ಸ್ವಾಸ್ಥ್ಯ ಸಮಾಜಕ್ಕೆ ಮೂರು ಸೂತ್ರ ಹೇಳಿದ ಸುಬ್ರಹ್ಮಣ್ಯ

| Published : Jun 11 2025, 11:32 AM IST

ಸ್ವಾಸ್ಥ್ಯ ಸಮಾಜಕ್ಕೆ ಮೂರು ಸೂತ್ರ ಹೇಳಿದ ಸುಬ್ರಹ್ಮಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಸ್ಥ್ಯ ಸಮಾಜವಾಗಬೇಕಾದರೆ ಸ್ವಾಸ್ಥ್ಯ ಸಂಕಲ್ಪ ಅಗತ್ಯ ಮೂರು ಸೂತ್ರಗಳನ್ನು ಅನುಸರಿಸಿದರೆ ಸಾಕು ಎಂದು ಸಂಪನ್ಮೂಲ ವ್ಯಕ್ತಿ ವಾಗ್ಮಿ ಚೆಸ್ಕಾಂ ಅಭಿಯಂತ ಸುಬ್ರಹ್ಮಣ್ಯ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಂತ ಚಿತ್ತರಾಗಿರಿ, ತಾಳ್ಮೆ ಇರಲಿ ಯಾರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಆಲಿಸಿ ಪೂರ್ಣ ಕೇಳಿಕೊಳ್ಳಿ ಮಧ್ಯ ಮಾತನಾಡಲು ಹೋಗಬೇಡಿ, ಶಾಂತಚಿತ್ತತೆ ಮುಖ್ಯ ಇದು ಉತ್ತಮ ಆರೋಗ್ಯಕ್ಕೂ ಸಹಕಾರಿ ಜ್ಞಾನ ವಿಕಾಸಕ್ಕೂ ಕೂಡ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸ್ವಾಸ್ಥ್ಯ ಸಮಾಜವಾಗಬೇಕಾದರೆ ಸ್ವಾಸ್ಥ್ಯ ಸಂಕಲ್ಪ ಅಗತ್ಯ ಮೂರು ಸೂತ್ರಗಳನ್ನು ಅನುಸರಿಸಿದರೆ ಸಾಕು ಎಂದು ಸಂಪನ್ಮೂಲ ವ್ಯಕ್ತಿ ವಾಗ್ಮಿ ಚೆಸ್ಕಾಂ ಅಭಿಯಂತ ಸುಬ್ರಹ್ಮಣ್ಯ ವಿದ್ಯಾರ್ಥಿಗಳಿಗೆ ತಿಳಿಸಿದರು. ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮದಡಿ ಸ್ವಾಸ್ಥ್ಯ ಸಂಕಲ್ಪ ಕುರಿತು ಉಪನ್ಯಾಸ ನೀಡಿದ ಅವರು ಹರಿ, ವರಿ ಕರಿ, ಇವುಗಳಿಂದ ನೀವು ದೂರ ಇದ್ದರೆ ಸ್ವಾಸ್ಥ್ಯವಾಗಿ ಇರಲು ಸಾಧ್ಯವಾಗುತ್ತದೆ ಎಂದರು. ಶಾಲೆಗೆ ಬರಬೇಕೆಂದರೆ ಬೆಳಗ್ಗೆ ಬಹಳ ಹರಿಯಲ್ಲಿ ಇರುತ್ತೀರಿ, ಪರೀಕ್ಷೆ ಸಮೀಪಿಸಿದಾಗಲೂ ಎರಡು ದಿನಗಳಿದೆ ಎನ್ನುವ ಹಾಗೆ ತುಂಬಾ ಹರಿಯಾಗುತ್ತೀರಿ, ನಮಗೆ ಇರುವ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಈ ರೀತಿಯ ಗಡಿಬಿಡಿ ಬರುವುದಿಲ್ಲ, ನಿತ್ಯ ಶಾಲೆಯಲ್ಲಿ ಆಗುವ ಪಾಠಗಳನ್ನು ಅಂದೆ ಮನೆಯಲ್ಲಿ ಮನನ ಮಾಡಿಕೊಳ್ಳಿ ಎಂಬುದನ್ನು ಶಿಕ್ಷಕರು ನನ್ನ ವಿದ್ಯಾರ್ಥಿ ಜೀವನದಲ್ಲೂ ಹೇಳುತ್ತಿದ್ದರು ಇಂದು ನಿಮಗೂ ಹೇಳುತ್ತಿದ್ದಾರೆ, ಅದು ನಮ್ಮ ಯಶಸ್ಸಿಗೆ ನೂರಕ್ಕೆ ನೂರು ಸಹಕಾರಿ. ಬೆಳಗ್ಗೆ ಸ್ವಲ್ಪ ಬೇಗ ಎದ್ದರೆ ಗಡಿಬಿಡಿ ಇರುವುದಿಲ್ಲ, ಅಂದಿನ ಪಾಠವನ್ನು ಅಂದೆ ಓದಿಕೊಂಡರೆ ಪರೀಕ್ಷೆಯಲ್ಲಿ ವರಿ ಇರುವುದಿಲ್ಲ, ಬೆಳಗಿನ ವಾಯು ವಿಹಾರ ಮಾಡಿ ಇಲ್ಲವೇ ಸಂಜೆ ಆದರೂ ಸ್ವಲ್ಪ ವಾಕ್ ಮಾಡಿ ದೇಹಕ್ಕೆ ಶ್ರಮ ಬೇಕು, ಯಾವ ಕಾರಣಕ್ಕೂ ಕೋಪ ಮಾಡಿಕೊಳ್ಳಬೇಡಿ, ಒಂದು ನಿಮಿಷ ಕೋಪ ಮಾಡಿಕೊಂಡರೆ ಎಷ್ಟು ನರಗಳು ಸೆಳೆಯಲ್ಪಡುತ್ತದೆ, ಹೃದಯದ ಬಡಿತ ವೇಗ ಹೆಚ್ಚುತ್ತದೆ, ಮೆದುಳಿನ ಮೇಲೆ ಪರಿಣಾಮವಾಗುತ್ತದೆ ಗೊತ್ತೇ, ನಮ್ಮ ಮೆದುಳಿನಲ್ಲಿ ಬ್ರಹ್ಮಾಂಡವನ್ನೇ ನೆನಪಿನಲ್ಲಿಡುವ ಶಕ್ತಿ ಇದೆ. ನಾವು ಕೇವಲ ಶೇಕಡ ಎರಡರಷ್ಟು ಬಳಸುತ್ತಿದ್ದೇವೆ. ಶಾಂತ ಚಿತ್ತರಾಗಿರಿ, ತಾಳ್ಮೆ ಇರಲಿ ಯಾರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಆಲಿಸಿ ಪೂರ್ಣ ಕೇಳಿಕೊಳ್ಳಿ ಮಧ್ಯ ಮಾತನಾಡಲು ಹೋಗಬೇಡಿ, ಶಾಂತಚಿತ್ತತೆ ಮುಖ್ಯ ಇದು ಉತ್ತಮ ಆರೋಗ್ಯಕ್ಕೂ ಸಹಕಾರಿ ಜ್ಞಾನ ವಿಕಾಸಕ್ಕೂ ಕೂಡ ಎಂದರು. ವರಿಯಿಂದ ದೂರ ಇರಿ, ಸಮಯವನ್ನು ಸದ್ಬಳಕೆ ಮಾಡಿಕೊಂಡರೆ ಪರೀಕ್ಷೆಯ ವರಿ ಖಂಡಿತ ಇರುವುದಿಲ್ಲ, ಅಂಕ ಕಡಿಮೆ ಬಂದಿತು ಎಂಬ ವರಿ ಬೇಡ, ಮುಂದಿನ ಅವಕಾಶದಲ್ಲಿ ಗಳಿಸಬಹುದು ಅದರತ್ತ ಗಮನ ಕೊಡಿ, ಯಾವುದನ್ನು ಯೋಚಿಸಬೇಡಿ ತಲೆಯಿಂದ ಅದನ್ನು ತೆಗೆದು ಹಾಕಿ ಏನು ಮಾಡಬೇಕೆಂಬ ಬಗ್ಗೆ ನಿರ್ಧಾರ ಕೈಗೊಳ್ಳಿ, ನಿಮ್ಮ ಮನಸ್ಸು ದೃಢವಾಗಿರಬೇಕು. 10ನೇ ತರಗತಿ ಶಿಕ್ಷಣ ಟರ್ನಿಂಗ್ ಪಾಯಿಂಟ್, ವರಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ನಮ್ಮ ಜ್ಞಾನಾರ್ಜನೆ ಮೇಲು ಪರಿಣಾಮ ಬೀರುತ್ತದೆ. ಅದು ಎಂದೂ ನಮ್ಮಿಂದ ದೂರ ಇರಬೇಕು.ಕರಿ ಎಂದರೆ ಎಣ್ಣೆಯಲ್ಲಿ ಕರೆದ ಖಾದ್ಯ ಪದಾರ್ಥಗಳು. ಚಾಟ್ಸ್ ಪಾನಿಪುರಿ ಮೊದಲಾದವುಗಳಿಂದ ದೂರ ಇರಿ. ಉತ್ತಮ ಆಹಾರವನ್ನು ಸೇವಿಸಿ ಖಾದ್ಯ ಪದಾರ್ಥದಿಂದ ದೂರ ಇರಿ, ಆರೋಗ್ಯವಿದ್ದಾಗ ನಾವು ಸ್ವಾಸ್ತ್ಯವಾಗಿರುತ್ತೇವೆ. ದೇಹದ ಎಲ್ಲಾ ಅಂಗಾಂಗಗಳು ಉತ್ತಮವಾಗಿ ಕೆಲಸ ಮಾಡುತ್ತವೆ, ಊಟ, ತಿಂಡಿ, ಓದು ನಿದ್ರೆ ಇವುಗಳಿಗೆ ಸಮಯವನ್ನು ನಿಗದಿ ಮಾಡಿಕೊಳ್ಳಿ ಇವುಗಳಲ್ಲಿ ಸಮಯ ಪಾಲನೆ ಬಹಳ ಮುಖ್ಯ, ಆರೋಗ್ಯವಾಗಿದ್ದಲ್ಲಿ ಮಾತ್ರ ನಿಮ್ಮ ಎಲ್ಲಾ ಗುರಿಗಳನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಲಕಿಯರ ಪ್ರೌಢಶಾಲಾ ಉಪ ಪ್ರಾಂಶುಪಾಲ ಜಗದೀಶ್ ಹಿರೇಮಠ್ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾದ ಅಂಶಗಳನ್ನು ಸುಬ್ರಹ್ಮಣ್ಯ ಅವರು ಮನದಟ್ಟು ಮಾಡಿಕೊಟ್ಟಿದ್ದಾರೆ, ಬಹಳ ಅಮೂಲ್ಯವಾದ ಸಲಹೆಗಳನ್ನು ವಿದ್ಯಾರ್ಥಿನಿಯರಿಗೆ ನೀಡಿದ್ದಾರೆ, ಕಾರ್ಯಕ್ರಮವನ್ನು ಆಯೋಜಿಸಿ ಕೊಟ್ಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳಿಗೆ ಅಭಿನಂದನೆ ಹೇಳಿದ ಅವರು, ಸುಬ್ರಹ್ಮಣ್ಯ ನಿಮಗೆ ತಿಳಿಸಿ ಕೊಟ್ಟಿರುವ ಮಾಹಿತಿಯನ್ನು ನಿದ್ದೆ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಪ್ರಾಸ್ತಾವಿಕ ನುಡಿಯಲ್ಲಿ ಶಿಕ್ಷಕ ಶಶಿಧರ್ ಕಾರ್ಯಕ್ರಮದ ಮೂಲ ಉದ್ದೇಶವನ್ನು ವಿದ್ಯಾರ್ಥಿ ಕೊಟ್ಟರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ್ಕೆ ಹರಿಣಾಕ್ಷಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರಲ್ಲದೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಹೇಳಿದರು.