ತನು ಸೇವೆಗೆ, ಮನ ಶುದ್ಧ ಭಾವನೆಗೆ, ಧನ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಸ್ವಾರ್ಥಕ್ಕಾಗಿ ಬದುಕದೆ, ಕಾಯಕದ ಮೂಲಕ ಸಂಪಾದಿಸಿ, ದಾಸೋಹದ ಮೂಲಕ ಸಮಾಜಕ್ಕೆಅರ್ಪಿಸುವುದೇ ಸಾರ್ಥಕ ಜೀವನ. ಬಸವಣ್ಣನವರ ದೃಷ್ಟಿಯಲ್ಲಿ ದಾಸೋಹವು ದಾನಕ್ಕಿಂತ ವಿಶಾಲವಾದುದು. ಅದು ಸೇವೆ, ಸಮಾನತೆ, ಹಂಚಿಕೆ ಮತ್ತು ಮಾನವೀಯತೆಯ ಜೀವನ ತತ್ವವಾಗಿದೆ. ಬಸವಣ್ಣನವರು ದೇವಾಲಯ ಕಟ್ಟಲು ಸಾಧ್ಯವಿಲ್ಲದ ಸಾಮಾನ್ಯ ಮನುಷ್ಯ ನಿಗೂಢ . ತನ್ನ ದೇಹವೇ ದೇವಾಲಯ ಎಂದು ಹೇಳುತ್ತಾರೆ. ದೇವರನ್ನು ಕಾಣಲು ಹಣ, ಸಂಪತ್ತು ಅಥವಾ ದೊಡ್ಡ ದೇವಾಲಯದ ಅವಶ್ಯಕತೆ ಇಲ್ಲ. ಶುದ್ಧ ಮನಸ್ಸು ಮತ್ತು ಸತ್ಕಾರ್ಯವೇ ಮುಖ್ಯ ಎಂಬ ಸಂದೇಶ ಸಾರಿದರು ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಬಸವಣ್ಣನವರು ಆಡಂಬರದ ಪೂಜೆಯ ಬದಲು ಸತ್ಯ, ಪ್ರಾಮಾಣಿಕತೆ ಮತ್ತು ಸತ್ಕಾರ್ಯಕ್ಕೆ ಅವರು ಮಹತ್ವ ನೀಡಿದ್ದರು. ಮನುಷ್ಯನು ಕಳ್ಳತನ, ಹಿಂಸೆ, ಸುಳ್ಳು, ದ್ವೇಷ, ಅಹಂಕಾರ ಮತ್ತು ಪರನಿಂದನೆಗಳಿಂದ ದೂರವಿರಬೇಕು ಎಂದು ಬೋಧಿಸಿದ್ದಾರೆ ಎಂದು ಸೀಗೆ ನಾಡಿನ ಮಳೆಮಲ್ಲೇಶ್ವರ ಬೆಟ್ಟದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಅವರು ಹಾಸನದ ಬಸವಕೇಂದ್ರ ಮತ್ತು ಬಸವ ಸಮಿತಿ ವತಿಯಿಂದ ನಗರದಯುನೈಟೆಡ್ ಅಕಾಡೆಮಿಯ ಜ್ಞಾನ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಚಿಂತನಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣನವರು ಹೊರಗಿನ ಆಡಂಬರಕ್ಕಿಂತ ಒಳಗಿನ ಶುದ್ಧತೆಗೆ ಹೆಚ್ಚಿನ ಮಹತ್ವ ನೀಡಿದರು. ಮನುಷ್ಯನ ದೇಹ ಮತ್ತು ಮನಸ್ಸು ಪವಿತ್ರವಾಗಿದ್ದರೆ ಅದೇ ನಿಜವಾದ ದೇವಾಲಯ ಎಂಬುದು ಇದರ ಅರ್ಥ. ಇಂತಹ ನಡತೆಯುಳ್ಳ ಜನರಿಂದ ಕೂಡಿದ ನೈತಿಕ ಮತ್ತು ಶಾಂತಿಯುತ ಸಮಾಜವನ್ನು ಅವರು ಬಯಸಿದ್ದರು. ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ ಮುಂತಾದ ಶರಣೆಯರ ಉಪಸ್ಥಿತಿ ಇದಕ್ಕೆ ಸಾಕ್ಷಿಯಾಗಿದೆ. ತನು ಸೇವೆಗೆ, ಮನ ಶುದ್ಧ ಭಾವನೆಗೆ, ಧನ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಸ್ವಾರ್ಥಕ್ಕಾಗಿ ಬದುಕದೆ, ಕಾಯಕದ ಮೂಲಕ ಸಂಪಾದಿಸಿ, ದಾಸೋಹದ ಮೂಲಕ ಸಮಾಜಕ್ಕೆಅರ್ಪಿಸುವುದೇ ಸಾರ್ಥಕ ಜೀವನ. ಬಸವಣ್ಣನವರ ದೃಷ್ಟಿಯಲ್ಲಿ ದಾಸೋಹವು ದಾನಕ್ಕಿಂತ ವಿಶಾಲವಾದುದು. ಅದು ಸೇವೆ, ಸಮಾನತೆ, ಹಂಚಿಕೆ ಮತ್ತು ಮಾನವೀಯತೆಯ ಜೀವನ ತತ್ವವಾಗಿದೆ. ಬಸವಣ್ಣನವರು ದೇವಾಲಯ ಕಟ್ಟಲು ಸಾಧ್ಯವಿಲ್ಲದ ಸಾಮಾನ್ಯ ಮನುಷ್ಯ ನಿಗೂಢ . ತನ್ನ ದೇಹವೇ ದೇವಾಲಯ ಎಂದು ಹೇಳುತ್ತಾರೆ. ದೇವರನ್ನು ಕಾಣಲು ಹಣ, ಸಂಪತ್ತು ಅಥವಾ ದೊಡ್ಡ ದೇವಾಲಯದ ಅವಶ್ಯಕತೆ ಇಲ್ಲ. ಶುದ್ಧ ಮನಸ್ಸು ಮತ್ತು ಸತ್ಕಾರ್ಯವೇ ಮುಖ್ಯ ಎಂಬ ಸಂದೇಶ ಸಾರಿದರು ಎಂದರು.ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ಎಸ್. ಉಪ್ಪಾರ್ ಮಾತನಾಡಿ, ಬಸವಣ್ಣನವರು ಕೇವಲ ಭಕ್ತಿಯನ್ನಷ್ಟೇ ಬೋಧಿಸಿದವರಲ್ಲ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹೊಸ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದ ಮಹಾನ್ ಸಮಾಜ ಸುಧಾರಕರು. ಅವರ ವಚನಗಳಲ್ಲಿ ಅವರು ಬಯಸಿದ ಸಮಾಜದ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಬಸವಣ್ಣನವರು ಕಟ್ಟಬಯಸಿದ ಸಮಾಜವು ಜಾತಿ-ಭೇದವಿಲ್ಲದ, ಮೇಲು-ಕೀಳುಗಳಿಲ್ಲದ, ಸ್ತ್ರೀ-ಪುರುಷ ಸಮಾನತೆಯ, ಕಾಯಕಕ್ಕೆಗೌರವ ನೀಡುವ, ದಾಸೋಹವನ್ನು ಪಾಲಿಸುವ, ಸತ್ಯ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜವಾಗಿತ್ತು. ಅಲ್ಲಿ ರೈತ, ಕಮ್ಮಾರ, ಕುಂಬಾರ, ಚಮ್ಮಾರ, ನೇಕಾರ, ಮಹಿಳೆ, ಜ್ಞಾನಿ-ಎಲ್ಲರೂ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಇದರಿಂದ ವಿಚಾರ ಸ್ವಾತಂತ್ರ್ಯಮತ್ತು ಸಮಾನತೆಯ ಸಮಾಜದ ಕಲ್ಪನೆ ಮೂಡಿತು. ವಿವಿಧ ಕಾಯಕ ಮಾಡುವ ಜನರನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯಕ್ಕೆ ಅವಕಾಶ ನೀಡಿದರು. ಅನುಭವ ಮಂಟಪವು ಜಾತಿ, ವರ್ಗ ಮತ್ತು ಲಿಂಗದ ಭೇದಗಳನ್ನು ಮೀರಿ ಚರ್ಚೆ ನಡೆಸುವ ವೇದಿಕೆಯಾಯಿತು.ಅವರ ಚಿಂತನೆಯ ಸಾರವನ್ನು ಕಾಯಕವೇ ಕೈಲಾಸ ಮತ್ತು ದಾಸೋಹ ಎಂಬ ಎರಡು ಪ್ರಮುಖ ತತ್ವಗಳಲ್ಲಿ ಕಾಣಬಹುದು. ಬಸವಣ್ಣನವರ ವಚನಗಳು ೧೨ನೇ ಶತಮಾನದಲ್ಲಷ್ಟೇ ಅಲ್ಲದೆ, ಇಂದಿನ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಮಾಜ ನಿರ್ಮಾಣಕ್ಕೂ ದಾರಿದೀಪವಾಗಿವೆ ಎಂದರು.