ದೇಶದ ಭವಿಷ್ಯದ ಯೋಜನೆಗಳು ಮತ್ತು ಅಭಿವೃದ್ಧಿಗೆ ನೈಜ ಅಂಕಿ-ಅಂಶ ನೀಡುವ ಜನಗಣತಿ ದಿಕ್ಸೂಚಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡ:
ಏ. 1ರಿಂದ 15ರ ವರೆಗೆ ಸ್ವಯಂ ಜನಗಣತಿ ಆರಂಭವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದ್ದರು, ಟ್ಯಾಬ್ ಮೂಲಕ ತಮ್ಮ ಕುಟುಂಬದ ಸ್ವಯಂ ಜನಗಣತಿಯನ್ನು ಶುಕ್ರವಾರ ಮಾಡಿಕೊಂಡರು.ಈ ವೇಳೆ ಮಾತನಾಡಿದ ಅವರು, ದೇಶದ ಭವಿಷ್ಯದ ಯೋಜನೆಗಳು ಮತ್ತು ಅಭಿವೃದ್ಧಿಗೆ ನೈಜ ಅಂಕಿ-ಅಂಶ ನೀಡುವ ಜನಗಣತಿ ದಿಕ್ಸೂಚಿಯಾಗಿದೆ. ಈ ಹಿನ್ನೆಲೆಯಲ್ಲಿ 2027ರ ಜನಗಣತಿ ಪ್ರಕ್ರಿಯೆ ಈಗ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ''''''''ಡಿಜಿಟಲ್ ಇಂಡಿಯಾ'''''''' ಕನಸಿನಂತೆ, ಈ ಬಾರಿ ನಮಗೆ ''''''''ಸ್ವಯಂ-ಗಣತಿ'''''''' ಮಾಡುವ ಅದ್ಭುತ ಅವಕಾಶ ಸಿಕ್ಕಿದೆ. ಎಲ್ಲ ನಾಗರಿಕರು ಸ್ವಯಂ ಗಣತಿಯಲ್ಕಿ ಸಕ್ರಿಯವಾಗಿ ಭಾಗವಹಿಸಲು ಜೋಶಿ ತಿಳಿಸಿದರು.
ನಾನು ಈಗಾಗಲೇ ಆನ್ಲೈನ್ ಮೂಲಕ ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ನನ್ನ ಮತ್ತು ಕುಟುಂಬದ ವಿವರ ದಾಖಲಿಸಿದ್ದೇನೆ. ಇದು ಕೇವಲ ಅಂಕಿ-ಅಂಶಗಳಲ್ಲ, ದೇಶದ ಪ್ರಗತಿಯಲ್ಲಿ ನಾವು ನೀಡುವ ಅಳಿಲು ಸೇವೆ. ನಾಗರಿಕರು se.census.gov.in ಪೋರ್ಟಲ್ಗೆ ಭೇಟಿ ನೀಡಿ, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ಲಾಗಿನ್ ಆಗಿ ಜನಗಣತಿಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.