ಜಿಲ್ಲೆಯಲ್ಲಿ ಬಿಜೆಪಿ ಹಾಳಾಗಲು ಸಿದ್ದೇಶ್ವರ್‌ ಕಾರಣ

| Published : Dec 15 2024, 02:01 AM IST

ಸಾರಾಂಶ

ದಾವಣಗೆರೆಯಲ್ಲಿ ಗಟ್ಟಿಯಾಗಿದ್ದ ಬಿಜೆಪಿಯನ್ನು ಹಾಳು ಮಾಡಿದ ಕೀರ್ತಿಯು ಸಿದ್ದೇಶ್ವರರಿಗೆ ಸಲ್ಲುತ್ತದೆ. ಹೀಗಿರುವಾಗ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಯುವ ಮುಖಂಡ ಮಾಡಾಳ್‌ ಮಲ್ಲಿಕಾರ್ಜುನ್‌ ಬಗ್ಗೆ ಮಾಜಿ ಸಂಸದರ ಹೊಗಳುಭಟ್ಟ, ಶೋಷಿತ ವರ್ಗಗಳ ಅಧ್ಯಕ್ಷ ಎಂದು ಹೇಳಿಕೊಳ್ಳುವ ವ್ಯಕ್ತಿಯ ಹೇಳಿಕೆ ಖಂಡಿಸುತ್ತೇವೆ ಎಂದು ಬಿಜೆಪಿ ಯುವ ಮುಖಂಡ ಪ್ರವೀಣ ಜಾಧವ್ ಹೇಳಿದ್ದಾರೆ.

- ದಾವಣಗೆರೆಯಲ್ಲಿ ಗೆದ್ದರೂ ಚಿತ್ರದುರ್ಗಕ್ಕೆ ಅನುದಾನ ಒಯ್ತಿದ್ದರು: ಪ್ರವೀಣ ಜಾಧವ್‌ ಆರೋಪ,- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿ ಗಟ್ಟಿಯಾಗಿದ್ದ ಬಿಜೆಪಿಯನ್ನು ಹಾಳು ಮಾಡಿದ ಕೀರ್ತಿಯು ಸಿದ್ದೇಶ್ವರರಿಗೆ ಸಲ್ಲುತ್ತದೆ. ಹೀಗಿರುವಾಗ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಯುವ ಮುಖಂಡ ಮಾಡಾಳ್‌ ಮಲ್ಲಿಕಾರ್ಜುನ್‌ ಬಗ್ಗೆ ಮಾಜಿ ಸಂಸದರ ಹೊಗಳುಭಟ್ಟ, ಶೋಷಿತ ವರ್ಗಗಳ ಅಧ್ಯಕ್ಷ ಎಂದು ಹೇಳಿಕೊಳ್ಳುವ ವ್ಯಕ್ತಿಯ ಹೇಳಿಕೆ ಖಂಡಿಸುತ್ತೇವೆ ಎಂದು ಬಿಜೆಪಿ ಯುವ ಮುಖಂಡ ಪ್ರವೀಣ ಜಾಧವ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆದ್ದರೂ, ಚಿತ್ರದುರ್ಗ ಜಿಲ್ಲೆಗೆ ಅನುದಾನ ಒಯ್ಯುತ್ತಿದ್ದ ನಡೆಯೇ ಮಾಜಿ ಸಂಸದರ ಸೋಲಿಗೆ ಕಾರಣ. ಬೇಲಿಕೇರಿ ಹಗರಣದಲ್ಲಿ ಮಾಜಿ ಸಂಸದರು ಮಾಡಿದ ತಪ್ಪಿಗೆ ತಮ್ಮ ಜೈಲು ಪಾಲಾಗಿದ್ದರು. ಭೀಮಸಮುದ್ರದಲ್ಲಿ ಮೈನ್ಸ್ ಲಾರಿಗಳಿಂದ ಧೂಳು ಬರುತ್ತದೆಂದು ನಿಮ್ಮದೇ ಕುಟುಂಬದವರು ಮೈನ್ಸ್ ಲಾರಿ ತಡೆದು, ಅವುಗಳಿಂದ ಕಮಿಷನ್ ವಸೂಲು ಮಾಡಿದವರು ಎಂದು ದೂರಿದರು.

