ಸಾಹಿತ್ಯದಲ್ಲಿ ಮಾಡಬೇಕಿರುವ ಕೆಲಸಗಳು ನನಗೆ ಮುಖ್ಯ

| Published : Oct 04 2025, 12:00 AM IST

ಸಾರಾಂಶ

‘ರಾಜಕೀಯ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ವೈಯುಕ್ತಿಕ ದೃಷ್ಟಿಯಲ್ಲಿ ಚರ್ಚೆ ಮಾಡುವ ಆಸಕ್ತಿ ನನಗೆ ಯಾವತ್ತೂ ಇಲ್ಲ. ಅಂತಹ ವಿಷಯಕ್ಕೆ ನಾನು ಬರಲ್ಲ. ನಾನು ಸಾಹಿತ್ಯದಲ್ಲಿ ಮಾಡಿರುವ ಹಾಗೂ ಮಾಡಬೇಕಿರುವ ಕೆಲಸಗಳು ಕೆಲಸ ನನಗೆ ಮುಖ್ಯ ಎಂದು ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ಪುರಸ್ಕೃತ ಅನುವಾದಕಿ ದೀಪಾ ಭಾಸ್ತಿ ಹೇಳಿದರು. ‘ಮೂಲ ಕರ್ತೃ ಹಾಸನದ ಬಾನು ಮುಷ್ತಾಕ್ ಅವರು. ಬುಕರ್ ಪ್ರಶಸ್ತಿ ಅನುವಾದಿತ ಕೃತಿಗೆ ಕೊಡುವುದು ಎಂದು ನಿಯಮ ಇದೆ. ಅದರಲ್ಲಿ ಅವರು ಬೇರೆ ಬೇರೆ ಮಾಡಲ್ಲ. ಅನುವಾದಕರು ಇದ್ದ ತಕ್ಷಣ ಲೇಖಕರು ಮುಖ್ಯವಲ್ಲ ಅಥವಾ ಲೇಖಕರು ಇದ್ದ ತಕ್ಷಣ ಅನುವಾದಕರು ಮುಖ್ಯವಲ್ಲ ಎನ್ನುವ ರೀತಿ ಆಯ್ಕೆ ಮಂಡಳಿಯವರು ನೋಡುವುದಿಲ್ಲ. ಪ್ರಶಸ್ತಿ ಹಣ ಸಮನಾಗಿ ಹಂಚಿಕೆ ಮಾಡುತ್ತಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

‘ರಾಜಕೀಯ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ವೈಯುಕ್ತಿಕ ದೃಷ್ಟಿಯಲ್ಲಿ ಚರ್ಚೆ ಮಾಡುವ ಆಸಕ್ತಿ ನನಗೆ ಯಾವತ್ತೂ ಇಲ್ಲ. ಅಂತಹ ವಿಷಯಕ್ಕೆ ನಾನು ಬರಲ್ಲ. ನಾನು ಸಾಹಿತ್ಯದಲ್ಲಿ ಮಾಡಿರುವ ಹಾಗೂ ಮಾಡಬೇಕಿರುವ ಕೆಲಸಗಳು ಕೆಲಸ ನನಗೆ ಮುಖ್ಯ ಎಂದು ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ಪುರಸ್ಕೃತ ಅನುವಾದಕಿ ದೀಪಾ ಭಾಸ್ತಿ ಹೇಳಿದರು.ಪಟ್ಟಣದಲ್ಲಿ ದಸರಾ ಮೆರವಣಿಗೆ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಉದ್ಘಾಟನೆಗೆ ತಮ್ಮನ್ನು ಕಡೆಗಣಿಸಿರುವ ಬಗೆಗಿನ ಟೀಕೆಗಳ ಬಗ್ಗೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಬಂದಿರುವುದು ನಮ್ಮ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆಯ ವಿಷಯ. ವೈಯುಕ್ತಿಕವಾಗಿಯೂ ಹೆಮ್ಮೆಯ ವಿಷಯ. ಇದು ಮೊದಲ ಬಾರಿಗೆ ಮೂಲ ಕನ್ನಡ ಕೃತಿಗೆ ಬಂದಿರುವ ಪ್ರಶಸ್ತಿ. ಭಾರತದ ಮೊದಲ ಅನುವಾದಕಿಗೆ ಅಂದರೆ ನನಗೆ ಬಂದಿರುವ ಪ್ರಶಸ್ತಿ. ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

‘ಮೂಲ ಕರ್ತೃ ಹಾಸನದ ಬಾನು ಮುಷ್ತಾಕ್ ಅವರು. ಬುಕರ್ ಪ್ರಶಸ್ತಿ ಅನುವಾದಿತ ಕೃತಿಗೆ ಕೊಡುವುದು ಎಂದು ನಿಯಮ ಇದೆ. ಅದರಲ್ಲಿ ಅವರು ಬೇರೆ ಬೇರೆ ಮಾಡಲ್ಲ. ಅನುವಾದಕರು ಇದ್ದ ತಕ್ಷಣ ಲೇಖಕರು ಮುಖ್ಯವಲ್ಲ ಅಥವಾ ಲೇಖಕರು ಇದ್ದ ತಕ್ಷಣ ಅನುವಾದಕರು ಮುಖ್ಯವಲ್ಲ ಎನ್ನುವ ರೀತಿ ಆಯ್ಕೆ ಮಂಡಳಿಯವರು ನೋಡುವುದಿಲ್ಲ. ಪ್ರಶಸ್ತಿ ಹಣ ಸಮನಾಗಿ ಹಂಚಿಕೆ ಮಾಡುತ್ತಾರೆ ಎಂದು ಹೇಳಿದರು.ಯಾರು ಏನು ಹೇಳಿದ್ರು, ಏನು ಹೇಳಲಿಲ್ಲ ಎಂದು ಚರ್ಚೆ ಮಾಡುವ ಬದಲು, ಸಾಹಿತ್ಯದಲ್ಲಿ ಮುಂದೆ ಏನಾಗಬಹುದು? ಅದರ ಪ್ರಭಾವದಿಂದ ಮುಂದೆ ಇನ್ನೇನು ಬರಬಹುದು ಎಂದು ನೋಡುವುದು ಮುಖ್ಯ ಎಂದರು. ‘ತಮಿಳು, ತೆಲುಗು, ಹಿಂದೆ, ಬಂಗಾಲಿ, ಮಲೆಯಾಳಂ, ಉರ್ದು ಭಾಷೆಗೆ ಹೋಲಿಸಿದರೆ, ಕನ್ನಡ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗುವುದು ತುಂಬಾ ಕಡಿಮೆ. ನಮ್ಮಲ್ಲಿ ಅದ್ಭುತವಾದ ಕೃತಿಗಳಿವೆ. ಎಸ್.ಎಲ್.ಭೈರಪ್ಪ ಅವರಿಂದ ಹಿಡಿದು ಹಲವರ ಕೃತಿಗಳು ಅನುವಾದ ಆಗಿವೆ. ಕುವೆಂಪು, ಕಾರಂತರು ಇದ್ದಾರೆ. ಅವುಗಳನ್ನು ಕನ್ನಡೇತರರು ಹೇಗೆ ಓದುವಂತೆ ಮಾಡಬಹುದು ಎಂಬ ಚರ್ಚೆ ಮಾಡುವುದು ಸೂಕ್ತ ಎಂದು ಅನ್ನಿಸುತ್ತದೆ’ ಎಂದರು.

‘ಕನ್ನಡ ಸಾಹಿತ್ಯಕ್ಕೆ 1,500 ವರ್ಷಗಳ ಇತಿಹಾಸವಿದೆ. ನಮ್ಮ ನಂತರವೂ ಕನ್ನಡ ಉಳಿದುಕೊಳ್ಳುತ್ತದೆ. ನಮ್ಮಿಂದ ಕನ್ನಡ ಅಲ್ಲ, ನಾವಿರುವುದು ಕನ್ನಡಕ್ಕಾಗಿ. ನಾನು ಕೆಲಸ ಮಾಡುವುದು ಕನ್ನಡಕ್ಕಾಗಿ. ವೈಯುಕ್ತಿಕ ಟೀಕೆಗಳ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ’ ಎಂದು ಹೇಳಿದರು.

====================

ಫೋಟೋ:

ಅರಕಲಗೂಡು ದಸರಾ ಉದ್ಘಾಟನೆಗೆ ಆಗಮಿಸಿದ್ದ ಹೆಸರಾಂತ ಅನುವಾದಕಿ, ಬುಕರ್‌ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಲಾಯಿತು.