ತಾಲೂಕು ಒಕ್ಕಲಿಗರ ಸಂಘ ಹೊಸ ಆಡಳಿತ ಮಂಡಳಿ ರಚಿಸುವ ಪರಮಾಧಿಕಾರ ಸಾ.ರಾ. ಮಹೇಶ್ ಹೆಗಲಿಗೆ

| Published : Dec 30 2024, 01:02 AM IST

ತಾಲೂಕು ಒಕ್ಕಲಿಗರ ಸಂಘ ಹೊಸ ಆಡಳಿತ ಮಂಡಳಿ ರಚಿಸುವ ಪರಮಾಧಿಕಾರ ಸಾ.ರಾ. ಮಹೇಶ್ ಹೆಗಲಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮುದಾಯ ಭವನ ಸೂಕ್ತ ನಿರ್ವಹಣೆ ಇಲ್ಲದೆ ಆದಾಯಕ್ಕೆ ಕತ್ತರಿ ಬಿದ್ದಿದ್ದು ಅದನ್ನು ನಿರ್ವಹಿಸುವುದರ ಜೊತೆಗೆ ಸಂಘವನ್ನು ಸದೃಢವಾಗಿ ಕಟ್ಟಬೇಕೆಂದು ಸಲಹೆ

ಕನ್ನಡಪ್ರಭ ವಾರ್ತೆ ಕೆ.ಆರ್‌. ನಗರ

ತಾಲೂಕು ಒಕ್ಕಲಿಗರ ಸಂಘವನ್ನು ವಿಸರ್ಜನೆ ಮಾಡಿ ಹೊಸದಾಗಿ ಆಡಳಿತ ಮಂಡಳಿ ರಚಿಸುವ ಪರಮಾಧಿಕಾರವನ್ನು ಮಾಜಿ ಸಚಿವ ಸಾ.ರಾ. ಮಹೇಶ್ ಅವರಿಗೆ ನೀಡಲಾಯಿತು.

ಪಟ್ಟಣದ ಎಚ್‍.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಭಾನುವಾರ ಸಾ.ರಾ. ಮಹೇಶ್ ನೇತೃತ್ವದಲ್ಲಿ ನಡೆದ ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸಮಾಜದ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು, ನೂತನ ಆಡಳಿತ ಮಂಡಳಿಗೆ ಸಮರ್ಥರನ್ನು ನೇಮಿಸುವಂತೆ ಸಭೆಯಲ್ಲಿದ್ದವರು ಮನವಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ಸಮುದಾಯ ಭವನ ಸೂಕ್ತ ನಿರ್ವಹಣೆ ಇಲ್ಲದೆ ಆದಾಯಕ್ಕೆ ಕತ್ತರಿ ಬಿದ್ದಿದ್ದು ಅದನ್ನು ನಿರ್ವಹಿಸುವುದರ ಜೊತೆಗೆ ಸಂಘವನ್ನು ಸದೃಢವಾಗಿ ಕಟ್ಟಬೇಕೆಂದು ಸಲಹೆ ನೀಡಿದರು.

ಸಮಾಜದ ಮುಖಂಡರ ಸಲಹೆ ಆಲಿಸಿ ಮಾತನಾಡಿದ ಮಾಜಿ ಸಚಿವ ಸಾ.ರಾ. ಮಹೇಶ್ ಅವರು, ಸಮಾಜದ ಪ್ರಮುಖರೊಂದಿಗೆ ಚರ್ಚಿಸಿ ನೂತನ ಆಡಳಿತ ಮಂಡಳಿ ನೇಮಕ ಮಾಡುವುದಾಗಿ ಘೋಷಿಸಿದರು.

ಸಮಾಜದ ಹಿತಕ್ಕೆ ಪೂರಕವಾಗಿ ಕೆಲಸ ಮಾಡುವವರನ್ನು ನೇಮಕ ಮಾಡಿ, ಮುಂದಿನ ದಿನಗಳಲ್ಲಿ ಭವನ ನಿರ್ವಹಣೆ ಮಾಡಿ ಇತರ ಅಭಿವೃದ್ದಿ ಕೆಲಸ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಿದ್ದು, ಇದಕ್ಕೆ ಸರ್ವರೂ ಸಹಕಾರ ನೀಡಬೇಕು ಎಂದರು. ಸಭೆಯ ನಿರ್ಣಯಕ್ಕೆ ಬದ್ದರಾದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ 121ನೇ ಜಯಂತಿ ಅಚರಿಸಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್, ಒಕ್ಕಲಿಗ ಸಮಾಜದ ಹಿರಿಯ ಮುಖಂಡರಾದ ಎಸ್.ಪಿ. ತಮ್ಮಯ್ಯ, ಡಾ.ಎಸ್.ಪಿ. ಯೋಗಣ್ಣ, ಮೆಡಿಕಲ್ ರಾಜಣ್ಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ‌. ಅಣ್ಣೇಗೌಡ, ಹಿರಿಯ ಉಪಾಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ, ಎಚ್.ಪಿ. ಪರಶುರಾಂ, ಕಾರ್ಯದರ್ಶಿ ಸಿ.ಎಸ್. ರಾಮಲಿಂಗು, ಎಂಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ವಕೀಲ ಎ. ತಿಮ್ಮಪ್ಪ, ಮುಖಂಡರಾದ ಎಸ್.ಎಸ್. ಸಂದೇಶ್, ಎಂ.ಜೆ. ರಮೇಶ್, ಎಂ.ಜೆ. ಕುಮಾರ್, ಕೆ.ಎಲ್. ರಮೇಶ್, ಎಚ್.ಪಿ. ಶಿವಣ್ಣ, ಹಳಿಯೂರು ಮದುಚಂದ್ರ, ಅನೀಪ್ ಗೌಡ, ಬಿ. ರಮೇಶ್, ಬಿ.ಆರ್. ಕುಚೇಲ, ಎಚ್.ಕೆ. ಸುಜಯ್, ಎಸ್.ಟಿ. ಕೀರ್ತಿ, ಸಾ.ರಾ. ತಿಲಕ್, ಮಿರ್ಲೆ ಧನಂಜಯ್, ರಾಧಾಕೃಷ್ಣ, ರಾಮಪ್ರಸಾದ್ ಮೊದಲಾದವರು ಇದ್ದರು.