ಸಾರಾಂಶ
ಇಂದು ರೊಬೋಟ್ಗಳು, ಕೃತಕ ಬುದ್ಧಿಮತ್ತೆಗಳೇ ಜ್ಞಾನದ ಭಂಡಾರವಾಗಿವೆ. ೨೧ನೇ ಶತಮಾನದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಶಿಕ್ಷಕರು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರಗಳ ಬಗೆ ತಿಳಿಸಬೇಕಾದರೇ ಅಧ್ಯಯನ ಅಗತ್ಯ, ಪ್ರಪಂಚದ ಯಾವ ದೇಶದಲ್ಲಿ ಏನಾಗುತ್ತಿದೆ ಎಂಬುದರ ಜ್ಞಾನ ತಿಳಿದಿರಬೇಕು. ಆಗ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಾರೆ ಎಂದರು.
ಚನ್ನರಾಯಪಟ್ಟಣ: ಕಲಿಕೆಯೊಂದಿಗೆ ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಂಡರೇ ಸಮಾಜದಲ್ಲಿ ಉನ್ನತಿ ಸಾಧಿಸಬಹುದು, ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಕೌಶಲ್ಯತೆ ರೂಪಿಸುವ ಕೆಲಸವನ್ನು ಮಾಡಬೇಕು ಎಂದು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಎ.ಎಚ್.ಸಾಗರ್ ಹೇಳಿದರು.
ಪಟ್ಟಣದ ಹೊರವಲಯದಲ್ಲಿನ ಜನಿವಾರ ಬಳಿ ಇರುವ ನಾಗಶ್ರೀ ಇಂಗ್ಲಿಷ್ ಶಾಲೆಯಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಂದು ರೊಬೋಟ್ಗಳು, ಕೃತಕ ಬುದ್ಧಿಮತ್ತೆಗಳೇ ಜ್ಞಾನದ ಭಂಡಾರವಾಗಿವೆ. ೨೧ನೇ ಶತಮಾನದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಶಿಕ್ಷಕರು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರಗಳ ಬಗೆ ತಿಳಿಸಬೇಕಾದರೇ ಅಧ್ಯಯನ ಅಗತ್ಯ, ಪ್ರಪಂಚದ ಯಾವ ದೇಶದಲ್ಲಿ ಏನಾಗುತ್ತಿದೆ ಎಂಬುದರ ಜ್ಞಾನ ತಿಳಿದಿರಬೇಕು. ಆಗ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಾರೆ ಎಂದರು.ಇಂದು ಮಕ್ಕಳು ಶಾಲೆಯಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಾಗಳು, ದೃಶ್ಯ ಮಾಧ್ಯಮಗಳಲ್ಲೇ ಹೆಚ್ಚು ಕಲಿಯುತ್ತಿದ್ದಾರೆ. ಶಿಕ್ಷಕಕರಿಗೆ ಇಂದಿನ ಯುಗದ ಮಕ್ಕಳಿಗೆ ಕಲಿಸುವುದು ಸವಾಲಾಗಿದೆ. ಶಾಲೆಗಳಲ್ಲಿ ಗುಣಾತ್ಮಕ ಮತ್ತು ಪರಿಣಾಮಕಾರಿಯಾಗಿ ಬೋಧಿಸುವ ಕೆಲಸವಾಗಬೇಕು. ಇದರೊಂದಿಗೆ ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಯೊಂದಿಗೆ ಕ್ರೀಡೆಗೆ ಒತ್ತು ಕೊಟ್ಟು ನಡೆಯುವುದು ಮುಖ್ಯವೆಂದರು.
ಈ ವೇಳೆ ನಾಗಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್.ವಿಜಯ್ ಕುಮಾರ್, ಟ್ರಸ್ಟಿ ಯಶ್ವಸಿನಿ ರಾಜೀವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಿನಿ ಸೋನ್, ಆಡಳಿತ ಮಂಡಳಿ ಸದಸ್ಯ ಆಸ್ಟೀನ್ ಜೆ.ಎಸ್.ರಾಜ್, ಪ್ರಾಂಶುಪಾಲರಾದ ಎ.ಸಿ.ಪವಿತ್ರಾ, ಆಡ್ಮಿನ್ ಕರುಣ್ ಸೇರಿ ಇತರರು ಇದ್ದರು.