ರಾಮನಾಥಪುರ ಇಂದಿನ ಕಲಿಯುಗದಲ್ಲಿ ಒಂದು ಸಾರಿ ಶ್ರೀರಾಮ ಎಂದರೇ ಸಾಕು. ದೇವರು ಅನುಗ್ರಹ ಮಾಡುತ್ತಾನೆ. ನಾವು ಪರಮಾತ್ಮನನ್ನು ಅರಿತು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಇಲ್ಲಿಯ ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕರಾದ ವೇ. ಕನಕಾಚಾರ್ಯರು ತಿಳಿಸಿದರು. ರಾಮನಾಥಪುರ ಶ್ರೀ, ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದ ಸ್ವಾಮಿಯವರ ಉತ್ಸವ ಹಾಗೂ ವಿಶೇಷ ಪೂಜೆಯ ನಂತರ ಆಶೀರ್ವಚನ ನೀಡಿದ ಅವರು ಲಂಚ ಗೌರವವನ್ನು ತಿನ್ನುತ್ತದೆ. ಕ್ರೋಧ ಬುದ್ಧಿಯನ್ನು ತಿನ್ನುತ್ತದೆ. ಚಿಂತೆ ಆಯುಷ್ಯವನ್ನು ತಿನ್ನುತ್ತದೆ. ಅಹಂಕಾರ ಜ್ಞಾನವನ್ನು ತಿನ್ನುತ್ತದೆ. ಪ್ರಾಯಶ್ಚಿತ ಪಾಪವನ್ನು ತಿನ್ನುತ್ತದೆ. ಮೋಹ ಮರ್ಯಾದೆಯನ್ನು ತಿನ್ನುತ್ತದೆ ಎಂದರು.
ರಾಮನಾಥಪುರ: ಇಂದಿನ ಕಲಿಯುಗದಲ್ಲಿ ಒಂದು ಸಾರಿ ಶ್ರೀರಾಮ ಎಂದರೇ ಸಾಕು. ದೇವರು ಅನುಗ್ರಹ ಮಾಡುತ್ತಾನೆ. ನಾವು ಪರಮಾತ್ಮನನ್ನು ಅರಿತು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಇಲ್ಲಿಯ ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕರಾದ ವೇ. ಕನಕಾಚಾರ್ಯರು ತಿಳಿಸಿದರು.
ರಾಮನಾಥಪುರ ಶ್ರೀ, ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದ ಸ್ವಾಮಿಯವರ ಉತ್ಸವ ಹಾಗೂ ವಿಶೇಷ ಪೂಜೆಯ ನಂತರ ಆಶೀರ್ವಚನ ನೀಡಿದ ಅವರು ಲಂಚ ಗೌರವವನ್ನು ತಿನ್ನುತ್ತದೆ. ಕ್ರೋಧ ಬುದ್ಧಿಯನ್ನು ತಿನ್ನುತ್ತದೆ. ಚಿಂತೆ ಆಯುಷ್ಯವನ್ನು ತಿನ್ನುತ್ತದೆ. ಅಹಂಕಾರ ಜ್ಞಾನವನ್ನು ತಿನ್ನುತ್ತದೆ. ಪ್ರಾಯಶ್ಚಿತ ಪಾಪವನ್ನು ತಿನ್ನುತ್ತದೆ. ಮೋಹ ಮರ್ಯಾದೆಯನ್ನು ತಿನ್ನುತ್ತದೆ ಎಂದರು.ಪೂಜಾ ಕೈಂಕರ್ಯ ಹಾಗೂ ಮಂಗಳಾರತಿ ನಂತರ ಬಂದಂತಹ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು.