೇಷ: ಜಿಲ್ಲಾಡಳಿತದ ವಿರುದ್ಧ ಅಸಮಾಧಾನಜಿಲ್ಲೆಯ ಸರ್ಕಾರಿ ಎಸ್.ಸಿ ಮತ್ತು ಎಸ್.ಟಿ ನೌಕರರು ಭಾಗವಹಿಸಲು ಅನುಕೂಲವಾಗುವಂತೆ ಒ.ಒ.ಡಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಒಒಡಿ ನೀಡದೆ ದಲಿತ ವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಮತ್ತು ಜಿಲ್ಲಾಧ್ಯಕ್ಷ ಎಂ.ಎಸ್. ಜಯಪ್ರಕಾಶ್ ತಮ್ಮ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಡಿಪಿಆರ್ ಮತ್ತು ಎಫ್.ಡಿ.ಯಲ್ಲಿ ನಾವು ಅನುಮತಿ ಪಡೆದಿದ್ದರೂ ಜಿಲ್ಲಾಧಿಕಾರಿ ಒ.ಒ.ಡಿ ಕೊಟ್ಟಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಒ.ಒ.ಡಿ ನೀಡುವ ಕುರಿತು ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಗಣಿಸಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೂ, ಜಿಲ್ಲಾಧಿಕಾರಿ ಒ.ಒ.ಡಿ ಕೊಡದೆ ದಲಿತ ವಿರೋಧಿ ನೀತಿ ಪ್ರದರ್ಶಿಸಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ವಿಜಯಕುಮಾರ್ ತಿಳಿಸಿದರು.ಪೊಟೋ೧೩ಸಿಪಿಟ೨: ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಜಿಲ್ಲಾ ಮಟ್ಟದ ಪ್ರಥಮ ಸ್ವಾಭಿಮಾನ ಸಮಾವೇಶವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅದ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಉದ್ಘಾಟಿಸಿದರು.
ಪೊಟೋ೧೩ಸಿಪಿಟಿ೩: ಸರ್ಕಾರಿ ಎಸ್ಸಿಎಸ್ಟಿ ನೌಕರರ ಜಿಲ್ಲಾ ಮಟ್ಟದ ಪ್ರಥಮ ಸ್ವಾಭಿಮಾನ ಸಮಾವೇಶದಲ್ಲಿ ಗಣ್ಯರು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬುದ್ಧನ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದರು.