ಕನ್ನಡಪ್ರಭ ವಾರ್ತೆ ಮುಧೋಳ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಾಪೂರ ಗ್ರಾಮದ ರಂಗನಗೌಡ ಕಮಕೇರಿ ಎಂಬುವರ ಕಬ್ಬಿನ ಹೊಲದಲ್ಲಿ (ಭೂಮಿಯಲ್ಲಿ) ಕಳೆದ 15 ದಿನಗಳ ಹಿಂದೆ 20 ಅಡಿ ಆಳ, 10 ಅಡಿ ಅಗಲ ಅಳತೆಯ ದಿಢೀರ ಭೂಕುಸಿತ ಉಂಟಾಗಿದೆ. ಈ ಕುರಿತು ಮುಧೋಳ ತಹಸೀಲ್ದಾರರಿಗೆ ಹಾಗೂ ಭೂ ವಿಜ್ಞಾನಿಗಳ ಗಮನಕ್ಕೆ ತಂದಾಗ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಈ ಸಂಬಂಧ ರಂಗನಗೌಡ ಕಮಕೇರಿ ಅವರು ಪತ್ರಿಕೆಗೆ ಪ್ರಕ್ರಿಯಿಸಿ, ನಿಂಗಾಪೂರ ಗ್ರಾಮದ ಪಕ್ಕದಲ್ಲಿರುವ ಸಿಮೆಂಟ್ ಕಂಪನಿಯವರು ಸ್ಟೋನ್ ಬ್ಲಾಸ್ಟಿಂಗ್ ಮಾಡುವುದರಿಂದ ಸಿಮೆಂಟ್ ಕಾರ್ಖಾನೆಯ ಸುತ್ತಮುತ್ತಲಿನ ಮನೆಗಳಿಗೆ ದಕ್ಕೆ ಉಂಟಾಗುತ್ತಿದೆ. ಅಲ್ಲದೇ, ಕೆಲ ಭಾಗಗಳಲ್ಲಿ ಭೂಕುಸಿತ ಉಂಟಾಗುತ್ತಿದೆ. ಇದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದು, ತಕ್ಷಣ ಸ್ಟೊನ್ ಬ್ಲಾಸ್ಟಿಂಗ್ ನಿಲ್ಲಿಸಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.