ಈ ನೆಲದ ಸಂಸ್ಕೃತಿ ಬೆಸೆಯುವ ಕಲೆ ಜಾನಪದ

| Published : Feb 27 2025, 12:36 AM IST

ಸಾರಾಂಶ

ಸಮಾಜವನ್ನು ಕಟ್ಟುವ ಕಡೆಗೆ ಕಲಾವಿದರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಎರಡು ದಿನಗಳ ಜಾನಪದ ಸಂಭ್ರಮದಲ್ಲಿ ಸಂಸ್ಕೃತಿಯ ನೈಜತೆಯ ಸಮಾಜವನ್ನು ಕಟ್ಟುವ ಜವಾಬ್ದಾರಿಯು ಇವತ್ತಿನ ಕಲಾವಿದರು ಕೈಯಲ್ಲಿದೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕಾದರೆ ಕಲಾವಿದರು ಹಾಡು, ನಾಟಕ, ಹರಿಕಥೆ ಭಜನೆ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶಗಳನ್ನು ನೀಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರಸಮಾಜದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನಮಾನಸದಲ್ಲಿ ವಿಷಕಾರಿಯಾಗಿಬಿಟ್ಟಿವೆ. ಜನಪದವು ಈ ನೆಲದ ಸಂಬಂಧಗಳನ್ನು ಬೆಸೆಯುವ ಸಂಸ್ಕೃತಿಯನ್ನು ಹೊಸದಾಗಿ ಕಟ್ಟಿ ಮುಂದಿನ ಯುವ ಪೀಳಿಗೆಗೆ ತೋರಿಸಬೇಕಾದ ಅನಿವಾರ್ಯತೆ ಬಂದಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಜನಪರ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು, ಪೂರ್ವಜರು ಮಾತಿನ ಮೂಲಕವೇ ಮನಸ್ಸಿಗೆ ಹತ್ತಿರವಾದ ಸಂಬಂಧಗಳನ್ನು ಕಟ್ಟಿದ್ದಾರೆ. ಇವತ್ತು ನಮ್ಮ ನಡುವಿನ ಪೂರ್ವಜರು ಗೊತ್ತಿಲ್ಲ. ಅದೇ ಸಿನಿಮಾ ನಟರು ಮಾತ್ರ ಎಲ್ಲರಿಗೂ ಗೊತ್ತಿದೆ ಎಂದು ವಿಷಾದಿಸಿದರು.

ಕಲಾವಿದ ಮುಗ್ಧನಾಗಿರಬೇಕುಇವತ್ತಿನ ಕಲಾವಿದರು ಮಕ್ಕಳಂತೆ ಮುಗ್ಧತೆಯಿಂದ ಇರಬೇಕು. ಸಮಾಜವನ್ನು ಕಟ್ಟುವ ಕಡೆಗೆ ಕಲಾವಿದರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಎರಡು ದಿನಗಳ ಜಾನಪದ ಸಂಭ್ರಮದಲ್ಲಿ ಸಂಸ್ಕೃತಿಯ ನೈಜತೆಯ ಸಮಾಜವನ್ನು ಕಟ್ಟುವ ಜವಾಬ್ದಾರಿಯು ಇವತ್ತಿನ ಕಲಾವಿದರು ಕೈಯಲ್ಲಿದೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕಾದರೆ ಕಲಾವಿದರು ಹಾಡು, ನಾಟಕ, ಹರಿಕಥೆ ಭಜನೆ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶಗಳನ್ನು ನೀಡಬೇಕು ಎಂದರು.ಕಲಾವಿದರು, ಶರಣರು, ಸಂತರ ಕಾಲದಿಂದಲೂ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ದಾರ್ಶನಿಕರ ನೆಲದಲ್ಲಿ ಜನಪದ ಇದೆ. ಅದು ಮಾಯಾಲೋಕದಲ್ಲಿ ಸಿಲುಕಿ ಅಪಾಯಗಳನ್ನು ಎದುರಿಸಬೇಕಾಯಿತು. ಜನಪದದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಜನಪರ ಜೀವಪರ ಮನುಷ್ಯ ಪರವಾದ ಹಾಡುಗಳನ್ನು ಕೊಟ್ಟಿದ್ದಾರೆ. ಕಲಾವಿದರಲ್ಲಿ ಮಗುವಾಗಿ ಮುಗ್ಧ ಪ್ರೀತಿ ಬರಬೇಕು. ಕೇವಲ ಕೆಲವು ಕೂಟಕ್ಕೆ ಸೀಮಿತವಾಗಬಾರದು. ಕಲಾವಿದರು ಇಲ್ಲದೇ ಜೀವಪರವಾರವಾಗಿರಲು ಸಾಧ್ಯವಿಲ್ಲ ಎಂದರು.ವಾರಕ್ಕೊಮ್ಮೆ ಕಾರ್ಯಕ್ರಮ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕಲಾವಿದರು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಕಲೆ ಎಂಬುದು ನಮ್ಮ ಆಸ್ತಿಯಾಗಿದೆ ಅದನ್ನು ತೋರಿಸುವುದು ನಮ್ಮಂತವರ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಇರುವ ಕಲಾವಿದರನ್ನು ಮತ್ತು ಕಲೆಯನ್ನು ಉಳಿಸಿ ಅಭಿವೃದ್ಧಿ ಮಾಡಬೇಕು ಕೋಲಾರ ಬಯಲುಸೀಮೆ ಪ್ರದೇಶವಾಗಿದೆ. ಇಲ್ಲಿ ಕಲೆಗಳನ್ನು ಮರೆಯಬಾರದು. ಮುಂದೆ ಕೆರೆ ಮತ್ತು ರಾಜಕಾಲುವೆ ಮರೆಯುವ ಪರಿಸ್ಥಿತಿ ಬರುತ್ತದೆ ಅಂತಹ ಸಂದರ್ಭ ಬರಬಾರದು ಕಲೆಯ ಉಳಿವಿಗೆ ರಂಗಮಂದಿರದಲ್ಲಿ ವಾರಕ್ಕೊಮ್ಮೆ ಕಾರ್ಯಕ್ರಮ ಮಾಡಲಿ ಜೊತೆಗೆ ಇದ್ದು ಪೋತ್ಸಾಹಿಸಲಾಗುತ್ತದೆ ಎಂದರು.ಅಕಾಡೆಮಿ ಘಟಕ ಸ್ಥಾಪಿಸಿ

