ಸಂಭ್ರಮದ ಖಾದ್ರಿ ಅಜ್ಜನವರ ಉರೂಸ್‌

| Published : Apr 21 2024, 02:33 AM IST

ಸಾರಾಂಶ

ಸೂಫಿ ಸಂತ ಹಜರತ್ ಸೈಯದ್ ಮೀರ ಅಲಂ ನವಾಜ್ ಖಾದ್ರಿ ಅಜ್ಜನವರು ನ್ಯಾಯ, ನೀತಿ, ಸರ್ವ ಜನಾಂಗದಲ್ಲಿ ಸಾಮರಸ್ಯ ಸಾರಿದ್ದಾರೆ.

ಹೊಸಪೇಟೆ: ನಗರದ ಬಳ್ಳಾರಿ ರಸ್ತೆಯಲ್ಲಿರುವ ಹಜರತ್ ಸೈಯದ್ ಮೀರ್ ಆಲಮ್ ನವಾಜ್ ಖಾದ್ರಿ ಅಜ್ಜನವರ 92ನೇ ಉರೂಸ್ ಶುಕ್ರವಾರ ರಾತ್ರಿ ಸಂಭ್ರಮದಿಂದ ನಡೆಯಿತು.

ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎಚ್.ಎನ್. ಮುಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಸೂಫಿ ಸಂತ ಹಜರತ್ ಸೈಯದ್ ಮೀರ ಅಲಂ ನವಾಜ್ ಖಾದ್ರಿ ಅಜ್ಜನವರು ನ್ಯಾಯ, ನೀತಿ, ಸರ್ವ ಜನಾಂಗದಲ್ಲಿ ಸಾಮರಸ್ಯ ಸಾರಿದ್ದಾರೆ. ಈ ಹಿನ್ನೆಲೆಯಲ್ಲಿ ಉರೂಸ್‌ ತಲೆತಲಾಂತರದಿಂದ ನಡೆಯುತ್ತಾ ಬಂದಿದೆ ಎಂದರು.

ಈ ಸಂದರ್ಭದಲ್ಲಿ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಭಗವಂತನ ಕೃಪ ಆಶೀರ್ವಾದದಿಂದ ಉತ್ತಮ ಮಳೆಯಾಗಿ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಎಂದು ಆಶಿಸಿದರು.

ದರ್ಗಾದ ಪದಾಧಿಕಾರಿಗಳಾದ ಅನ್ಸರ್‌, ಇರ್ಫಾನ್‌, ಸಮೀರ್, ಶಬ್ಬೀರ್, ಫಾರೂಕ್, ಅಂಜುಮನ್ ಕಮಿಟಿಯ ಉಪಾಧ್ಯಕ್ಷ ಎಂ. ಫಿರೋಜ್ ಖಾನ್, ಕಾರ್ಯದರ್ಶಿ ಎಂ.ಡಿ. ಅಬೂಬಕ್ಕರ್, ಖಜಾಂಚಿ ಜಿ.ಅನ್ಸರ್ ಬಾಷಾ, ಸಹಕಾರ್ಯದರ್ಶಿ ಡಾ.ಎಂ.ಡಿ. ದುರ್ವೇಶ್, ಮೈನುದ್ದಿನ್, ಸದಸ್ಯರಾದ ಕೊತ್ವಾಲ್ ಮುಹಮ್ಮದ್ ಮೊಹಿಸಿನ್, ವಕೀಲ ಸದ್ದಾಂ ಮತ್ತು ಎಲ್.ಗುಲಾಮ್ ರಸೂಲ್ ಮತ್ತಿತರರು ಭಾಗವಹಿಸಿದ್ದರು.