ಬೈಕ್ ಸ್ಕಿಡ್ ಆಗಿ ಬಿದ್ದು ಶಿಕ್ಷಕ ಸಾವು

| N/A | Published : Jun 20 2025, 12:34 AM IST / Updated: Jun 20 2025, 09:01 AM IST

ಸಾರಾಂಶ

  ಬೈಕ್‌ ಸ್ಕಿಡ್‌ ಆಗಿ ಬಿದ್ದು ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಅಂಬಳನೂರ ಕ್ರಾಸ್ ಹತ್ತಿರ ಸಂಭವಿಸಿದೆ. ತಾಲೂಕಿನ ಕಣಕಾಲ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ, ಪಟ್ಟಣದ ವಿವೇಕಾನಂದ ಗಲ್ಲಿಯ ನಿವಾಸಿ ವಾಸುದೇವ ಹಂಚಾಟೆ (46) ಅಪಘಾತದಲ್ಲಿ ಮೃತಪಟ್ಟಿರುವ ಶಿಕ್ಷಕ.

ಬಸವನಬಾಗೇವಾಡಿ: ಶಾಲೆಯ ಕರ್ತವ್ಯಕ್ಕೆ ತೆರಳುವಾಗ ಬೈಕ್‌ ಸ್ಕಿಡ್‌ ಆಗಿ ಬಿದ್ದು ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಅಂಬಳನೂರ ಕ್ರಾಸ್ ಹತ್ತಿರ ಸಂಭವಿಸಿದೆ. ತಾಲೂಕಿನ ಕಣಕಾಲ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ, ಪಟ್ಟಣದ ವಿವೇಕಾನಂದ ಗಲ್ಲಿಯ ನಿವಾಸಿ ವಾಸುದೇವ ಹಂಚಾಟೆ (46) ಅಪಘಾತದಲ್ಲಿ ಮೃತಪಟ್ಟಿರುವ ಶಿಕ್ಷಕ.

 ಎಂದಿನಂತೆ ಶಿಕ್ಷಕ ವಾಸುದೇವ ಹಂಚಾಟೆ ಅವರು ಶಾಲಾ ಕರ್ತವ್ಯಕ್ಕೆ ತಮ್ಮ ಬೈಕ್ ಮೇಲೆ ತೆರಳುತ್ತಿದ್ದರು. ತಾಲೂಕಿನ ಅಂಬಳನೂರ ಕ್ರಾಸ್ ಹತ್ತಿರ ಏಕಾಏಕಿ ಬೈಕ್ ಸ್ಕಿಡ್ ಆಗಿದ್ದು, ಪರಿಣಾಮ ಶಿಕ್ಷಕನ ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದರು.

 ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಶಿಕ್ಷಕ ಮೃತಪಟ್ಟಿದ್ದಾರೆ. ಈ ಬಗ್ಗೆ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶಿಕ್ಷಕ ಪತ್ನಿ, ತಂದೆ-ತಾಯಿ, ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. 

ಮೃತ ಶಿಕ್ಷಕನಿಗೆ ಶಿಕ್ಷಕರು ತೀವ್ರ ಸಂತಾಪ ಸೂಚಿಸಿದ್ದಾರೆ.

Read more Articles on