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕಲೆ ಎಂಬುದು ಎಲ್ಲರಿಗೂ ಬರುವುದಿಲ್ಲ. ಕಲಾವಿದರನ್ನು ಪೋತ್ಸಾಹಿಸುವುದು ಕೂಡ ನಮ್ಮ ಜವಾಬ್ದಾರಿಯಾಗಬೇಕು. ಜಿಲ್ಲೆಯ ಕಲಾವಿದರನ್ನು ಗುರುತಿಸಿ ಪೋತ್ಸಾಹಿಸಲು ಜಿಲ್ಲಾ ಕೇಂದ್ರದಲ್ಲಿ ಜಾನಪದ ಅಕಾಡೆಮಿಯ ಶಾಖೆಯನ್ನು ಪ್ರಾರಂಭ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಮೊಬೈಲ್ ಮಾಯಾಲೋಕದಲ್ಲಿ ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮರೆಯಾಗಬಾರದು ಪ್ರತಿ ವರ್ಷ ಇಂತಹ ಆಚರಣೆ ನಡೆಯುವಂತಾಗಬೇಕು ಎಂದರು.ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಜನಪರ ಉತ್ಸವ ಜಿಲ್ಲೆಗೆ ಕೊಟ್ಟ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಲಾಗಿದೆ ಜನಪದ ಕಲೆ ಮರೆಯುವ ಸಂದರ್ಭದಲ್ಲಿ ಸರ್ಕಾರ ಅವಕಾಶ ಕೊಟ್ಟಿದೆ. ಇಂತಹ ಕಲೆಗಳು ಹಿಂದಿನ ಕಾಲದಲ್ಲಿ ನೋಡಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಇತ್ತು ಇವತ್ತಿನ ಮಕ್ಕಳಿಗೆ ವೇದಿಕೆ ಮಾಡಿ ತೋರಿಸಬೇಕಾಗಿದೆ ಜಿಲ್ಲೆಯಲ್ಲಿ ಜನಪದ ಕಲಾವಿದರು ಹೆಚ್ಚು ಇದ್ದು ಜಿಲ್ಲೆಗೆ ಹೆಸರು ತಂದಿದ್ದಾರೆ. ಪ್ರತಿ ಹಂತದಲ್ಲಿ ಕಲಾವಿದರಿಗೆ ಸಹಕಾರ ಕೊಡುತ್ತೇನೆ ಎಂದರು.ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಜಿಪಂ ಸಿಇಒ ಡಾ ಪ್ರವೀಣ್ ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಜಿಪಂ ಕಾರ್ಯದರ್ಶಿ ಶಿವಕುಮಾರ್, ಎಡಿಸಿ ಮಂಗಳಾ, ಎಸಿ ಡಾ ಮೈತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಛಲವಾದಿ, ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಇದ್ದರು.