ಶಿಕ್ಷಕರು ಸ್ಥಳೀಯರೊಂದಿಗೆ ಬೆರೆತು ಸಮಸ್ಯೆ ಪರಿಹರಿಸಿ: ಹಿರೇಕಲ್ಮಠ ಶ್ರೀ

| Published : Oct 07 2025, 01:02 AM IST

ಶಿಕ್ಷಕರು ಸ್ಥಳೀಯರೊಂದಿಗೆ ಬೆರೆತು ಸಮಸ್ಯೆ ಪರಿಹರಿಸಿ: ಹಿರೇಕಲ್ಮಠ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೌಢಶಾಲಾ ಶಿಕ್ಷಕರಾಗುವವರು ಗ್ರಾಮೀಣ ಪ್ರದೇಶದ ಜನರೊಂದಿಗೆ ಬೆರೆತು ಸ್ಥಳೀಯವಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಪೌರತ್ವ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹಿರೇಕಲ್ಮಠದ ಡಾ,.ಒಡೆಯರ್ .ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರೌಢಶಾಲಾ ಶಿಕ್ಷಕರಾಗುವವರು ಗ್ರಾಮೀಣ ಪ್ರದೇಶದ ಜನರೊಂದಿಗೆ ಬೆರೆತು ಸ್ಥಳೀಯವಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಪೌರತ್ವ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹಿರೇಕಲ್ಮಠದ ಡಾ,.ಒಡೆಯರ್ .ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಹತ್ತೂರು ಗ್ರಾಮದಲ್ಲಿ ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಎಸ್.ಜೆ.ವಿ.ಪಿ. ಬಿಇಡಿ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 3 ದಿನಗಳ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದರು.

3 ದಿನ ವಿಷಯ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿದ್ದು, ವಿದ್ಯಾರ್ಥಿಗಳು ಗ್ರಾಮದಲ್ಲಿ ಸ್ವಚ್ಚತೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನ ಜಾಗೃತಿ ಸಂದೇಶಗಳನ್ನು ನೀಡಲು ತಮ್ಮ ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಈ ಪೌರತ್ವ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಶ್ರೇಷ್ಠ ಗ್ರಾಮ:

ಶಿಬಿರವನ್ನು ನಡೆಸಲು ಹತ್ತಾರು ಊರು ಸುತ್ತಿದರೂ ಕೊನೆಗೇ ಹತ್ತೂರು ಗ್ರಾಮದ ಜನತೆ ಮುಕ್ತ ಮನಸ್ಸಿನಿಂದ ಶಿಬಿರವನ್ನು ನಡೆಸಲು ಕಾಲೇಜಿಗೆ ಸಂಪೂರ್ಣ ಸಹಕಾರ ನೀಡಲು ಮುಂದೆ ಬಂದಿದ್ದಕ್ಕೆ ಗ್ರಾಮವು ಸದಾ ಸುಭಿಕ್ಷೆಯಿಂದ ಕೂಡಿರಲಿ. ಹತ್ತೂರು ಗ್ರಾಮ ತಾಲೂಕಿನಲ್ಲಿ ಒಂದು ಉತ್ತಮ ಗ್ರಾಮವಾಗಿದೆ ಎಂದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ಎಂ.ಪ್ರಸನ್ನ ಪ್ರಶಿಶಿಕ್ಷಣಾರ್ಥಿಗಳಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿ, ವಿಶ್ವ ಹೊಣೆಗಾರಿಕೆಯ ಜತೆಗೆ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ಪೌರತ್ವ ಶಿಬಿರವು ಸಹಕಾರಿಯಾಗಲಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ದಾವಣಗೆರೆಯ ಮಾಗನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಟಿ.ಹಾಲೇಶಪ್ಪ ಕಾರ್ಯ-ಕಾಲ-ಕಾಸು ಈ 3ಕ್ಕೆ ಯಾರು ಮಹತ್ವ ಕೊಡುತ್ತಾರೋ ಅಂತಹವರು ಸಾಧಕರಾಗುತ್ತಾರೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಮಮತಾ ಮಾತನಾಡಿ, ಸಮುದಾಯದ ನಾಯಕತ್ವ ಗುಣಗಳ ಜತೆಗೆ ಪರಸ್ಪರ ಗೌರವ ಮತ್ತು ಸಹಕಾರ ಮನೋಭಾವವನ್ನು ಪ್ರಶಿಶಿಕ್ಷಣಾರ್ಥಿಗಳಲ್ಲಿ ಬೆಳೆಸುವ ಸದುದ್ದೇಶದಿಂದ ಪೌರತ್ವ ತರಬೇತಿ ಶಿಬಿರವು ಸಹಕಾರಿಯಾಗಲಿದೆ ಎಂದರು. ಬಿಇಡಿ ತರಬೇತಿ ಮುಗಿಸಿ ಶಿಕ್ಷಕರಾಗುವವರಿಗೆ ಮುಂದಿನ ಶಿಕ್ಷಕ ವೃತ್ತಿಯಲ್ಲಿ ಉತ್ತಮ ಶಿಕ್ಷಕರನ್ನಾಗಿಸುವ ನಿಟ್ಟಿನಲ್ಲಿ ಈ ಶಿಬಿರವು ಎಲ್ಲಾ ರೀತಿಯಲ್ಲೂ ಸಹಕಾರಿಯಾಗಲಿದ್ದು, ಶಿಬಿರವನ್ನು ಸದುಪಯೋಗ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಲ್ಲವ ಪ್ರೌಢಶಾಲೆಯ ಶಿಕ್ಷಕ ಕುಮಾರ್ ಮಾದೇನಹಳ್ಳಿ ಈ ಭಾಗದಲ್ಲಿ ಹಿರೇಕಲ್ಮಠದ ಲಿಂ.ಶ್ರೀಗಳವರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚ.ವಿ.ನಿರ್ದೇಶಕ ಅಮೃತಗೌಡ ದೊಡ್ಡಮನಿ, ಪ್ರಶಿಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ಶ್ರೀ ತಿರುಮಲ ಸೇವಾ ಸಮಿತಿಯ ಕಾರ್ಯದರ್ಶಿ ಚಂದ್ರಪ್ಪ, ಸದಸ್ಯರಾದ ಎಂ.ಜಯಪ್ಪ, ಶಿವಮೊಗ್ಗದ ಅಂಬೇಡ್ಕರ್ ವಸತಿಯುತ ಶಾಲೆಯ ದೈಹಿಕ ಶಿಕ್ಷಕ ಜಿ.ಆರ್.ಕಾಂತಕುಮಾರ್, ಸಹ ಪ್ರಾಧ್ಯಾಪಕರಾದ ಡಿ.ಎಂ.ನಿರುಪಮ, ಡಿ.ಬಿ.ರವೀಂದ್ರನಾಥ್, ಉಪನ್ಯಾಸಕರಾದ ಎಚ್.ಬಿ.ಲೋಕೇಶ್‌ಗೌಡ, ಯು.ಡಿ.ಜ್ಯೋತಿ, ಶಾಂಭವಿ ವಿ.ಪಾಟೀಲ್ ಮತ್ತು ಕಾಲೇಜಿನ ಸಿಬ್ಬಂದಿ, ಗ್ರಾಮದ ಮುಖಂಡರು ಇದ್ದರು.