ಶಿರಾ: ಸತ್ಯ, ಅಹಿಂಸೆ, ಕರುಣೆಯ ಮಾರ್ಗ ತೋರಿದ ಸಂತ ಸೇವಲಾಲರು

| Published : Feb 16 2024, 01:48 AM IST

ಸಾರಾಂಶ

ಬಂಜಾರ ಸಮುದಾಯದ ಧರ್ಮಗುರುಗಳಾದ ಸಂತ ಸೇವಾಲಾಲ್ ಅವರು ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ನೀಡಿದವರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು ಎಂದು ತಹಸೀಲ್ದಾರ್‌ ದತ್ತಾತ್ರೆಯ ಗಾದ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಬಂಜಾರ ಸಮುದಾಯದ ಧರ್ಮಗುರುಗಳಾದ ಸಂತ ಸೇವಾಲಾಲ್ ಅವರು ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ನೀಡಿದವರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು ಎಂದು ತಹಸೀಲ್ದಾರ್‌ ದತ್ತಾತ್ರೆಯ ಗಾದ ಹೇಳಿದರು.

ಗುರುವಾರ ನಗರದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತ ಹಾಗೂ ಶಿರಾ ತಾಲೂಕು ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ನಡೆದ ೨೮೫ ನೇ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ನಮ್ಮ ದೇಶದ ನೆಲ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದು, ಅದರಲ್ಲಿ ಬಂಜಾರ ಸಮುದಾಯದ ಸಂಸ್ಕೃತಿ, ಆಚರಣೆ ವಿಶಿಷ್ಟವಾಗಿದ್ದು, ಭಾರತ ದೇಶದಲ್ಲಿ ಬಂಜಾರ ಸಮುದಾಯದ ಸಂಸ್ಕೃತಿ ವಿಶಿಷ್ಠವಾಗಿದ್ದು, ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಜೊತೆಗ ಸಂತ ಸೇವಾಲಾಲ್ ಅವರ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಶಿರಾ ತಾಲೂಕು ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್. ಶೇಷ ನಾಯಕ್ ಮಾತನಾಡಿ, ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯದ ಬೆಳಕಾಗಿದ್ದಾರೆ. ಅವರು ಸಮುದಾಯಕ್ಕೆ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ಹೇಳಿದ್ದರು. ಸೇವಾಲಾಲ್ ಅವರು ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಬಂಜಾರ ಸಮುದಾಯದವರು ಸಾಗಬೇಕು. ಎಲ್ಲರೂ ಒಗ್ಗಟ್ಟಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಾನಾಯಕ್ ಮಾತನಾಡಿ, ಸಮಾಜದಲ್ಲಿ ಸತ್ಯ, ನ್ಯಾಯದಿಂದ ಕಷ್ಟಪಟ್ಟು ದುಡಿದು ಬದುಕುವವರು ಬಂಜಾರ ಸಮುದಾಯದವರು. ನಂಬಿಕೆಗೆ ಅರ್ಹರೆಂದೇ ಬಿಂಬಿತವಾಗಿರುವ ನಮ್ಮ ಸಮುದಾಯದ ಸಂಪ್ರದಾಯ ವಿಶಿಷ್ಟವಾಗಿದೆ. ನಾವು ನೀರಿನ ಗುಣದವರು ಎಲ್ಲರೊಂದಿಗೂ ಸ್ನೇಹಭಾವದಿಂದ ಇರುತ್ತೇವೆ. ರಾಜಮಹಾರಾಜರ ಕಾಲದಲ್ಲಿ ಚಿನ್ನ ಬೆಳ್ಳಿಯ ಒಡವೆಗಳನ್ನು ನಮ್ಮ ಸಮುದಾಯದ ಹೆಣ್ಣು ಮಕ್ಕಳಿಗೆ ಹಾಕಿ ಒಂದು ಊರಿನಿಂದ ಮತ್ತೊಂದು ಊರಿಗೆ ಸಂಚರಿಸುತ್ತಿದ್ದರು. ಆದ್ದರಿಂದಲೇ ಇಂದಿಗೂ ನಮ್ಮ ಹೆಣ್ಣು ಮಕ್ಕಳು ತಮ್ಮ ವಸ್ತ್ರದ ಮೇಲೆ ವಿಶಿಷ್ಟವಾದ ಅಲಂಕಾರ ಮಾಡಿರುತ್ತಾರೆ. ನಮ್ಮ ಅಸ್ತಿತ್ವ, ಸಂಪ್ರದಾಯ ಉಳಿಯಬೇಕು. ಸಂತ ಸೇವಾಲಾಲ್ ಅವರ ಆದರ್ಶ ಪಾಲಿಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಎಚ್. ನಾಗರಾಜ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಚ್. ನಾಗರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ, ತಾ.ಪಂ. ಇಒ ಅನಂತರಾಮು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಶಿಕಲಾ, ಲಂಬಾಣಿ ಸಮಾಜದ ಮುಖಂಡರಾದ ನಾನ್ಯಾ ನಾಯಕ್, ಲಕ್ಷ್ಮಣ್ ನಾಯಕ್, ದೇವ್ಲಾ ನಾಯಕ್, ಭೀಮಾ ನಾಯಕ್, ಕುಮಾರ್‌ ನಾಯಕ್, ವೆಂಕಟೇಶ್ ನಾಯಕ್, ಮಹೇಶ್ ನಾಯಕ್, ವೆಂಕಟರಾಮನಾಯಕ್, ಆನಂದ್ ಕುಮಾರ್‌, ಪರಶುರಾಮ ನಾಯಕ್, ಸರೋಜಾ ಬಾಯಿ, ಚಂಪಕಮಾಲಾ, ಬಾಳೆಕಾಯಿ ರಾಮ ನಾಯಕ್, ಪ್ರವೀಣ್ ನಾಯಕ್, ಕೇಶವ ನಾಯಕ್ ಸೇರಿದಂತೆ ಹಲವರು ಹಾಜರಿದ್ದರು. ಫೋಟೊ

ನಗರದ ಮಿನಿವಿಧಾನಸೌಧದಲ್ಲಿ ನಡೆದ 285 ನೇ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ದತ್ತಾತ್ರೆಯ, ಸಂಘದ ಅಧ್ಯಕ್ಷ ಶೇಷಾನಾಯಕ್ ಸೇರಿದಂತೆ ಹಲವರು ಪುಷ್ಪಾರ್ಚನೆ ಸಲ್ಲಿಸಿದರು.