ಪ್ರತಿ ವ್ಯಕ್ತಿಯ ಬದುಕಿನಲ್ಲಿ ನಕಾರಾತ್ಮಕ, ಸಕಾರಾತ್ಮಕ ಸೋಂಕುಗಳಿರುತ್ತವೆ: ರವಿ ಡಿ.ಚನ್ನಣ್ಣನವರ್

| Published : Aug 13 2025, 12:30 AM IST

ಪ್ರತಿ ವ್ಯಕ್ತಿಯ ಬದುಕಿನಲ್ಲಿ ನಕಾರಾತ್ಮಕ, ಸಕಾರಾತ್ಮಕ ಸೋಂಕುಗಳಿರುತ್ತವೆ: ರವಿ ಡಿ.ಚನ್ನಣ್ಣನವರ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆ ಬರೆದರೆ 10 ವರ್ಷಗಳ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡುತ್ತೇನೆ. ಅನಂತರ ಸಾಮಾನ್ಯ ಜ್ಞಾನ ಪತ್ರಿಕೆಗೆ ಗಮನಹರಿಸುತ್ತೇನೆ. ಹಾಗೇ ಪುನರ್ ಅಧ್ಯಯನ ಮಾಡುತ್ತೇನೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಈ ಸೂತ್ರ ಅವಶ್ಯ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿ ವ್ಯಕ್ತಿಯ ಬದುಕಿನಲ್ಲಿ ಎರಡು ರೀತಿಯ ಸೋಂಕುಗಳಿರುತ್ತವೆ. ಒಂದು ನಕಾರಾತ್ಮಕ ಸೋಂಕು, ಮತ್ತೊಂದು ಸಕಾರಾತ್ಮಕ ಸೋಂಕು. ದುಶ್ಚಟ, ಸಮಯ ವ್ಯರ್ಥ ಇವು ಸಕಾರಾತ್ಮಕ ಸೋಂಕು, ಪುಸ್ತಕ ಹಿಡಿಯುವುದು, ಒಳ್ಳೆಯ ಸ್ನೇಹಿತರ ಒಡನಾಟ ಸಕಾರಾತ್ಮಕ ಅಂಶ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿ ರವಿ ಡಿ. ಚನ್ನಣ್ಣನವರ್ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಆಯೋಜಿಸಿರುವ ಯುಜಿಸಿ-ನೆಟ್/ ಕೆ-ಸೆಟ್ ತರಬೇತಿ ಶಿಬಿರದಲ್ಲಿ ಮಂಗಳವಾರ ಮಾತನಾಡಿ ಅವರು, ನಾಗರಿಕತೆಗೆ ಒಂದು ಚರಿತ್ರೆ ಇದೆ. ದೇಶ, ರಾಜ್ಯಕ್ಕೆ ಪ್ರತಿ ವರ್ಷ ಯೋಜನೆ ರೂಪಿಸಲಾಗುತ್ತದೆ. ಅಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ವೇಳಾಪಟ್ಟಿ ಅತ್ಯಗತ್ಯ. ವೇಳಾಪಟ್ಟಿ ಇಲ್ಲದಿದ್ದರೆ ಯಶಸ್ಸು ಅಸಾಧ್ಯ ಎಂದರು.

ಸ್ಪರ್ಧಾತ್ಮಕ ಪರೀಕ್ಷೆ ಬರೆದರೆ 10 ವರ್ಷಗಳ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡುತ್ತೇನೆ. ಅನಂತರ ಸಾಮಾನ್ಯ ಜ್ಞಾನ ಪತ್ರಿಕೆಗೆ

ಗಮನಹರಿಸುತ್ತೇನೆ. ಹಾಗೇ ಪುನರ್ ಅಧ್ಯಯನ ಮಾಡುತ್ತೇನೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಈ ಸೂತ್ರ

ಅವಶ್ಯ ಎಂದರು.

ಸ್ವಾಮಿ ವಿವೇಕಾನಂದರು ಸ್ವರ್ಗಕ್ಕೆ ದಾರಿಯಿದ್ದರೆ ನರಕದ ಮೂಲಕವೇ ಎಂದು ಹೇಳಿದ್ದಾರೆ. ಸಣ್ಣ ಹುದ್ದೆಗೆ ಸಣ್ಣ ಸಿದ್ಧತೆ, ದೊಡ್ಡ ಹುದ್ದೆಗೆ ದೊಡ್ಡ ಸಿದ್ಧತೆಬೇಕು. ಉತ್ತಮ ಸಮಾಜ ನಿರ್ಮಿಸುವ ಕನಸು ಹೊಂದಿದವರು ಉನ್ನತ ಹುದ್ದೆ ಪಡೆಯುವ ಗುರಿ ಹೊಂದಿರಬೇಕು ಎಂದರು.

ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಸಾಧನೆಗೆ ಅನೇಕ ಏಳುಬೀಳು ಇರುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಿದರೆ ಏನನ್ನಾದರೂ ಸಾಧಿಸಬಹುದು. ಹೀಗಾಗಿ, ಯಾರು ಬೇಕಾದರೂ ಯಶಸ್ಸು ಗಳಿಸಬಹುದು ಎಂದರು.

ನಿರಂತರ ಪ್ರಯತ್ನ, ಗಟ್ಟಿ ಮನಸ್ಸು ಮಾಡಿ ಅಧ್ಯಯನ ನಡೆಸಿದರೆ ಶ್ರಮಕ್ಕೆ ತಕ್ಕ ಫಲಿತಾಂಶ ಲಭಿಸುತ್ತದೆ. ಪೂರ್ವ ತಯಾರಿ ಆಧಾರದ ಮೇಲೆ ತಮ್ಮ ಅಧಿಕಾರ, ಸ್ಥಾನಮಾನಗಳು ದೊರೆಯುತ್ತದೆ ಎಂಬುದನ್ನು ಶಿಬಿರಾರ್ಥಿಗಳು ತಿಳಿಯಬೇಕು ಎಂದರು.

ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಮೊದಲಾದವರು ಇದ್ದರು.

ವೈಭವ್ ಕುಮಾರೇಶ್ ರಿಂದ ಸ್ಟಾಪ್‌ ಮೋಷನ್ ಅನಿಮೇಷನ್ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಮೈಸೂರು

ಸ್ಟಾಪ್ ಮೋಷನ್ ಎಂದರೇನು? ಅನಿಮೇಷನ್ ಕಲೆಯನ್ನು ಬಳಸಿಕೊಂಡು ನೀವು ದೈನಂದಿನ ವಸ್ತುಗಳನ್ನು ಹೇಗೆ ಜೀವಂತಗೊಳಿಸಬಹುದು? ಅಂತರ ಮತ್ತು ಸಮಯದ ಕಲೆಯನ್ನು ಅನ್ವೇಷಿಸಿ, ನಿಮ್ಮ ಸುತ್ತಲಿನ ಸ್ಥಳ, ವಸ್ತುಗಳು ಮತ್ತು ಜನರನ್ನು ಬಳಸಿಕೊಂಡು ನಿಮ್ಮ ಸ್ಮಾರ್ಟ್‌ ಫೋನ್‌ ನಲ್ಲಿ ಅನಿಮೇಷನ್ ಕ್ಲಿಪ್ ಅನ್ನು ಹೇಗೆ ರಚಿಸುವುದು ಎಂಬುದನ್ನು ವೈಭವ್‌ ಕುಮಾರೇಶ್‌ಅವರು ಕಲಿಸುವರು.

ಆ. 15 ರಿಂದ 17 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಈ ಕಾರ್ಯಾಗಾರವನ್ನು ಹಾರ್ಡ್ವಿಕ್‌ ಶಾಲೆ ಆವರಣದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ಆಫ್‌ ಎಜುಕೇಷನಲ್‌ ಥಿಯೇಟರ್‌ ನಲ್ಲಿ ಆಯೋಜಿಸಲಾಗಿದೆ.