ಸಾರಾಂಶ
ತರೀಕೆರೆವಸ್ತುಗಳನ್ನು ಅವಶ್ಯಕತೆಯಿದ್ದಲ್ಲಿ ಮಾತ್ರ ಬಳಸುವುದು ಮತ್ತು ಅವುಗಳ ಪುನರ್ ಬಳಕೆಯಿಂದ ಆಗುವ ಒಳ್ಳೆಯ ಪರಿಣಾಮದ ಬಗ್ಗೆ, ರೀಸೈಕಲ್, ರೀಯೂಸ್, ರೆಡ್ಯೂಸ್ ಎಂಬ ನಿಯಮ ಅಳವಡಿಸಿಕೊಂಡು, ಅನುಸರಿಸಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮರ್ ಬಾಷಾ ತಿಳಿಸಿದರು.
ಕನ್ನಡಪ್ರಭ ವಾರ್ತೆ, ತರೀಕೆರೆ
ವಸ್ತುಗಳನ್ನು ಅವಶ್ಯಕತೆಯಿದ್ದಲ್ಲಿ ಮಾತ್ರ ಬಳಸುವುದು ಮತ್ತು ಅವುಗಳ ಪುನರ್ ಬಳಕೆಯಿಂದ ಆಗುವ ಒಳ್ಳೆಯ ಪರಿಣಾಮದ ಬಗ್ಗೆ, ರೀಸೈಕಲ್, ರೀಯೂಸ್, ರೆಡ್ಯೂಸ್ ಎಂಬ ನಿಯಮ ಅಳವಡಿಸಿಕೊಂಡು, ಅನುಸರಿಸಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮರ್ ಬಾಷಾ ತಿಳಿಸಿದರು.ಪಟ್ಟಣದ ಅರುಣೋದಯ ಪ್ರೌಢಶಾಲೆ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ಅರುಣೋದಯ ವಿದ್ಯಾ ಸಂಸ್ಥೆ ಸಂಯುಕ್ತಾಶ್ರ ಯದಲ್ಲಿ ವಿಶ್ವ ಪರಿಸರ ದಿನ ಆಚರಣೆಯಲ್ಲಿ ಮಾತನಾಡಿ, ಪಶ್ಚಿಮ ಘಟ್ಟಗಳ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಗಿಡಮರಗಳು ಮನುಷ್ಯರಿಗೆ ಅಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳಿಗೂ ಅತಿ ಅವಶ್ಯಕ. ಮುಂದಿನ ಪೀಳಿಗೆ ಇದನ್ನು ಗಮನ ದಲ್ಲಿ ಟ್ಟುಕೊಂಡು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ತಾಯಿಯ ಹೆಸರಲ್ಲಿ ಒಂದು ಗಿಡವನ್ನು ಬೆಳೆಸಿ ಎಂದು ಮಕ್ಕಳನ್ನು ಪ್ರೋತ್ಸಾಹಿಸಿ, ಆಸಕ್ತ ಮಕ್ಕಳಿಗೆ ಹಲಸಿನ ಸಸಿಗಳನ್ನು ವಿತರಿಸಿ, ನೆಟ್ಟು ಪೋಷಿಸುವಂತೆ ಮನವರಿಕೆ ಮಾಡಿದರು. 2025ರ ವಿಶ್ವ ಪರಿಸರ ದಿನದ ಘೋಷ ವಾಕ್ಯವಾದ ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ ಎಂಬ ವಿಷಯದ ಬಗ್ಗೆ ಮಕ್ಕಳಲ್ಲಿ ಪರಿಸರದ ಮೇಲೆ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ವಲಯ ಅರಣ್ಯಾಧಿಕಾರಿ ಆಸಿಫ್ ಅಹಮ್ಮದ್, ಸಾಮಾಜಿಕ ಅರಣ್ಯವಲಯ ಅರಣ್ಯಾಧಿಕಾರಿ ರುಖಿಯಾ ಫರ್ವಿನ್ ಹಾಗೂ ಸಹಾಯಕ ವಲಯ ಅರಣ್ಯಾಧಿಕಾರಿ ಗಿರೀಶ್ ಜಾಗೃತಿ ಮೂಡಿಸಿದರು. ಸಂಸ್ಥೆ ಕಾರ್ಯದರ್ಶಿ ಡಾ. ಜಿ.ಎಚ್. ಶ್ರೀಹರ್ಷ ಆಸಕ್ತ ಮಕ್ಕಳಿಗೆ ಹೊಂಗೆ ಹಾಗೂ ಹಲಸಿನ ಬೀಜಗಳನ್ನು ವಿತರಣೆ ಮಾಡಿದರು. ದೃಷ್ಟಿ.ಟಿ.ಜಿ, ಖುಷಿ.ಟಿ.ಎಂ, ಚೈತನ್ಯ.ಎಚ್ ಭಾಗವಹಿಸಿದ್ದರು.7ಕೆಟಿಆರ್.ಕೆ.3ಃ
ತರೀಕೆರೆಯಲ್ಲಿ ಅರುಣೋದಯ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು.