ಸಾರಾಂಶ
ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಿಂದ ಲಕ್ಷಾಂತರ ಭಕ್ತರ ಆಗಮನ । ಮಾ.7 ವರೆಗೆ ನಡೆವ ಉತ್ಸವ
ಎಚ್.ಎಮ್.ಸದಾನಂದಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಭಕ್ತರನ್ನು ಕಾಪಾಡುವ ಆರಾಧ್ಯದೈವ ಉಕ್ಕಡಗಾತ್ರಿ ಗ್ರಾಮದ ಅಜ್ಜಯ್ಯನ ಜಾತ್ರೆ ಫೆ.೨೮ ರಿಂದ ಮಾ.೭ರ ವರೆಗೆ ಜರುಗಲಿದ್ದು ನೆರೆ ರಾಜ್ಯದ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ನಾಡಿನ ಹಾಗೂ ನರೆ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ನಂಬಿಕೆಯಿಂದ , ಸ್ವಯಂ ಆಸಕ್ತಿಯಿಂದ ಹರಕೆ ತೀರಿಸಲು ಕರಿಬಸವೆಶ್ವರನ ಕ್ಷೇತ್ರಕ್ಕೆ ತಂಡೋಪವಾಗಿ ಆಗಮಿಸಲಿದ್ದು, ಬಣ್ಣದ ದೀಪಾಲಂಕಾರಗಳಿಂದ ಇಡೀ ಗ್ರಾಮ ಸಿದ್ದಗೊಂಡಿದೆ,ಸಮೀಪದ ಹರಿಹರ ತಾಲೂಕು ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಜಾತ್ರೆಯು ಫೆ.೨೮ರಿಂದ ಆರಂಭವಾಗಲಿದ್ದು ಅಂದು ಬೆಳಿಗ್ಗೆ ೯ ಗಂಟೆಗೆ ಗುರು ಕರಿಬಸವೇಶ್ವರ ಗದ್ದಿಗೆಯ ಪೂಜೆ, ನಂತರ ನಂದಿಗುಡಿ ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡುವರು. ರಾತ್ರಿ ಕೀರ್ತನೆ, ಶಿವಭಜನೆ, ಜಾಗರಣೆ ನಡೆಯುವುದು, ಮಾ.೧ಕ್ಕೆ ಕರಿಬಸವೇಶ್ವರನ ಮಹಾ ರಥೋತ್ಸವ, ಮಾ.೨ಕ್ಕೆ ಜವಳ, ಹರಕೆ, ಧಾನ್ಯಗಳೊಂದಿಗೆ ತುಲಾಭಾರ, ಮಾ.೩ ಮತ್ತು ೪ಕ್ಕೆ ಕಾಣಿಕೆ ಒಪ್ಪಿಸುವುದು, ಬಹಿರಂಗ ಜಂಗಿ ಕುಸ್ತಿಗಳು, ಮಾ.೫ಕ್ಕೆ ಪೂಜೆ ನಂತರ ಫಳಾರ ಹಾಕಿಸುವುದು, ಸ್ವಾಮಿಗೆ ರಾಜೋಪಚಾರ ಪೂಜೆ, ಮಾ.೬ಕ್ಕೆ ಸ್ವಾಮಿಯ ಬೆಳ್ಳಿ ರಥೋತ್ಸವ, ರಾತ್ರಿ ಪಾಲಿಕೋತ್ಸವ, ಮಾ ೭ಕ್ಕೆ ಅಂತಿಮ ದಿನ ಭಕ್ತರಿಗೆ ಫಳಾರ ಹಂಚುವ ಕಾರ್ಯಕ್ರಮ ಇದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎಸ್.ಸುರೇಶ್ ತಿಳಿಸಿದರು.
ಕರಿಬಸವೇಶ್ವರನ ವಿದ್ಯಾ ಸಂಸ್ಥೆಯಡಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ. ಆಂಗ್ಲ ಮಾಧ್ಯಮ ತರಗತಿಗಳು ನಡೆಯುತ್ತಿದೆ. ಲಕ್ಷಾಂತರ ಭಕ್ತರಿಗೆ ಸ್ನಾನಘಟ್ಟ, ೨೮೦೦೦ ಅಡಿ ವಿಸ್ತೀರ್ಣದ ಸಾಮೂಹಿಕ ವಸತಿ ಸೌಕರ್ಯ ಕಲ್ಪಿಸುವ ಕಾಮಗಾರಿ ಮುಕ್ತಾಯವಾಗಿದೆ, ಸುಸಜ್ಜಿತ ಶೌಚಾಲಯ, ವಸತಿ ವ್ಯವಸ್ಥೆ ಒದಗಿಸಿದೆ. ಭಕ್ತರ ವಸತಿಗೆ ೯೦೦ಕ್ಕೂ ಹೆಚ್ಚು ಕೊಠಡಿಯನ್ನು ನಿರ್ಮಿಸಲಾಗಿದೆ. ಭಕ್ತರಿಗೆ ಅನಾಹುತ ತಪ್ಪಿಸಲು ತುಂಗಭದ್ರಾ ನದಿಗೆ ತಡೆ ಗೇಟ್ ಮಾಡಿದೆ, ೬೦ ಯುವಕರ ಪಡೆ ಸ್ವಚ್ಚತಾ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.ಹಲವು ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮತ್ತು ಶುಧ್ದ ನೀರು ನೀಡುತ್ತಿದೆ, ೩೫೦ ಕೆಜಿ ಬೆಳ್ಳಿ ರಥವನ್ನು ನಿರ್ಮಿಸಲಾಗಿದೆ, ಭಕ್ತರ ನೆರವಿನಿಂದ ಚಿನ್ನದ ಕಿರೀಟವನ್ನು ಅಜ್ಜಯ್ಯನಿಗೆ ಧಾರಣೆ ಮಾಡಲಾಗಿದೆ. ಕರಿಬಸವೇಶ್ವರನ ಗದ್ದಿಗೆಗೆ ಮತ್ತು ಗರ್ಭಗುಡಿಗೆ ಬೆಳ್ಳಿ ಹಾಕಿಸುವ ಕಾರ್ಯ ಪ್ರಗತಿಯಲ್ಲಿದೆ. ಆದಿ ಯೋಗಿಯ ವಿಶ್ರಾಂತಿ ಧಾಮ ಸಿದ್ದವಿದೆ. ವಾಹನ ನಿಲ್ಲಿಸುವ ಸ್ಥಳಕ್ಕೆ ೧೫ ಎಕರೆ ಪ್ರದೇಶವನ್ನು ಕಾಯ್ದಿರಿಸಿದೆ. ಸಾರಿಗೆ ಸೌಲಭ್ಯಕ್ಕೆ ಸಾರಿಗೆ ನಿಗಮಕ್ಕೆ, ಅಗ್ನಿಶಾಮಕ ದಳದವರಿಗೂ, ಬಂದೋಬಸ್ತ್ಗಾಗಿ ಪೋಲೀಸ್ ಠಾಣೆಗೆ ಪತ್ರ ಬರೆಯಲಾಗಿದೆ ಎಂದು ಪತ್ರಿಕೆಗೆ ತಿಳಿಸಿದರು.