ಸಿರಿಗನ್ನಡ ಪ್ರಶಸ್ತಿಗಳು ಪ್ರಕಟ

| Published : Nov 16 2024, 12:36 AM IST

ಸಾರಾಂಶ

ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ೨೦೨೪ನೇ ಸಾಲಿನ ಸಿರಿಗನ್ನಡ ಗೌರವ ಹಾಗೂ ವಿವಿಧ ಜೀವಮಾನ ಸಾಧನೆ ಪ್ರಶಸ್ತಿಗಳು ಮತ್ತು ೨೦೨೩ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ವಿವಿಧ ದತ್ತಿ ಪುಸ್ತಕ ಪ್ರಶಸ್ತಿಗಳು ಪ್ರಕಟಗೊಂಡಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ೨೦೨೪ನೇ ಸಾಲಿನ ಸಿರಿಗನ್ನಡ ಗೌರವ ಹಾಗೂ ವಿವಿಧ ಜೀವಮಾನ ಸಾಧನೆ ಪ್ರಶಸ್ತಿಗಳು ಮತ್ತು ೨೦೨೩ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ವಿವಿಧ ದತ್ತಿ ಪುಸ್ತಕ ಪ್ರಶಸ್ತಿಗಳು ಪ್ರಕಟಗೊಂಡಿವೆ. ೨೦೨೪ನೇ ಸಾಲಿನ ಸಿರಿಗನ್ನಡ ಗೌರವಕ್ಕೆ ಹಿರಿಯ ಲೇಖಕರಾದ ಜಯಂತ ಜೋಶಿ ಮತ್ತು ಐ.ಆರ್.ಮಠಪತಿ ಭಾಜನರಾಗಿದ್ದಾರೆ. ೨೦೨೩ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಸಸ್ತಿಗೆ ಸಂತೋಷ ನಾಯಿಕ ಅವರ ಹೊಸ ವಿಳಾಸದ ಹೆಜ್ಜೆಗಳು ಕವನ ಸಂಕಲನ ಮತ್ತು ಬಾಳಣ್ಣ ಶೀಗಿಹಳ್ಳಿ ಅವರ ಮುಡಿವ ಭೋಗಿಗಳಿಗೆ ವಿಮರ್ಶೆ ಕೃತಿ ಆಯ್ಕೆಗೊಂಡಿದೆ.

೨೦೨೪ನೇ ಸಾಲಿನ ವಿವಿಧ ದತ್ತಿ ಜೀವಮಾನ ಸಾಧನೆ ಪ್ರಶಸ್ತಿಗಳು:

-ಪ್ರೊ.ಪ್ರಲ್ಹಾದಕುಮಾರ ಬಾಗೋಜಿ ದತ್ತಿ ಪ್ರಶಸ್ತಿ- ಪ್ರಾಣನಾಥಾಚಾರ್ಯ ಪಾಂಗ್ರಿ

-ಡಾ.ಲತಾ ಗುತ್ತಿ ದತ್ತಿ ನಿಧಿ ಪ್ರಶಸ್ತಿ- ಉಮಾ ಕುಲಕರ್ಣಿ.

-ದಿ.ಸುಮನ ಗುರುನಾಥ ಹುದಲಿ ದತ್ತಿ ಪ್ರಶಸ್ತಿ-ಶಾಂತಾ ಆಚಾರ್ಯ

-ದಿ.ವೆಂ.ಲ.ಜೋಶಿ ಸ್ಮಾರಕ ದತ್ತಿ ಪ್ರಶಸ್ತಿ- ಈಶ್ವರ ಮಮದಾಪುರ

-ತಾರಾಮತಿ ಪರ್ವತರಾಜ ಪಾಟೀಲ ದತ್ತಿ ಪ್ರಶಸ್ತಿ -ಮಂಜುಳ ಜೋಶಿ

-ರಾಮಚಂದ್ರಪ್ಪ ಹಾಗೂ ಷನ್ಮುಖಪ್ಪ ಗೊಣಬಾಳ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ- ಬಿ.ಎಸ್.ಗವಿಮಠ,

-ಡಾ.ಸಿ.ಕೆ.ನಾವಲಗಿ ದತ್ತಿ ನಿಧಿ ಪ್ರಶಸ್ತಿ- ಈಶ್ವರಚಂದ್ರ ಬೆಟಗೇರಿ ಆಯ್ಕೆಯಾಗಿದ್ದಾರೆ.

ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳು:

-ಕೆ. ಚಂದ್ರಮೌಳಿ ದತ್ತಿ ಪ್ರಶಸ್ತಿಗೆ ಗುಂಡೇನಟ್ಟಿ ಮಧುಕರ ಅವರ ಹಾಸ್ಯ ಸಾಹಿತ್ಯ ‘ಮೋದಿಜಿಗೊಂದು ಬಹಿರಂಗ ಪತ್ರ’ ಕೃತಿ.

-ಪಿ.ವಿಜಯಕುಮಾರ ದತ್ತಿ ಪ್ರಶಸ್ತಿಗೆ ಡಾ.ಗುರದೇವಿ ಹುಲೆಪ್ಪನವರಮಠ ಅವರ ಮಕ್ಕಳ ಸಾಹಿತ್ಯ ಬೆಳಗು ಜಗವ ಮಗು ಕೃತಿ.

-ದಿ.ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿ ಪ್ರಶಸ್ತಿಗೆ ರಂಜನಾ ನಾಯಿಕ ಅನುವಾದ ಕೃತಿ ಕನಸಿನಿಂದ ಹಸೆಮಣೆಯವರೆಗೆ.

-ದಿ.ಣಮಂತರಾವ ಸವಣೂರ ಸ್ಮಾರಕ ದತ್ತಿ ಪ್ರಶಸ್ತಿಗೆ ಪಾರ್ವತಿ ಪಿಟಗಿ ಅವರ ಕಾದಂಬರಿ ಚಂದ್ರಯಾನ ಕೃತಿ.

-ಎಸ್.ಎಂ.ಕುಲಕರ್ಣಿ ಷಷ್ಟ್ಯಬ್ಧಿ ಸಮಿತಿ ದತ್ತಿ ಪ್ರಶಸ್ತಿಗೆ ಡಾ.ಗುರುಪಾದ ಮರಿಗುದ್ದಿ ಅವರ ವಿಮರ್ಶಾ ಕೃತಿ ಡಾ.ರಾಗೌ ಸಾಹಿತ್ಯ ಮಂಥನ.

-ದಿ.ಚಂದ್ರವ್ವ ಧರ್ಮಾಜಿ ಅನಗೋಳ ದತ್ತಿ ಪ್ರಶಸ್ತಿಗೆ ಶ್ವೇತಾ ನರಗುಂದ ಅವರ ಕತೆಗಳು ಆಯಾಮ ಕೃತಿ.

-ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿಗೆ ಮಾಲಾ ಅಕ್ಕಿಶೆಟ್ಟಿ ಅವರ ವೈಚಾರಿಕ ಕೃತಿ ಸ್ವಾವಲಂಬಿ ಬುದುಕಿನಾಚೆ.

-ದಿ.ಭಾರತಿಬಾಯಿ ಬಾಳಕೃಷ್ಣ ಜೋಶಿ ಸ್ಮರಣಾರ್ಥ ದತ್ತಿ ಪ್ರಶಸ್ತಿ ಜೀವನ ಚರಿತ್ರೆಗೆ ಎಲ್.ಎಸ್.ಶಾಸ್ತ್ರಿ ಅವರ ಕನ್ನಡದ ಭಾಗ್ಯ ಕೃತಿ.

-ವಿ.ಆರ್.ಗುಡಿ ದತ್ತಿ ಪ್ರಶಸ್ತಿ, ಅತ್ಯುತ್ತಮ ಆಧ್ಯಾತ್ಮಿಕ ಕೃತಿಗೆ ದೀಪಿಕಾ ಚಾಟೆ ಅವರ ಶ್ರೀರಾಮಚಂದ್ರ ಚರಿತೆ ಮತ್ತು ದಿ.ರಾಮರಾವ್ -ಶಿರಹಟ್ಟಿ ದತ್ತಿ ಪ್ರಶಸ್ತಿ -ಲೇಖಕರ ಉತ್ತಮ ಪ್ರಥಮ ಕೃತಿಗೆ ಇಂದಿರಾ ಹೋಳಕರ ಅವರ ಮಿಂಚು ಮಿಂಚೈತಿ ಕೃತಿ ಆಯ್ಕೆಯಾಗಿವೆ.

ಪ್ರಶಸ್ತಿಯನ್ನು ಡಿ.೨೫ ರಂದು ನಡೆಯುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ಗಣಾಚಾರಿ ತಿಳಿಸಿದ್ದಾರೆ. ಪ್ರಶಸ್ತಿ ವಿಜೇತರಿಗೆ ಪ್ರತಿಷ್ಠಾನ ಅಧ್ಯಕ್ಷ ಎಸ್.ಎಂ.ಕುಲಕರ್ಣಿ ಅಭಿನಂದನೆ ತಿಳಿಸಿದ್ದಾರೆ.