ಸಾರಾಂಶ
ಸರ್ಕಾರದ ಸಹಾಯ, ಸಹಕಾರದಿಂದ ಇಂದು ಸಹಕಾರಿ ಸಂಘ-ಸಂಸ್ಥೆಗಳು ಉಳಿದುಕೊಂಡಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರಿ ಸಂಸ್ಥೆಗಳಿಗೆ ಆರ್ಥಿಕ ಸಹಾಯ ನೀಡುತ್ತಿರುವುದರಿಂದ ಸಹಕಾರಿ ಸಂಘ-ಸಂಸ್ಥೆಯವರು ರೈತರಿಗೆ ಕಡಿಮೆ ಬಡ್ಡಿದರಲ್ಲಿ ಸಾಲ ನೀಡಲು ಸಾಧ್ಯವಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ಸರ್ಕಾರದ ಸಹಾಯ, ಸಹಕಾರದಿಂದ ಇಂದು ಸಹಕಾರಿ ಸಂಘ-ಸಂಸ್ಥೆಗಳು ಉಳಿದುಕೊಂಡಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರಿ ಸಂಸ್ಥೆಗಳಿಗೆ ಆರ್ಥಿಕ ಸಹಾಯ ನೀಡುತ್ತಿರುವುದರಿಂದ ಸಹಕಾರಿ ಸಂಘ-ಸಂಸ್ಥೆಯವರು ರೈತರಿಗೆ ಕಡಿಮೆ ಬಡ್ಡಿದರಲ್ಲಿ ಸಾಲ ನೀಡಲು ಸಾಧ್ಯವಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಭಾನುವಾರ ನಗರದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಪಿಕೆಪಿಎಸ್ ಗಳು ರೈತರಿಗೆ ಕಡಿಮೆ ಬಡ್ಡಿದರಲ್ಲಿ ಸಾಲವನ್ನು ನೀಡುತ್ತವೆ. ಸಾಲ ಪಡೆದ ರೈತರು ನಿಗದಿತ ಅವಧಿಯೊಳಗಾಗಿ ಮರುಪಾವತಿ ಮಾಡಬೇಕು. ಆಗಲೇ ರೈತರು ಮತ್ತು ಪಿಕೆಪಿಎಸ್ ಗಳು ಉಳಿಯಲು ಸಾಧ್ಯ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಮಣ್ಣ ಎಸ್. ತಳೇವಾಡ, ಹಣಮಂತ ಆರ್. ನಿರಾಣಿ ಅತಿಥಿ ಸ್ಥಾನವಹಿಸಿ ಮಾತನಾಡಿ, ಪಿಕೆಪಿಎಸ್ ಗಳಿಗೆ ಬಿಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ಸಹಾಯ ನೀಡುತ್ತಿರುವುದರಿಂದ ಅವು ಸಕ್ರೀಯವಾಗಿ ಕೆಲಸ ಮಾಡುತ್ತಲಿವೆ ಎಂದು ಹೇಳಿದರು.ಸಹಕಾರಿ ಧುರೀಣ ಡಾ.ಟಿ.ವಿ. ಅರಳಿಕಟ್ಟಿ, ಆರ್.ಎಂ. ಪಾಟೀಲ ಸಾಂದರ್ಭಿಕವಾಗಿ ಮಾತನಾಡಿ, ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಜೀವನಾಡಿಗಳಾಗಿವೆ ಎಂದರು.ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಹ.ಕದಮ್ ಅಧ್ಯಕ್ಷತೆ ವಹಿಸಿದ್ದರು. ಮುಧೋಳ ಗವಿಮಠ-ವಿರಕ್ತಮಠದ ಬಸಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮರೇಗುದ್ದಿ ಅಡವಿಮಠದ ನಿರುಪಾದೀಶ್ವರ ಸ್ವಾಮೀಜಿ, ರೂಗಿ ಅಡವಿ ಆಶ್ರಮದ ನಿತ್ಯಾನಂದ ಸ್ವಾಮಿಜಿ, ಬಂಡಿಗಣಿ ಮಠದ ಅನ್ನದಾನೇಶ್ವರ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು.
ಮುಧೋಳ ಪಿಕೆಪಿಎಸ್ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಕದಮ್, ಉಪಾಧ್ಯಕ್ಷೆ ಶೋಭಾ ಕಂಕಣವಾಡಿ, ನಿರ್ದೇಶಕರಾದ ಜಗನ್ನಾಥ ಮಾನೆ, ಶಿವಾಜಿರಾವ ಕಾಟೆ, ಅಶೋಕ ಕುಳಲಿ, ದಯಾನಂದ ನಾಡಗೌಡ, ಬಾದಶಹಾ ಕೌಜಲಗಿ, ಸುಧೀರ ಮುಗತಿ, ಅನೀಲ ಕುಮಕಾಲೆ, ಬಸಪ್ಪ ಮೇತ್ರಿ, ಮಂಜುನಾಥ ಮುಂಡಗನೂರ, ಸೋನುಬಾಯಿ ಫಡತಾರೆ, ಮುಖ್ಯ ಕಾರ್ಯನಿರ್ವಾಹಕ ಆನಂದ ಮಜ್ಜಗಿ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ನಗರಸಭೆ ಸದಸ್ಯ ಸುರೇಶ ಕಾಂಬಳೆ, ಅಶೋಕ ಕಿವಡಿ, ಬಸವಂತ ಕಾಟೆ, ಮಹಮ್ಮದ ಕೌಜಲಗಿ, ಮಹಾದೇವಪ್ಪ ಹೊಸಕೋಟಿ, ಟಿ.ವಿ. ಅರಳಿಕಟ್ಟಿ, ಶೇಖರ ಗಡ್ಡಿ, ಸೈದು ಬೋವಿ, ಆರ್.ಎಂ. ಪಾಟೀಲ, ಶ್ಯಾಮ ಕುಮಕಾಲೆ, ಕಿಶೋರ ಮಸೂರಕರ, ರಾಮನಗೌಡ ನಾಡಗೌಡ, ಎಸ್.ಎ. ಸೂರ್ಯವಂಶಿ, ಬಿಡಿಸಿಸಿ ಬ್ಯಾಂಕಿನ ಮಾರಾಟಾಧಿಕಾರಿ ಎಸ್.ಆರ್. ಬಾಡಗಿ, ಮಾಜಿ ಹಾಗೂ ಹಾಲಿ ಅಧ್ಯಕ್ಷರು, ನಿರ್ದೇಶಕರು ವೇದಿಕೆ ಮೇಲಿದ್ದರು.ಮಾರುತಿ ಮೋರೆ ಸ್ವಾಗತಿಸಿದರು. ಅನೀಲ ಕುಮಕಾಲೇ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಗೀತಾ ದಾಶ್ಯಾಳ ನಿರೂಪಿಸಿದರು, ಅಶೋಕ ಕುಳಲಿ ವಂದಿಸಿದರು.
ಪಿಕೆಪಿಎಸ್ ಗಳು ಸದೃಢವಾಗಿ ಬೆಳೆಯಬೇಕಾದರೆ ಆಡಳಿತ ಮಂಡಳಿಯವರು ಸಮಾನಮನಸ್ಕರಾಗಿ ಕೆಲಸ ಮಾಡಬೇಕು. ಸಿಬ್ಬಂದಿ ಮತ್ತು ರೈತರ ಜೊತೆ ಉತ್ತಮ ಸಂಬಂಧ, ಸಹಕಾರ ಹೊಂದಿರಬೇಕು.-ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವರು