ಸಮೃದ್ಧ ಸಮಾಜ ಕಟ್ಟಲು ಶ್ರಮಿಸಿದವರು ಶರಣರು: ಡಾ. ರಂಜಾನ್ ದರ್ಗಾ

| Published : May 12 2024, 01:16 AM IST

ಸಮೃದ್ಧ ಸಮಾಜ ಕಟ್ಟಲು ಶ್ರಮಿಸಿದವರು ಶರಣರು: ಡಾ. ರಂಜಾನ್ ದರ್ಗಾ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾನತೆ, ಸ್ವಾಭಿಮಾನ, ಭಾವೈಕ್ಯತೆ, ಮಾನವೀಯತೆ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮೊದಲಾದ ಮೌಲ್ಯಗಳನ್ನು ವಚನ ಸಾಹಿತ್ಯದಲ್ಲಿ ಕಾಣಬಹುದು ಎಂದು ಚಿಂತಕ ಡಾ. ರಂಜಾನ್ ದರ್ಗಾ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಶರಣ ಸಂಕುಲ ಸಂವಿಧಾನದ ತತ್ವಕ್ಕನುಸಾರವಾಗಿ ಬದುಕನ್ನು ಕಟ್ಟಿಕೊಂಡಿತ್ತು. ಜಗತ್ತಿನ ಪ್ರಪ್ರಥಮ ಶ್ರಮಿಕರನ್ನು ಸಂಘಟಿಸಿ ಸಮೃದ್ಧ ಸಮಾಜ ಕಟ್ಟಲು ಪ್ರಯತ್ನಿಸಿದವರು ಶರಣರು ಎಂದು ಚಿಂತಕ ಡಾ. ರಂಜಾನ್ ದರ್ಗಾ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಸವ ಜಯಂತಿ, ನಿಂಗಯ್ಯ ಮಾಸ್ತಮರಡಿ ರುದ್ರಾಪೂರ, ಶಿವಲಿಂಗಯ್ಯ ಪ್ರಭು ದೇಸಾಯಿ ಹಾಗೂ ಎಸ್.ಎಸ್. ವಿದ್ವಾನ್ ಮತ್ತು ಗುರುಕುಮಾರ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು

ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾನತೆ, ಸ್ವಾಭಿಮಾನ, ಭಾವೈಕ್ಯತೆ, ಮಾನವೀಯತೆ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮೊದಲಾದ ಮೌಲ್ಯಗಳನ್ನು ವಚನ ಸಾಹಿತ್ಯದಲ್ಲಿ ಕಾಣಬಹುದು. ಶಾಸ್ತ್ರ - ಶಸ್ತ್ರಗಳನ್ನು ಹೊಂದಿದ ಅಧಿಕಾರದಲ್ಲಿ ಜನಸಾಮಾನ್ಯರು ಗುಲಾಮರಾಗುತ್ತಾರೆ. ಪ್ರಗತಿಪರ, ಕ್ರಾಂತಿಕಾರಿ ವಿಚಾರಗಳನ್ನು ಅಂತರ್ಗತಗೊಳಿಸಿಕೊಂಡ ಸಮಾಜವನ್ನು ಪುನರ್ ವ್ಯವಸ್ಥೆಗೊಳಿಸಲು ಶರಣರು ಪ್ರಯತ್ನಿಸಿದರು ಎಂದರು.

ಎಸ್.ಜಿ. ನಡಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ವಾಭಿಮಾನ, ಸ್ವಾವಲಂಬನೆ, ಕಾಯಕ ದಾಸೋಹ, ಸಮಾನತೆ, ಏಕದೇವೋಪಾಸನೆಯ ಮೌಲ್ಯಕ್ಕೆ ಮೂಲ ಶಿಕ್ಷಣ ಮತ್ತು ದಾಸೋಹ ಎಂದು ತಿಳಿಸಿದರು.

ಡಾ. ಆರ್. ಬಿ. ಖಾದೀರನಾಯಕರ ವಚನ ಸಾಹಿತ್ಯದ ಮಹತ್ವದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಪ್ರಸಕ್ತ ವರ್ಷ 115 ದತ್ತಿ ಹೊಂದಿದ್ದು, ಪ್ರತಿಯೊಂದು ದತ್ತಿಯನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ 15 ಜನ ಸಹೃದಯರು ವಚನ ವಾಚನ ಮತ್ತು ಗಾಯನ ಮಾಡಿದರು. ಶಾರದಾ ಕುರವತ್ತಿ, ಸುಮಂಗಲಾ ಅಂಗಡಿ, ಮೇಘಾ ಹುಕ್ಕೇರಿ, ಭಾರತಿ ಬಡಿಗೇರಿ, ಶಿವು ಕುನ್ನುರ ವಚನ ವಾಚನ ಮಾಡಿದರು.

ಪ್ರಮೀಳಾ ಜಕ್ಕನ್ನವರ ಪ್ರಾರ್ಥಿಸಿದರು. ಪ್ರೊ. ಕೆ ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ನರೇಗಲ್ ವಂದಿಸಿದರು. ಡಾ. ರಾಜೆಂದ್ರ ಪೋದ್ದಾರ, ಸುರೇಶ ಕುಲಕರ್ಣಿ, ಡಾ. ಶಶಿಧರ ನರೆಂದ್ರ, ಸೋಮಶೇಖರ್ ಇಟಗಿ, ರಾಜಶೇಖರ ಬಸೆಟ್ಟಿ, ಪಾಟೀಲ ಕುಲಕರ್ಣಿ, ಗಂಗಾಧರ ಗಾಡದ, ಪ್ರೊ ನಾವಲಗಿ ಇದ್ದರು.