ಶರಣರ ಬದುಕು ವಿಶ್ವವಿದ್ಯಾಲಯವಿದ್ದಂತೆ- ಪರಣ್ಣ ಮುನವಳ್ಳಿ

| Published : Dec 18 2023, 02:00 AM IST

ಸಾರಾಂಶ

ಅಮರಗುಂಡಪ್ಪ ಅರಳಿ ದತ್ತಿಯನ್ನು ಗಂಗಾವತಿ ನಗರದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 2022-23ನೇ ಸಾಲಿನಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಗಂಗಾವತಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ನೇಹ ವಿ. ಕೃಷ್ಣ ಅವರಿಗೆ ಪುರಸ್ಕಾರ ನೀಡಲಾಯಿತು.

ಗಂಗಾವತಿ: ನಗರದ ಕೆಎಲ್‌ಇ ಮಹಾವಿದ್ಯಾಲಯದಲ್ಲಿ ತಾಲೂಕು ಕಸಾಪನಿಂದ ದತ್ತಿ ಉಪನ್ಯಾಸ ಜರುಗಿತು.ಕಾರ್ಯಕ್ರಮವನ್ನು ಕಸಾಪ ದತ್ತಿದಾನಿ ಪರಣ್ಣ ಮುನವಳ್ಳಿ ಉದ್ಘಾಟಿಸಿದರು.ಸಂದರ್ಭದಲ್ಲಿ ಉಪನ್ಯಾಸಕ ಶರಣಬಸಪ್ಪ ಬಿಲಿಎಲೆ ಮಾತನಾಡಿ, ಶರಣರ ಜೀವನ ನಮಗೆ ಜೀವನಪೂರ್ತಿ ಮಾರ್ಗದರ್ಶನ ನೀಡುತ್ತದೆ. ಅವರ ಬದುಕು ಒಂದು ವಿಶ್ವವಿದ್ಯಾಲಯವಿದ್ದಂತೆ ಯಾವ ಸಂದರ್ಭದಲ್ಲಿಯೂ ಯಾವ ಸಮಸ್ಯೆಯಲ್ಲಿಯೂ ನಮಗೆ ಉತ್ತರ ದೊರೆಯಬಹುದಾದ ಒಂದು ಸಂಪನ್ಮೂಲವೆಂದರೆ ಅದು ಶರಣರ ಬದುಕು ಎಂದರು.ಮುಖ್ಯಅತಿಥಿಯಾಗಿ ಕೆಎಲ್‌ಇ ಮಹಾವಿದ್ಯಾಲಯದ ಸ್ಥಾನಿಕ ಕಾರ್ಯಾಧ್ಯಕ್ಷ, ದತ್ತಿದಾನಿ ಗಿರಿಯಪ್ಪ ಹೊಸ್ಕೆರಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಮಹೆಬೂಬ್ ಕಿಲ್ಲೇದಾರವರು ಹಾಗೂ ವಚನ ಸಾಹಿತ್ಯದ ಬಗ್ಗೆ ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮೇಶ್ ಕಲ್ಮಂಗಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಲಿಂಗೈಕ್ಯ ಅಮರಪ್ಪ ಅಮರಗುಂಡಪ್ಪ ಸ್ಮರಣಾರ್ಥ ಕೊಪ್ಪಳ ಜಿಲ್ಲಾ ಬರಹಗಾರರ ಕಾವ್ಯ ಕೃತಿಗೆ ಈ ಪುರಸ್ಕಾರಕ್ಕೆ "ಸಂತೆಯೊಳಗಣ ಮೌನ " ಕೃತಿಯ ಕವಿ ಚನ್ನಬಸವ ಆಸ್ಪರಿ ಅವರಿಗೆ ಪುರಸ್ಕಾರ ನೀಡಲಾಯಿತು.ಲಿಂ.ಜಡೆಮ್ಮ ಅಮರಗುಂಡಪ್ಪ ಅರಳಿ ಸ್ಮರಣಾರ್ಥ ನೀಡುವ ಕಥಾ ಸಂಕಲನ ಪುರಸ್ಕಾರವನ್ನು ಲೇಖಕಿ ಶ್ರೀದೇವಿ ಕೃಷ್ಣಪ್ಪ ಅವರ "ಬೇಲಿಯೋಗೊಳಗಿನ ಬಟ್ಟೆ " ಕೃತಿಗೆ ಪುರಸ್ಕಾರ ನೀಡಲಾಯಿತು.ಲಿಂ.ಅಮರಗುಂಡಪ್ಪ ಅರಳಿ ದತ್ತಿಯನ್ನು ಗಂಗಾವತಿ ನಗರದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 2022-23ನೇ ಸಾಲಿನಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಗಂಗಾವತಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ನೇಹ ವಿ. ಕೃಷ್ಣ ಅವರಿಗೆ ಪುರಸ್ಕಾರ ನೀಡಲಾಯಿತು.ಕಾರ್ಯಕ್ರಮದಲ್ಲಿ ಅಮರಗುಂಡಪ್ಪ ಅರಳಿ, ಮಹಾಂತೇಶ್ ಕೋಟೆ, ವಿಜಯ ಶ್ರೀ ಗುಂಜಳ್ಳಿ, ನಿಜಲಿಂಗಪ್ಪ ಮೆಣಸಿಗಿ, ಸಿದ್ದಲಿಂಗನಗೌಡ ಪಾಟೀಲ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಕಸಾಪ ಅಧ್ಯಕ್ಷ ಶ್ರೀನಿವಾಸ್ ಅಂಗಡಿ, ಅಧ್ಯಕ್ಷತೆಯನ್ನು ಶರಣೇಗೌಡ ಪೊಲೀಸ್ ಪಾಟೀಲ್ ವಹಿಸಿದ್ದರು.ಕಸಾಪ ಕಾರ್ಯದರ್ಶಿ ಶಿವಾನಂದ್ ತಿಮ್ಮಾಪುರ ನಿರೂಪಿಸಿದರು. ಆನಂದ್ ಸ್ವಾಗತಿಸಿದರು. ನಿಂಗಪ್ಪ ಗುಂಡೂರ ವಂದಿಸಿದರು.