ಯಡಿಯೂರಪ್ಪನವರ ಆಶೀರ್ವಾದವಿದೆ ಎಂದು ಸಾವಿರಾರು ಲೈಟ್‌ಗಳನ್ನು ಅಳವಡಿಸಿ, ಮೈನ್ಸ್‌ನಲ್ಲಿ ಕೊಳ್ಳೆ ಹೊಡೆದವರು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ. ಕೇಂದ್ರ ಸಚಿವರಾಗಿದ್ದ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದ್ದು ಯಾಕೆಂಬುದು ಜನತೆಗೂ ಗೊತ್ತಿದೆ. ಜಿಲ್ಲೆ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು, ದಾವಣಗೆರೆಗೆ ಬರುವ ಮೊದಲು ನಿಮ್ಮ ಕುಟುಂಬದ ಆಸ್ತಿಯು ಎಷ್ಟಿತ್ತು? ಈಗ ಎಷ್ಟಾಗಿದೆ ಎಂಬುದನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

ಜಮೀರ್ ಅಹಮ್ಮದ್‌ ಅವರಿಗೆ ಎಷ್ಟು ಹಣ ನೀಡಿದ್ದೀರಿ, ಹಿರಿಯೂರು ಶಾಸಕ ಸುಧಾಕರ್‌ಗೆ ಎಷ್ಟು ಹಣ ನೀಡಿದ್ದೀರೆಂದು ಕೇಳಿದರೆ, ಅದು ವ್ಯವಹಾರ ಎನ್ನುತ್ತೀರಿ. ಇದು ಒಳಒಪ್ಪಂದವಲ್ಲದೇ ಮತ್ತೇನು? ಸಿದ್ದೇಶ್ವರ ಅವರೇ, ನಿಮ್ಮ ರಾಜಕೀಯ ಮತ್ತು ಹಣದ ವ್ಯವಹಾರದ ರಹಸ್ಯ ಏನೆಂಬುದನ್ನು ಕ್ಷೇತ್ರದ ಜನರೇ ಮಾತನಾಡುತ್ತಿದ್ದಾರೆ. ಇಂತಹವರ ಪರ ಕೆಲವರು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ನ್ಯಾಯಾಲಯದಲ್ಲೇ ಪ್ರಕರಣ ರದ್ದಾಗಿದೆ. ಹೀಗಿದ್ದರೂ ಮಾಡಾಳ್ ಕುಟುಂಬದ ವಿರುದ್ಧ ಹಿಂಬಾಲಕರಿಂದ ಹೇಳಿಕೆ ಕೊಡಿಸುತ್ತೀರಿ. ಚನ್ನಗಿರಿ ಕ್ಷೇತ್ರಕ್ಕೆ ಮಾಡಾಳ ಮಲ್ಲಿಕಾರ್ಜುನ ಪಕ್ಷೇತರನಾಗಿ ಸ್ಪರ್ಧಿಸಿ, 62 ಸಾವಿರಕ್ಕೂ ಅಧಿಕ ಮತ ಪಡೆದಿದ್ದಾರೆ. ಅದನ್ನು ಗುರುತಿಸಿ, ರಾಜ್ಯ ನಾಯಕರು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಕೋವಿಡ್ ಸಂದರ್ಭ ರೇಣುಕಾಚಾರ್ಯರ ಸೇವೆ, ಇಡೀ ಹೊನ್ನಾಳಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಜನಪರ ಕೆಲಸಗಳನ್ನು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಜನತೆ ಇಂದಿಗೂ ಸ್ಮರಿಸುತ್ತಾರೆ. ಇಂತಹ ವ್ಯಕ್ತಿ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರವೀಣ ಜಾಧವ್ ತಿಳಿಸಿದರು.

ಪಕ್ಷದ ಮುಖಂಡರಾದ ರಾಜು ವೀರಣ್ಣ, ಜಯರುದ್ರೇಶ, ದಯಾನಂದ, ಸುಮಂತ್, ಮಂಜು, ಕೆ.ಎನ್. ವೆಂಕಟೇಶ, ಗಿರೀಶ ಇತರರು ಇದ್ದರು.

- - -

ಕೋಟ್‌ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಎರಡು ಬಣಗಳಾಗಿರುವುದಕ್ಕೆ ಮಾಜಿ ಸಂಸದ ಸಿದ್ದೇಶ್ವರರೇ ಕಾರಣ. ಈಗ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸುತ್ತಿದ್ದಾರೆ. ತಕ್ಷಣವೇ ಬಿಜೆಪಿಯಿಂದ ಸಿದ್ದೇಶ್ವರರನ್ನು ಉಚ್ಚಾಟಿಸಲು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕ್ರಮ ಕೈಗೊಳ್ಳಬೇಕು

- ಪಂಜು ಪೈಲ್ವಾನ್, ಯುವ ಮುಖಂಡ

- - - -14ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಯುವ ಮುಖಂಡರಾದ ಪ್ರವೀಣ ಜಾಧವ್, ಪಂಜು ಪೈಲ್ವಾನ್ ಸುದ್ದಿಗೋಷ್ಠಿಯಲ್ಲಿ ಸಿದ್ದೇಶ್ವರ ಮತ್ತು ಕುಟುಂಬದ ವಿರುದ್ಧ ಪೋಸ್ಟರ್ ಪ್ರದರ್ಶಿಸಿದರು.