ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭಾರತದ ಏಕತೆ, ಸಮಗ್ರತೆ ಮತ್ತು ಸ್ವಾಭಿಮಾನಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದವರು ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹುತಾತ್ಮ ದಿನದಂದು ಅವರಿಗೆ ಗೌರವ ಸಲ್ಲಿಸಬೇಕಾದದ್ದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಕರ್ತವ್ಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಶ್ಯಾಮ್ ಪ್ರಕಾಶ್ ಮುಖರ್ಜಿಯವರ ಬಲಿದಾನ ದಿವಸ್ ಪ್ರಯುಕ್ತ ಅವರ ಆದರ್ಶ ಮತ್ತು ದೇಶಭಕ್ತಿಯ ಕುರಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 1953, ಜೂ.23 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕಾಲಿಕ ಮರಣವನ್ನು ಹೊಂದಿದರು, ಈ ದಿನವನ್ನು ಅವರ ಬಲಿದಾನ ದಿನವೆಂದು ಆಚರಿಸಲಾಗುತ್ರಿದೆ ಎಂದರು.ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ವಿಲೀನಗೊಳಿಸಲು ಹೋರಾಡಿದರು. ಮುಖ್ಯವಾಗಿ, ಅವರು 370ನೇ ವಿಧಿಯನ್ನು ಬಲವಾಗಿ ವಿರೋಧಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು ಇದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು ಎಂದರು.ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಅವರ ಆಸೆ ಈಡೇರಲಿ, ಅವರ ಆದರ್ಶ ದಾರಿದೀಪವಾಗಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳವನ್ನು ಭಾರತದ ಅವಿಭಾಜ್ಯ ಅಂಗವಾಗಿಡಲು ತಮ್ಮ ಜೀವನದುದ್ದಕ್ಕೂ ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಹೋರಾಡಿದರು. ದೇಶದಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬೆಳಸಲು. ಆರ್ಎಸ್ಎಸ್ ಒಡಗೂಡಿ ಜನ ಸಂಘ ಸ್ಥಾಪಿಸಿದರು ಅವರು ನಮಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಒಂದು ರಾಷ್ಟ್ರ, ಒಂದು ಸಂವಿಧಾನವನ್ನು ಜಾರಿಗೆ ತರುವ ಮೂಲಕ ಡಾ.ಮುಖರ್ಜಿ ಅವರ ಕನಸನ್ನು ನನಸಾಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷದ ಸಾಧನೆ ಮತ್ತು ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಮೂಲಕ ಪಕ್ಷದ ಸಂಘಟನೆಯನ್ನು ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಮುಂದಾಗಬೇಕು ಎಂದರು.ಕಾಂಗ್ರೇಸ್ಸಿನ ಮುಸ್ಲಿಂ ತುಷ್ಟೀಕರಣವನ್ನು ವಿರೋಧಿಸಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ರಾಜ್ಯ ಕಾಂಗ್ರೇಸ್ ಮುಸ್ಲಿಂ ತುಷ್ಠಿಕರಣವನ್ನು ವಿರೋಧಿಸಲು, ಪ್ರತಿಯೊಂದು ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗಿದೆ ಎಂದರು. ಮಾಜಿ ಜಿಲ್ಲಾದ್ಯಕ್ಷ ಆರ್.ಸುಂದರ್, ಚುಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ರಾಷ್ಟ್ರೀಯ ಕರ್ಯಕಾರಿಣಿ ಸದಸ್ಯ ನೂರೊಂದುಶೆಟ್ಡಿ ಮಾತನಾಡಿ, ರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸಲು ಅವರ ಅಚಲ ಇಚ್ಛಾಶಕ್ರಿ, ಅವರ ಜೀವನ ಪಯಣವನ್ನು ಅವರು ಸ್ಮರಿಸಿ ವೈಯಕ್ತಿಕ ಹಿತಾಸಕ್ತಿಗಳಿಗಿಂತ ರಾಷ್ಟ್ರಕ್ಕೆ ಆದ್ಯತೆ ನೀಡುವ ಮೂಲಕ ಡಾ. ಮುಖರ್ಜಿ ಅವರ ಆದರ್ಶಗಳಿಂದ ಕಾರ್ಯಕರ್ತರು ಸ್ಫೂರ್ತಿ ಪಡೆಯಬೇಕೆಂದು ಹೇಳಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲೂ ತಮ್ಮ ಛಾಪು ಮೂಡಿಸಿದ ಮುಖರ್ಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದರು 1953, ಜೂ. 23 ರಂದು ಜಮ್ಮು ಕಾಶ್ಮೀರದಲ್ಲಿ ಅವರು ಹೃದಯಾಘಾತದಿಂದ ಮೃತರಾದರು ಎಂದು ಘೋಷಿಸಲಾಗಿತ್ತಾದರೂ, ಅವರ ಸಾವಿನ ಕುರಿತು ಇಂದಿಗೂ ನಿಗೂಢವಿದೆ ಎಂದರು.ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಬಿಜೆಪಿಯ ಮೂಲಪಕ್ಷವಾದ ಜನಸಂಘದ ಸಂಸ್ಥಾಪಕರು ಮತ್ತು ದೇಶದ ಅಖಂಡತೆ ಮತ್ತು ಏಕತೆಗಾಗಿ ಪ್ರಾಣವನ್ನು ಬಲಿಕೊಟ್ಟವರು. ರಾಷ್ಟ್ರವಾದಿ ರಾಜಕಾರಣವನ್ನು ಪ್ರತಿಪಾದಿಸಿದ ಮುಖರ್ಜಿಯವರು, ಏಕ್ ವಿಧಾನ್ ಏಕ್ ಪ್ರಧಾನ್ ಮತ್ತು ಏಕ್ ಸಂವಿಧಾನ್ ಘೋಷಣೆಯನ್ನು ಮಾಡಿದವರು ಎಂದರು.ಅವರ ತ್ಯಾಗ ಬಲಿದಾನಗಳ ಬಗ್ಗೆ ಅರಿವು ಮೂಡಿಸಿಕೊಂಡು ಪಕ್ಷ ನಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ಬಳಸಿಕೊಂಡು ಪಕ್ಷವನ್ನು ಸಂಘಟಿಸೋಣ ಎಂದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಸುರೇಶ್, ಮುಖಂಡರಾದ ಬಾಲಸುಬ್ರಹ್ಮಣ್ಯಂ, ಪ್ರದಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಶಿವರಾಜ್, ಕಮಲಮ್ಮ, ಸರಸ್ವತಿ, ಕಾಡಹಳ್ಳಿ ಕುಮಾರ್, ವಿರೇಂದ್ರ, ಚಂದ್ರಶೇಖರ್, ನಟರಾಜು, ರಂಗಸ್ವಾಮಿ, ಇತರರು ಇದ್ದರು.