ಕೊಳವೆ ಬಾವಿ ಮೋಟಾರ್ ಪಂಪ್‌ಸೆಟ್‌ ಅವ್ಯವಹಾರ: ತನಿಖೆಗೆ ಆಗ್ರಹ

| Published : Mar 21 2025, 12:32 AM IST

ಕೊಳವೆ ಬಾವಿ ಮೋಟಾರ್ ಪಂಪ್‌ಸೆಟ್‌ ಅವ್ಯವಹಾರ: ತನಿಖೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿಯುವ ನೀರಿಗಾಗಿ ಅಳವಡಿಸಿರುವ ಮೋಟರ್ ಪಂಪ್‌ಸೆಟ್‌ನ್ನು ಪಂಚಾಯಿತಿಯ ಪಿಡಿಒ ಗಮನಕ್ಕೆ ಮಾಹಿತಿ ನೀಡದೆ ಏಕಾಏಕಿ ಯತೀಶ್ ಎಂಬ ಮೋಟರ್ ಎತ್ತುವ ವ್ಯಕ್ತಿ ( ಎಲೆಕ್ಟ್ರಿಶಿಯನ್‌) ಮಾರಾಟ ಮಾಡಲು ಯತ್ನಿಸುತ್ತಿದ್ದನ್ನು ಖಂಡಿಸಿ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ರಂಗಾಪುರ ಗ್ರಾಮ ಪಂಚಾಯಿತಿಯ ಎದುರು ಗುರುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ಕುಡಿಯುವ ನೀರಿಗಾಗಿ ಅಳವಡಿಸಿರುವ ಮೋಟರ್ ಪಂಪ್‌ಸೆಟ್‌ನ್ನು ಪಂಚಾಯಿತಿಯ ಪಿಡಿಒ ಗಮನಕ್ಕೆ ಮಾಹಿತಿ ನೀಡದೆ ಏಕಾಏಕಿ ಯತೀಶ್ ಎಂಬ ಮೋಟರ್ ಎತ್ತುವ ವ್ಯಕ್ತಿ ( ಎಲೆಕ್ಟ್ರಿಶಿಯನ್‌) ಮಾರಾಟ ಮಾಡಲು ಯತ್ನಿಸುತ್ತಿದ್ದನ್ನು ಖಂಡಿಸಿ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ರಂಗಾಪುರ ಗ್ರಾಮ ಪಂಚಾಯಿತಿಯ ಎದುರು ಗುರುವಾರ ನಡೆಯಿತು.

ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿರುವ ಎರಡು ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಕುಡಿಯುವ ನೀರಿನ ಕೊಳವೆ ಬಾವಿಯ ೧೫ ಎಚ್.ಪಿ ಮೋಟರ್ ಪಂಪ್ ಸೆಟ್, ೪೧ ಜಿಐ ಪೈಪ್ ಹಾಗೂ ೫೦೦ಮೀ ಕೇಬಲ್ ವೈರ್‌ನ್ನು ಮಾ.೧೭ರಂದು ಯತೀಶ್‌ ಮೋಟರನ್ನು ಎತ್ತಿಕೊಂಡು ಬೇರೆ ಯಾವುದೇ ಕೊಳವೆ ಬಾವಿಗೆ ಅಳವಡಿಸದೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಕೈಗೆ ಸಿಕ್ಕು ಬಿದ್ದಿದ್ದಾನೆ. ಈ ವಿಷಯವನ್ನು ಗ್ರಾಮಸ್ಥರು ಪಿಡಿಒಗೆ ತಿಳಿಸಲಾಗಿ, ಮತ್ತೆ ಅದೇ ಜಾಗಕ್ಕೆ ಮೋಟರ್ ಪಂಪ್‌ಸೆಟ್ ಅಳವಡಿಸಲಾಗಿದೆ. ಈ ಪ್ರಕರಣ ಕುರಿತು ಸದಸ್ಯರು ಮತ್ತು ಸಾರ್ವಜನಿಕರು ರಂಗಾಪುರ ಗ್ರಾಮ ಪಂಚಾಯತಿ ಎದುರು ಅಧ್ಯಕ್ಷ ಹಾಗೂ ಪಿಡಿಒ ಮತ್ತು ಕಾರ್ಯಮಂಡಳಿ ವಿರುದ್ಧ ಪ್ರತಿಭಟಿಸಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಜಯಣ್ಣ ಮಾತನಾಡಿ ಪಂಪ್ ಸೆಟ್ ಎತ್ತಿಕೊಳ್ಳುವ ವಿಚಾರ ಸದಸ್ಯರ ಗಮನಕ್ಕೆ ಬಂದಿಲ್ಲ. ಪಂಚಾಯಿತಿಯ ವಾಟ್ಸಪ್ ಗ್ರೂಪ್‌ಗೆ ಮಾಹಿತಿ ನೀಡದೆ ಏಕಾಏಕಿ ಈ ಕೃತ್ಯವನ್ನು ಮಾಡಿದ್ದಾರೆ. ಇಲ್ಲಿ ಅಧ್ಯಕ್ಷರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ಪಿಡಿಒ ಸದಸ್ಯರ ಗಮನಕ್ಕೆ ವಿಷಯಗಳನ್ನು ಬಹಿರಂಗಪಡಿಸಿದ ತೀರ್ಮಾನಗಳನ್ನು ತೆಗೆದುಕೊಂಡಿರುತ್ತಾರೆ. ಹೊಸಹಳ್ಳಿ ಗ್ರಾಮದ ಮೋಟರ್ ಪಂಪ್‌ಸೆಟ್ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮತ್ತೋರ್ವ ಗ್ರಾ.ಪಂ ಸದಸ್ಯರಾದ ಶಿವಶಂಕರ್ ಮತ್ತು ತ್ರಿವೇಣಿ ಸೀತಾರಾಮ್ ಮಾತನಾಡಿ, ಅಧಿಕಾರಿಗಳ ಇಲ್ಲದ ಸಮಯದಲ್ಲಿ ಮೋಟರ್ ಪಂಪ್‌ಗಳನ್ನು ಎತ್ತಿದ್ದು, ಯಾರು ಇಲ್ಲದ ಸಮಯದಲ್ಲಿ ಪಿಡಿಒ ಮತ್ತೆ ಅಳವಡಿಸಲು ಹೇಳಿದ್ದಾರೆ. ದಾಖಲೆಗೋಸ್ಕರ ಪದೇ ಪದೇ ಕೊಳವೆಬಾವಿ ಮೋಟರ್ ಅಳವಡಿಸಲಾಗಿದೆ. ಗ್ರಾಮ ಪಂಚಾಯಿತಿ ಹಣವು ಸುಖಾಸುಮ್ಮನೆ ದುರುಪಯೋಗ ಮಾಡಲಾಗಿದೆ. ಯಾವುದೇ ರಿಪೇರಿ ಮಾಡದೆ ಮತ್ತೆ ಅದೇ ಕೊಳವೆ ಬಾವಿಗೆ ಅಳವಡಿಸಲಾಗಿದೆ ಇದರ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಶಿವಕುಮಾರ್ ಆಗಮಿಸಿ ಮೋಟರ್ ಪಂಪ್ ಸೆಟ್ ವಿಚಾರವಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಧರಣಿಯಲ್ಲಿ ಗ್ರಾ.ಪಂ ಸದಸ್ಯರಾದ ನಟರಾಜ್, ಕೇಶವ ಹಾವೇನಹಳ್ಳಿ, ಶೇಖರ್ ಚಿಕ್ಕರಂಗಾಪುರ, ಕೃಷಿಕ ಸಮಾಜದ ನಿರ್ಧೇಶಕ ಬಸವರಾಜು, ಶ್ರೇಷ್ಟನಾಥ್‌ಸ್ವಾಮಿ, ಹೋಘನಗಟ್ಟ ಶಶಿವಧನ, ಶಂಕರಮೂರ್ತಿ, ವಸಂತ್ ಬಳ್ಳೆಕಟ್ಟೆ, ಗಂಗಾಧರ್ ಹೊಸಹಳ್ಳಿ, ಮೂರ್ತಿ, ಮನೋಹರ್. ಸತೀಶ್, ಆನಂದ್, ಲೋಹಿತಾಶ್ವ, ಆಲದಹಳ್ಳಿ ಹರೀಶ್, ಯೋಗನಂದಸ್ವಾಮಿ, ಲೋಹಿತ್, ಕೆರೆಗೋಡಿ ಸಂತೋಷ್, ಕೆರೆಗೋಡಿ ನಿಂಗಪ್ಪ, ಮಂಜುನಾಥ್, ಸಚ್ಚಿದಾನಂದ, ಸೇರಿದಂತೆ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.