ಶರನ್ನವರಾತ್ರಿಯ ಸಾಮೂಹಿಕ ದುರ್ಗಾ ಹೋಮ ಸಂಪನ್ನ

| Published : Oct 01 2025, 01:00 AM IST

ಸಾರಾಂಶ

ನರಸಿಂಹರಾಜಪುರ, ಪಟ್ಟಣದ ಶ್ರೀ ವಿದ್ಯಾಗಣಪತಿ ಪೆಂಡಾಲ್‌ನಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿರುವ ದೇವಿ ಸನ್ನಿಧಿಯಲ್ಲಿ ಮಂಗಳವಾರ ಪುರೋಹಿತ ಜಗದೀಶ್ ಭಟ್ ನೇತೃತ್ವದಲ್ಲಿ ಸಾಮೂಹಿಕ ಶ್ರೀ ದುರ್ಗಾ ಹೋಮ ನಡೆಯಿತು.

ದೇವಿಯ ವಿಸರ್ಜನೆ ಅ.2ರ ಗುರುವಾರ ನಡೆಯಲಿದೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣದ ಶ್ರೀ ವಿದ್ಯಾಗಣಪತಿ ಪೆಂಡಾಲ್‌ನಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿರುವ ದೇವಿ ಸನ್ನಿಧಿಯಲ್ಲಿ ಮಂಗಳವಾರ ಪುರೋಹಿತ ಜಗದೀಶ್ ಭಟ್ ನೇತೃತ್ವದಲ್ಲಿ ಸಾಮೂಹಿಕ ಶ್ರೀ ದುರ್ಗಾ ಹೋಮ ನಡೆಯಿತು.

ಮಧ್ಯಾಹ್ನ 1 ಗಂಟೆಗೆ ಹೋಮದ ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದು ಎಲ್ಲಾ ಭಕ್ತಾಧಿಗಳಿಗೂ ಅನ್ನ ಸಂತರ್ಪಣಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎಸ್.ಎಸ್. ಶೇಷಗಿರಿ,ಕಾರ್ಯದರ್ಶಿ ಎನ್.ಎಂ.ಕಾರ್ತಿಕ್, ಖಜಾಂಚಿ ಎಂ.ಸಿ.ಗುರುಶಾಂತಪ್ಪ, ಪದಾಧಿಕಾರಿಗಳಾದ ಎಚ್.ಕೆ.ರವಿ, ಜಿ.ದಿವಾಕರ,ಕೆ.ಪ್ರಶಾಂತ್.ಎಲ್.ಶೆಟ್ಟಿ,ಎಸ್.ಸತೋಷ್,ಕಮ್ತಿವಾಸಪ್ಪಗೌಡ,ಮಾವಿನಮನೆ ಮಂಜುನಾಥ್, ಎಸ್.ಎಸ್.ಜಗದೀಶ್, ಜಾನಕೀರಾಂರೆಡ್ಡಿ, ಮಧುಶೆಟ್ಟಿ,ವೈ.ಎಸ್.ರವಿ,ಡಿ.ಜಿ.ಕುಮಾರ, ನರೇಶ್‌ಲಾಡ್, ಟಿ.ಎಂ.ನಾಗರಾಜ್,ಸುರಭಿರಾಜೇಂದ್ರ, ನಾಗಾರ್ಜುನ, ಶಶಿಧರ,ಜಯಂತ್,ನಾಗೇಂದ್ರ,ಚಿನ್ಮಯ್,ನವೀನ,ಸತೀಶ ಹಾಗೂ ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

ಗುರುವಾರ ವಿಸರ್ಜನೆ: ದೇವಿಯ ವಿಸರ್ಜನಾ ಕಾರ್ಯಕ್ರಮ ಅ.2 ರ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಮೇದರ ಬೀದಿ ಶ್ರೀ ಅಂತರಘಟ್ಟಮ್ಮ ದೇವಿ, ಹಳೇಪೇಟೆ ಶ್ರೀ ಗುತ್ಯಮ್ಮ ದೇವಿ, ಕೊಟ್ಟೂರು ಬಸವೇಶ್ವರ ದೇವರೊಂದಿಗೆ ಮಾರನವಮಿ ಬಯಲಿಗೆ ತೆರಳಿ ಅಲ್ಲಿ ಅಂಬು ಹೊಡೆಯುವ, ಬನ್ನಿ ಮುರಿಯುವ ಕಾರ್ಯಕ್ರಮ ಮುಗಿಸಿಕೊಂಡು, ಮೆರವಣಿಗೆ ಯಲ್ಲಿ ಮೆಣಸೂರು ಭದ್ರಾ ಹಿನ್ನೀರಿಗೆ ತರಲಾಗುವುದು.

ಮೆಣಸೂರು ಭದ್ರಾ ಹಿನ್ನೀರಿನ ತಟದಲ್ಲಿ ರಾತ್ರಿ 8 ಗಂಟೆಗೆ ರಾಘ ಮಯೂರಿ ಅಕಾಡೆಮಿ ಅವರಿಂದ ಭರತನಾಟ್ಯ, ಮಧುರ ಮಧುರವೀ ಮಂಜುಳ ಗಾನ ಖ್ಯಾತಿಯ ಗಾಯಕರು ಹಾಗೂ ಅನುಪಮ ಸುಗಮ ಸಂಗೀತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಿನ್ನೀರಿನ ತಟದಲ್ಲಿ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ, ವೈಭವಯುತವಾದ ತೆಪ್ಪೋತ್ಸವ ನಡೆಸಿ, ದೇವಿ ವಿಗ್ರಹವನ್ನು ಭದ್ರಾ ಹಿನ್ನೀರಿನಲ್ಲಿ ಜಲಸ್ಥಂಭನಗೊಳಿಸಲಾಗುವುದು. ಭಕ್ತಾಧಿಗಳು ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿ ಅಧ್ಯಕ್ಷ ಎಸ್.ಎಸ್.ಶೇಷಗಿರಿ ಮನವಿ ಮಾಡಿದ್ದಾರೆ