ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ಯ ಮೂರುಗೋಳಿ ಎಂಬಲ್ಲಿ ಕಾರ್ಯಾಚರಿಸುವ ಎಟಿಎಂ ಕೇಂದ್ರಕ್ಕೆ ಸೋಮವಾರ ತಡರಾತ್ರಿ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಮ್ಮದ್ ಹರ್ಷದ್ ಎಂಬವರು ನಿರ್ವಹಿಸುತ್ತಿರುವ ಈ ಎಟಿಎಂ ಕೇಂದ್ರಕ್ಕೆ ಸೋಮವಾರ ತಡರಾತ್ರಿ ೧.೩೦ರ ಸುಮಾರಿಗೆ ಒಳ ನುಗ್ಗಿದ ಮುಸುಕುಧಾರಿ ಕಳ್ಳರು , ಕೈಗೆ ಗ್ಲೌಸ್ ಹಾಕಿ ಎಟಿಎಂ ಮಿಶಿನ್ನ ಒಂದು ಬಾಗಿಲನ್ನು ಮುರಿದು ಎರಡನೇ ಬಾಗಿಲನ್ನು ಮುರಿಯಲು ಪ್ರಯತ್ನಿಸಲಾಗಿದೆ. ಎರಡನೇ ಬಾಗಿಲು ಪಾಸ್ವರ್ಡ್ ಆಧಾರಿತ ಚಾಲನೆಗೊಳ್ಳುವ ವ್ಯವಸ್ಥೆ ಹೊಂದಿರುವುದುದರಿಂದ ಅದನ್ನು ತೆರೆಯಲು ಸಾಧ್ಯವಾಗಿಲ್ಲ ಎಂಬುದು ಅಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಟಿಎಂ ಮಿಶಿನ್ನಲ್ಲಿ 3 ಲಕ್ಷ ರು.ಗೂ ಹೆಚ್ಚು ನಗದು ಇತ್ತೆಂಬ ಮಾಹಿತಿ ಇದೆ. ತಂತ್ರಜ್ಞರು ಬಂದು ಮೆಶಿನ್ ತೆರೆದ ಬಳಿಕವಷ್ಟೇ ನಗದು ಇದೆಯೋ, ಕಳ್ಳರ ಪಾಲಾಗಿದೆಯೋ ಎಂದು ತಿಳಿದು ಬರಲಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಉಪ್ಪಿನಂಗಡಿ: ಎಟಿಎಂ ಕೇಂದ್ರದಲ್ಲಿ ಕಳವಿಗೆ ವಿಫಲ ಯತ್ನ
ಎಟಿಎಂ ಮಿಶಿನ್ನಲ್ಲಿ 3 ಲಕ್ಷ ರು.ಗೂ ಹೆಚ್ಚು ನಗದು ಇತ್ತೆಂಬ ಮಾಹಿತಿ ಇದೆ. ತಂತ್ರಜ್ಞರು ಬಂದು ಮೆಶಿನ್ ತೆರೆದ ಬಳಿಕವಷ್ಟೇ ನಗದು ಇದೆಯೋ, ಕಳ್ಳರ ಪಾಲಾಗಿದೆಯೋ ಎಂದು ತಿಳಿದು ಬರಲಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.