ಉಡುಪಿ: ಲಕ್ಷ್ಮೀ ವೆಂಕಟೇಶ ದೇವಳದ ಶಾರದಾ ವಿಸರ್ಜನೆ
KannadaprabhaNewsNetwork | Published : Oct 27 2023, 12:30 AM IST
ಉಡುಪಿ: ಲಕ್ಷ್ಮೀ ವೆಂಕಟೇಶ ದೇವಳದ ಶಾರದಾ ವಿಸರ್ಜನೆ
ಸಾರಾಂಶ
ಭಜಕರಾದ ನರಸಿಂಹ ಕಿಣಿ ಮತ್ತು ಬಳಗದವರಿಂದ ಭಜನೆ, ಮಂಗಳ ವಾದ್ಯ ವೇದಘೋಷಗಳೊಂದಿಗೆ ದೇವಿಗೆ ದೇವಳದ ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನಡೆಸಿ ವಿಸರ್ಜನೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ ಇಲ್ಲಿನ ತೆಂಕುಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದೆ ದೇವಿಗೆ ವಿಸರ್ಜನಾ ಕಾರ್ಯಕ್ರಮ ಬುಧವಾರ ವೈಭವದಿಂದ ನಡೆಯಿತು. ದೇವಳದ ಅರ್ಚಕ ದಯಾಘನ್ ಭಟ್ ಪೂಜೆ ನೆರವೇರಿಸಿದರು. ಭಜಕರಾದ ನರಸಿಂಹ ಕಿಣಿ ಮತ್ತು ಬಳಗದವರಿಂದ ಭಜನೆ, ಮಂಗಳ ವಾದ್ಯ ವೇದಘೋಷಗಳೊಂದಿಗೆ ದೇವಿಗೆ ದೇವಳದ ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನಡೆಸಿ ವಿಸರ್ಜನೆ ಮಾಡಲಾಯಿತು. ದೇವಳದ ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈ, ವಸಂತ್ ಕಿಣಿ, ಮುರಳೀಧರ್ ಭಟ್, ಮಟ್ಟಾರ್ ಗಣೇಶ್ ಕಿಣಿ, ನರಹರಿ ಪೈ, ವಿಶಾಲ್ ಶೆಣೈ, ,ಶಾಮಪ್ರಸಾದ್ ಕುಡ್ವ, ಪ್ರದೀಪ್ ರಾವ್ ಮತ್ತಿತರರಿದ್ದರು. ಫೋಟೋ: ಜಿಎಸ್ ಬಿ ಶಾರದೆ ಉಡುಪಿಯ ಲಕ್ಷ್ಮೀವೆಂಕಟೇಶ ದೇವಳದಲ್ಲಿ ಶಾರದಾ ವಿಸರ್ಜನೆ