ಕೆ.ಆರ್. ನಗರ ಪುರಸಭೆ ಆಡಳಿತ ಸಂಪೂರ್ಣ ನಿಸ್ತೇಜ

| Published : Aug 19 2024, 12:47 AM IST / Updated: Aug 19 2024, 12:48 AM IST

ಸಾರಾಂಶ

ಕಳೆದ 16 ತಿಂಗಳಿನಿಂದ ಪುರಸಭೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಅಧಿಕಾರದಲ್ಲಿ ಇಲ್ಲದಿರುವುದು ಇದಕ್ಕೆಲ್ಲ ಕಾರಣ

ಕುಪ್ಪೆಮಹದೇವಸ್ವಾಮಿಕನ್ನಡಪ್ರಭ ವಾರ್ತೆ ಕೆ.ಆರ್. ನಗರಪಟ್ಟಣದ ಪುರಸಭೆಯ ಆಡಳಿತ ಯಂತ್ರ ಸಂಪೂರ್ಣವಾಗಿ ನಿಸ್ತೇಜವಾಗಿದ್ದು ಇದರಿಂದ ಪಟ್ಟಣದ ನಾಗರೀಕರು ನಿತ್ಯ ಬವಣೆ ಕೊಡುವಂತಾಗಿದೆ.23 ಬಡಾವಣೆಗಳನ್ನು ಹೊಂದಿರುವ ಪುರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ತಾಂಡವಾಡುತ್ತಿದ್ದು ಅವುಗಳ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗದೆ ನಿರ್ಲಕ್ಷ ವಹಿಸಿದ್ದಾರೆ.ಕಳೆದ 16 ತಿಂಗಳಿನಿಂದ ಪುರಸಭೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಅಧಿಕಾರದಲ್ಲಿ ಇಲ್ಲದಿರುವುದು ಇದಕ್ಕೆಲ್ಲ ಕಾರಣವಾಗಿದ್ದು ಅಧಿಕಾರಿಗಳು ಯಾರ ಮಾತನ್ನು ಕೇಳದೆ ದರ್ಭಾರ್ ನಡೆಸುತ್ತಿದ್ದಾರೆ. ಪುರಸಭೆಗೆ ಚುನಾಯಿತರಾದ ಸದಸ್ಯರುಗಳು ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ರೋಸಿ ಹೋಗಿದ್ದು ಜನರಿಗೆ ಮುಖ ತೋರಿಸದೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.ಪಟ್ಟಣದಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದ್ದು ಪ್ರತಿ ವಾರ್ಡಿಗೂ ನಾಲ್ಕರಿಂದ ಐದು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದು ಇದರಿಂದ ನಾಗರೀಕರ ಸಂಕಷ್ಟ ಕೇಳುವವರೇ ಇಲ್ಲದಂತಾಗಿದ್ದು ಕುಡಿಯುವ ನೀರಿಗೂ ಪರದಾಡುವಂತಾಗಿದೆ.ಜೊತೆಗೆ ಕಳೆದ ಆರು ತಿಂಗಳಿನಿಂದ ಬಡಾವಣೆಗಳು ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳು ರಾತ್ರಿ ವೇಳೆ ಕಗ್ಗತ್ತಲಲ್ಲಿ ಮುಳುಗಿದ್ದು ಬೀದಿ ದೀಪ ಅಳವಡಿಸುವುದನ್ನು ಮರೆತಿರುವ ಪುರಸಭೆ ಅಧಿಕಾರಿಗಳು ಸಾರ್ವಜನಿಕರು ದೂರು ನೀಡಿದರು ಸ್ಪಂದಿಸುತ್ತಿಲ್ಲ.ಕಚೇರಿಗೆ ತಮ್ಮ ಕೆಲಸದ ನಿಮಿತ್ತ ಆಗಮಿಸುವ ಸಾರ್ವಜನಿಕರನ್ನು ಸತಾಯಿಸಿ ಅಲೆದಾಡಿಸುವುದನ್ನೇ ಪರಿಪಾಠ ಮಾಡಿಕೊಂಡಿರುವ ಪುರಸಭೆ ಸಿಬ್ಬಂದಿ ನಾಗರೀಕರ ಯಾವ ಕೆಲಸವನ್ನು ಮಾಡಿಕೊಡುವುದಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ.ಕಳೆದ ನಾಲ್ಕು ದಿನಗಳ ಹಿಂದೆ ಪಟ್ಟಣದ ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಲೋಕಾಯುಕ್ತ ಪೊಲೀಸರು ಸಾರ್ವಜನಿಕರ ಆವಾಲು ಆಲಿಸಿದ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ವೈಖರಿಯ ವಿರುದ್ಧವೇ ಹೆಚ್ಚು ದೂರುಗಳು ದಾಖಲಾಗಿರುವುದು ಇಲ್ಲಿನ ವ್ಯವಸ್ಥೆಗೆ ಹಿಡಿದ ಕೈಕನ್ನಡಿಯಾಗಿದೆ.ಶಾಸಕ ಡಿ. ರವಿಶಂಕರ್ ಅವರು ಕೂಡಲೇ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ ಸಭೆ ನಡೆಸಿ ಹದಗೆಟ್ಟು ಹೋಗಿರುವ ಆಡಳಿತಕ್ಕೆ ಚುರುಕು ನೀಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.---ಕೋಟ್18ಎಂವೈಎಸ್ 59ಪಟ್ಟಣದ ಜನಸಂಖ್ಯೆ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು 20 ಸಾವಿರ ಜನ ಸಂಖ್ಯೆ ಇದ್ದಾಗ ಅಳವಡಿಸಿದ ನೀರೆತ್ತಿರುವ ಯಂತ್ರಗಳು ಈಗ ಅತ್ಯಂತ ಹಳೆಯದಾಗಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಜಲ ಮಂಡಳಿಯವರು ಕೂಡಲೇ ಕ್ರಮ ಕೈಗೊಂಡು ಹೊಸ ಯಂತ್ರಗಳನ್ನು ಅಳವಡಿಸಿ ನಿತ್ಯ ಜನರಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಬೇಕು.- ನಟರಾಜು ಮಾಲೇಗೌಡ, ಪುರಸಭೆ ಸದಸ್ಯರು.---18ಎಂವೈಎಸ್ 60ಅಧಿಕಾರಿಗಳ ಅಸಡ್ಡೆಯಿಂದ ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗಿ ಆಗುತ್ತಿದ್ದು ಇದರ ಜೊತೆಗೆ ಪ್ರತಿ ಮೂರು ನಾಲ್ಕು ದಿನಗಳಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದು, ನಾಗರೀಕರಿಗೆ ತುಂಬಾ ತೊಂದರೆಯಾಗಿದೆ. ಹಾಗಾಗಿ ಪುರಸಭೆ ಆಡಳಿತಾಕಾರಿಯಾಗಿರುವ ಉಪ- ವಿಭಾಗಾಧಿಕಾರಿಗಳು ಈ ಬಗ್ಗೆ ಗಂಭೀರ ಗಮನ ಹರಿಸಬೇಕು.- ಶಿವುನಾಯಕ್. ಪುರಸಭೆ ಸದಸ್ಯರು.---18ಎಂವೈಎಸ್ 61ಪುರಸಭೆ ಅಧಿಕಾರಿಗಳ ಅಸಡ್ಡೆ ಮತ್ತು ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಇದರಿಂದ ಮೂಲಭೂತ ಸೌಲಭ್ಯ ಒದಗಿಸಲು ಸದಸ್ಯರಾದ ನಮಗೆ ತೀವ್ರ ತೊಂದರೆಯಾಗಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಪುರಸಭೆಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಚುನಾಯಿತರ ಸಭೆ ನಡೆಸಿ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು.- ಶಂಕರಸ್ವಾಮಿ. ಪುರಸಭೆ ಸದಸ್ಯರು.---18ಎಂವೈಎಸ್ 62ಸಾರ್ವಜನಿಕ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡಿ ನಾಗರೀಕರನ್ನು ಅಲೆದಾಡಿಸುತ್ತಿದ್ದು ಇದರಿಂದ ಜನತೆಗೆ ತುಂಬಾ ತೊಂದರೆಯಾಗಿದೆ. ಹಾಗಾಗಿ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಆಡಳಿತಾಧಿಕಾರಿಯಾಗಿರುವ ಉಪ- ವಿಭಾಗ ಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು.- ಕೆ. ವಿನಯ್, ಪುರಸಭೆ ಮಾಜಿ ಸದಸ್ಯರು.---------------------eom/mys/dnm/