ಸಾರಾಂಶ
ಶಿರಾ ತಾಲೂಕಿನ ತಾವರೆಕೆರೆ ಗ್ರಾಮದ ಶ್ರೀ ಬಂಡಿ ರಂಗನಾಥ ಸ್ವಾಮಿ ದೇವಸ್ಥಾನದ ಮರಡಿಗುಡ್ಡದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ ಆರತಿ ಅಭಿಷೇಕ ಅಲಂಕಾರ ಮತ್ತು ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕಿನ ತಾವರೆಕೆರೆ ಗ್ರಾಮದ ಶ್ರೀ ಬಂಡಿ ರಂಗನಾಥ ಸ್ವಾಮಿ ದೇವಸ್ಥಾನದ ಮರಡಿಗುಡ್ಡದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ ಆರತಿ ಅಭಿಷೇಕ ಅಲಂಕಾರ ಮತ್ತು ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ ಸಿ ದೇವರಾಜ ಅವರು ಹೆಚ್ಚು ದೈವಿಕ ಶಕ್ತಿ ಹೊಂದಿರುವ ಶ್ರೀ ಬಂಡಿ ರಂಗನಾಥ ಸ್ವಾಮಿ ಕೃಪಾ ಆಶೀರ್ವಾದದಿಂದ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಬಿ.ಹರಿಪ್ರಸಾದ್, ಟ್ರಸ್ಟಿಗಳಾದ ಗುಡ್ಡದ ರಂಗಪ್ಪ, ಅಜಯ್ ಕುಮಾರ್, ಕೆ ಟಿ ಸ್ವಾಮಿ, ಆರ್ ಜಿ ಸತ್ಯನಾರಾಯಣ, ಬಿ ಸತ್ಯನಾರಾಯಣ ಶೆಟ್ಟಿ, ಡಾ. ಲಕ್ಷ್ಮೀಕಾಂತ್, ಕೆ ಟಿ ರಾಘವೇಂದ್ರ, ಯೋಗ ಚಂದ್ರ, ಮರಡಿ ನಾಗರಾಜ್, ಅರ್ಚಕರಾದ ಕೇಶವಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.