ಹಾಸನದ ಬಸವಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜ್ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿ, ತಾನು ದುಡಿದು ಗಳಿಸಿದುದರಲ್ಲಿ ಅಗತ್ಯಕ್ಕಿಂತ ಹೆಚ್ಚಿನದನ್ನು ಸಮಾಜದ ಒಳಿತಿಗಾಗಿ ಹಂಚಿಕೊಳ್ಳಬೇಕು. ಸ್ವಾರ್ಥವಿಲ್ಲದೆಇತರರ ಹಿತಕ್ಕಾಗಿ ಬದುಕುವುದು ಬಸವಣ್ಣನವರ ದಾಸೋಹದ ತತ್ವ.ಬಸವಣ್ಣನವರ ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿದುಡಿದು ಬದುಕಬೇಕು. ಯಾವುದೇ ಕೆಲಸ ಮೇಲು-ಕೀಳು ಎಂಬ ಭಾವನೆಇರಬಾರದು.ಕಾಯಕವೇ ಕೈಲಾಸಈ ಮಾತಿನ ಮೂಲಕ ಬಸವಣ್ಣನವರುದುಡಿಮೆಯೇದೇವರಆರಾಧನೆ ಎಂಬ ಸಂದೇಶ ನೀಡಿದರು. ಕೆಲಸ ಮಾಡುವವನನ್ನು ಕೀಳಾಗಿ ಕಾಣದೆ, ಅವನ ಕಾಯಕಕ್ಕೆಗೌರವ ನೀಡಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.ಕಾರ್ಯಕ್ರಮದಲ್ಲಿ ಯುನೈಟೆಡ್ ಅಕಾಡೆಮಿಯ ಆರ್. ಇ. ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕರಾದ ಶಿವನಂಜೇಗೌಡ, ರತ್ನಸೋಮಶೇಖರ್, ದೇವಿರಮ್ಮ, ಸವರ್ಣರಾಮಚಂದ್ರ ಅವರು ವಚನ ಗಾಯನ ನಡೆಸಿಕೊಟ್ಟರು. ವೇದಿಕೆಯಲ್ಲಿ ವೃತ್ತಿಯಿಂದ ನಿವೃತ್ತಿ ಜೀವನಕ್ಕೆಕಾಲಿಟ್ಟ ಶಿಕ್ಷಣ ಇಲಾಖೆಯ ಪಾಲಾಕ್ಷಮ್ಮ ಮೋಹನ್ರಾಜ್, ದೇವಿರಮ್ಮ ಹರೀಶ್, ಬಸವರಾಜ್, ವಿಜಯ ಶಿವರುದ್ರಪ್ಪ, ಪುಟ್ಟಪ್ಪ, ಚಂದ್ರಮೌಳಿ, ಕೆ.ಎಂ.ಪ್ರಕಾಶ್, ಮಲ್ನಾಡ್ಕಾಲೇಜಿನಅಧೀಕ್ಷಕಕಟ್ಟಾಯ ಶಿವಕುಮಾರ್, ನಿವೃತ್ತ ಪ್ರಾಂಶುಪಾಲೆ ಜಯಶೀಲ, ಅಕಾಶವಾಣಿ ಮುಖ್ಯಸ್ಥ ವಿಜಯಅಂಗಡಿ, ಮಹಾನಗರ ಪಾಲಿಕೆ ಅಭಿಯಂತರರಾದ ಮಂಜುನಾಥ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿಉಪನ್ಯಾಸಕಡಾ.ಪ್ರೊ.ತಿಮ್ಮೇಶ್, ಡಾ.ಗುರುರಾಜ್ಯಲಗಚ್ಚಿನವರ್, ಅಖಿಲ ಭಾರತೀಯ ವೀರಶೈವ ಮಹಾಸಭಾದತಾಲ್ಲೂಕುಅಧ್ಯಕ್ಷೆ ಮಮತಾ ಪಾಟೀಲ, ಭಾರತ್ ಸ್ಕೌಟ್ಸ್ಗೈಡ್ಸ್ ಹಾಸನ ಜಿಲ್ಲಾಉಪಾಧ್ಯಕ್ಷೆ ಎಂ.ಬಿ. ಗಿರಿಜಾಂಬಿಕ, ಲೆಕ್ಕಪರಿಶೋಧಕಎಸ್.ಎನ್. ಜಗದೀಶಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.