ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತರು ತಮ್ಮ ರಾಸುಗಳ ಆರೋಗ್ಯಕ್ಕಾಗಿ ವರ್ಷಕ್ಕೆ ಎರಡು ಬಾರಿ ತಪ್ಪದೇ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ ಎಂದು ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಹಾಲು ಒಕ್ಕೂಟ ಮತ್ತು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ವತಿಯಿಂದ ಆಯೋಜಿಸಿದ್ದ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಾದ್ಯಂತ ನವಂಬರ್ 3 ಆರಂಭಗೊಂಡು ಡಿಸೆಂಬರ್ 2 ರವರೆಗೆ ಲಸಿಕಾ ಆಂದೋಲನ ನಡಯೆಲಿದೆ. ತಾಲೂಕಿನ ಎಲ್ಲಾ ರೈತರು ತಪ್ಪದೇ ಈ ಲಸಿಕೆಯ ಪ್ರಯೋಜನ ಪಡೆದುಕೊಳ್ಳಬೇಕು. ಕಾಲುಬಾಯಿ ರೋಗವು ವೈರಾಣುವಿನಿಂದ ಹರಡುವ ಅಂಟು ರೋಗವಾಗಿದ್ದು, ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಣಕ್ಕೆ ಇರುವ ಮಾರ್ಗವಾಗಿದೆ ಎಂದರು.ಈ ರೋಗವು ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಿಗೆ ತಗುಲುವ ಮಾರಕ ರೋಗವಾಗಿದೆ. ರೋಗ ನಿಯಂತ್ರಣ ಮಾಡದಿದ್ದರೆ ರೈತರು ತಮ್ಮ ರಾಸುಗಳನ್ನು ಕಳೆದುಕೊಂಡು ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈತ ಬಾಂದವರು ಈ ಹಿಂದೆ ಎಷ್ಟೇ ಬಾರಿ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಿದ್ದರೂ ಪ್ರತಿ ವರ್ಷ ಎರಡು ಬಾರಿ ಲಸಿಕೆ ಹಾಕಿಸುವುದನ್ನು ಮರೆಯಬಾರದು ಎಂದರು.
ಮೂರು ತಿಂಗಳು ತುಂಬಿದ ಎಲ್ಲಾ ಕರುಗಳಿಗೂ ಈ ಲಸಿಕೆ ಹಾಕಿಸುವುದು ಮತ್ತು ಮೂರರಿಂದ ಐದು ವಾರಗಳ ನಂತರ ಆ ರಾಸುಗಳಿಗೆ ಬೂಸ್ಟರ್ ಡೋಸ್ ಹಾಕಿಸುವುದು ಕಡ್ಡಾಯ. ಗರ್ಭಧರಿಸಿದ ರಾಸುಗಳಿಗೂ ಸಹ ಈ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಜವರೇಗೌಡ, ಡಾ.ಎಚ್.ಎಸ್.ದೇವರಾಜು, ಪಶು ವೈದ್ಯಾಧಿಕಾರಿಗಳಾದ ಡಾ.ಚೇತನ್, ಡಾ.ಸಾಗರ್, ಕತ್ತರಘಟ್ಟ ಡೇರಿ ಅಧ್ಯಕ್ಷ ಕೆ.ಎಸ್.ಉಪಾಧ್ಯಕ್ಷ ಶೇಖರ್, ಕಾರ್ಯದರ್ಶಿ ಚಂದ್ರಶೇಖರ್, ನಿರ್ದೇಶಕರಾದ ಸತೀಶ್ ಕುಮಾರ್, ವಿಶ್ವನಾಥ್, ಮನ್ಮುಲ್ ಸಿಬ್ಬಂದಿ ಮಂಜಯ್ಯ, ಮಂಜುನಾಥ್, ಚೇತನ್ ಚಂದ್ರು, ಪಶುಸಕಿ ರಮಾಮಣಿ, ಗೋವಿಂದರಾಜು, ವಿನಯ್ ಸೇರಿದಂತೆ ಹಲವರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))