ನಗರದ ತಾಲೂಕು ಕ್ರೀಡಾಂಗಣದಲ್ಲಿ ಭಾರತ ಸೇವಾ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ತಹಸೀಲ್ದಾರ್ ಯಲ್ಲಪ್ಪ ಗೊಣೆಪ್ಪನವರ ಮಾತನಾಡಿದರು.

ಶಿಗ್ಗಾಂವಿ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಭಾರತ ಸೇವಾ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ತಹಸೀಲ್ದಾರ್ ಯಲ್ಲಪ್ಪ ಗೊಣೆಪ್ಪನವರ ಮಾತನಾಡಿದರು.ದಿನನಿತ್ಯದ ಅಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲೂ ಸಹ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇದರಿಂದ ಮಕ್ಕಳು ದೈಹಿಕವಾಗಿ ಸದೃಢವಾಗುತ್ತಾರೆ. ಬೇಸಿಗೆ ರಜೆ ಸಂದರ್ಭದಲ್ಲಿ ಸಂಬಂಧಿಕರ ಊರುಗಳಿಗೆ ಅಡ್ಡಾಡಿ ತಮ್ಮ ಅಮೂಲ್ಯ ಸಮಯವನ್ನು ಹಾಳುಮಾಡುತ್ತಾರೆ. ಅದನ್ನು ಅರಿತ ಭಾರತ ಸೇವಾ ಸಂಸ್ಥೆಯು ಉಚಿತವಾಗಿ ಆಯೋಜಿಸಿರುವ ಬೇಸಿಗೆ ಶಿಬಿರವು ಪ್ರಶಂಸನೀಯ ಕಾರ್ಯವಾಗಿದೆ. ಇಂತಹ ಶಿಬಿರಗಳಲ್ಲಿ ತೊಡಗುವ ಮಕ್ಕಳು ಶಿಬಿರದಲ್ಲಿ ಕಲಿತ ಕ್ರೀಡೆಗಳನ್ನು ತಮ್ಮ ರಜಾ ದಿನಗಳ ನಂತರವೂ ಮುಂದುವರೆಸಿದರೆ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಇಲ್ಲಿಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ದುಂಡಿಗೌಡ್ರ ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಸವಣೂರ ತಾಲೂಕಿನ ದಂಡಾಧಿಕಾರಿಗಳಾದ ರವಿ ಕೊರವರ ಭಾಗವಹಿಸಿದ್ದರು. ಹಾಗೂ ರಮೇಶ ಸಾತನ್ನವರ, ರವಿ ಮಡಿವಾಳರ , ದೈಹಿಕ ಶಿಕ್ಷಕರುಗಳಾದ ಬಸವರಾಜ ಹೊಸಪೇಟೆ, ಭರತ ಕಳ್ಳಿಮನಿ, ಸಾಧಿಕ ಮಂಜುನಾಥ ಭಾಗವಹಿಸಿದ್ದರು. ನವೀನ ಸಾಸನೂರ, ವಿಶ್ವನಾಥ ಗಾಣಿಗೇರ ಚಂದ್ರು ಜಕ್ಕಣ್ಣವರ ಮಾಲತೇಶ ನಾಗರಾಜ ನಡಗೇರಿ ಉಪಸ್ಥಿತರಿದ್ದರು.