ಶರಣ ಸಾಹಿತ್ಯ ಬದುಕಿನ ಸಂವಿಧಾನ

| Published : Nov 09 2025, 01:45 AM IST

ಸಾರಾಂಶ

ಭಾರತ ಅನೇಕ ಸಾಧು ಸಂತರು, ಕವಿಗಳು, ದಾರ್ಶನಿಕರು, ಸಮಾಜ ಸುಧಾರಕರು ನಡೆದಾಡಿದ ಪುಣ್ಯಭೂಮಿಯಾಗಿದೆ. ಇವರೆಲ್ಲರೂ ಸಮಾಜದಲ್ಲಿ ಸಮಾನತೆ ತರಲು, ಮಾನವೀಯ ಮೌಲ್ಯಗಳನ್ನು ಬಿತ್ತಲು ಶ್ರಮಿಸಿದವರು ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಎಸ್. ಮಂಜುನಾಥ ಕುರ್ಕಿ ಹೇಳಿದ್ದಾರೆ.

- ಶ.ಸಾ.ಪ. ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಜುನಾಥ ಕುರ್ಕಿ

- - -

ಚನ್ನಗಿರಿ: ಭಾರತ ಅನೇಕ ಸಾಧು ಸಂತರು, ಕವಿಗಳು, ದಾರ್ಶನಿಕರು, ಸಮಾಜ ಸುಧಾರಕರು ನಡೆದಾಡಿದ ಪುಣ್ಯಭೂಮಿಯಾಗಿದೆ. ಇವರೆಲ್ಲರೂ ಸಮಾಜದಲ್ಲಿ ಸಮಾನತೆ ತರಲು, ಮಾನವೀಯ ಮೌಲ್ಯಗಳನ್ನು ಬಿತ್ತಲು ಶ್ರಮಿಸಿದವರು ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಎಸ್. ಮಂಜುನಾಥ ಕುರ್ಕಿ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು "ಸಾರ್ವಜನಿಕ ಕ್ಷೇತ್ರದಲ್ಲಿ ಸಾಮಾಜಿಕ ಮೌಲ್ಯಗಳು " ವಿಷಯ ಕುರಿತಂತೆ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಜಾಗತೀಕರಣ, ಉದಾರೀಕರಣ ನೀತಿಯಿಂದ ರಾಜಕೀಯ, ಶಿಕ್ಷಣ, ಧಾರ್ಮಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮನುಷ್ಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಶರಣ ಸಾಹಿತ್ಯವು ಬದುಕಿನ ಸಂವಿಧಾನವಾಗಿದೆ. ಇದನ್ನು ಅಧ್ಯಯನ ಮಾಡಿ ಮಾನವರು ಕಳೆದುಕೊಂಡಿರುವ ಮೌಲ್ಯವನ್ನು ಪಡೆದುಕೊಂಡು ಜೀವಿಸಬೇಕು ಎಂದರು.

ತಾಲೂಕು ಶ.ಸಾ.ಪ. ಅಧ್ಯಕ್ಷ ಎಂ.ಎಸ್. ಮಲ್ಲೇಶಪ್ಪ ಮಾತನಾಡಿ, ವಚನ ಸಾಹಿತ್ಯವನ್ನು ಜಗತ್ತಿನಾದ್ಯಂತ ಪರಿಚಯಿಸುವ ಉದ್ದೇಶದಿಂದ 1986ರಲ್ಲಿ ಹುಟ್ಟಿಕೊಂಡ ಈ ಪರಿಷತ್ ಅಲ್ಲಿಂದ ಇಲ್ಲಿಯವರೆಗೆ ದತ್ತಿ ಉಪನ್ಯಾಸಗಳನ್ನು ಮಾಡುತ್ತ ಶರಣರ ಆಚಾರ, ವಿಚಾರಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಚನ್ನಗಿರಿ ತಾಲೂಕಿನಲ್ಲಿ 46 ಜನ ದತ್ತಿ ದಾನಿಗಳಿದ್ದು, ದಾವಣಗೆರೆ ಜಿಲ್ಲೆಯಲ್ಲಿಯೇ ಚನ್ನಗಿರಿ ತಾಲೂಕಿನಲ್ಲಿ ಹೆಚ್ಚು ದತ್ತಿ ದಾನಿಗಳು ಇರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಜ್ಜನಪ್ಪ, ಎಚ್.ಎಸ್. ಮಲ್ಲಿಕಾರ್ಜುನಪ್ಪ, ಜಯದೇವಯ್ಯ, ಸೋಮಶೇಖರಪ್ಪ, ಆರ್.ಎಸ್. ಮಲ್ಲಿಕಾರ್ಜುನ, ಎಂ.ಯು. ಚನ್ನಬಸಪ್ಪ, ದಂತವೈದ್ಯ ಸಿದ್ದಲಿಂಗ ಸ್ವಾಮಿ, ಜಿ.ಚಿನ್ನಸ್ವಾಮಿ, ಚ.ಮ. ಗುರುಸಿದ್ದಯ್ಯ ಮೊದಲಾದವರು ಹಾಜರಿದ್ದರು.

- - -

-8ಕೆಸಿಎನ್‌ಜಿ2:

ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಎಚ್.ಎಸ್. ಮಂಜುನಾಥ ಕುರ್ಕಿ ಉದ್ಘಾಸಿದರು.