ಕನ್ನಡ ನಾಡು-ನುಡಿ ಬಗ್ಗೆ ಅಭಿಮಾನ ಹೊಂದಿದ್ದ ವೀರುಪಾಕ್ಷಪ್ಪ

| Published : Dec 21 2024, 01:19 AM IST

ಕನ್ನಡ ನಾಡು-ನುಡಿ ಬಗ್ಗೆ ಅಭಿಮಾನ ಹೊಂದಿದ್ದ ವೀರುಪಾಕ್ಷಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹದಿ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಕಾರಾಗೃಹ ವಾಸ ಅನುಭವಿಸಿದ ಅಪ್ಪಟ ಕನ್ನಡ ಮಣ್ಣಿನ ಮಗನಾಗಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ನಿಷ್ಠೆ ಮತ್ತು ಛಲದಿಂದ ಹೋರಾಡಿದ ವೀರುಪಾಕ್ಷಪ್ಪನವರು

ನರಗುಂದ: ಬಳ್ಳಾರಿ ಉಳಿಸಿ ಚಳವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ ಅಬ್ಬಿಗೇರಿ ವಿರುಪಾಕ್ಷಪ್ಪನವರು ಕನ್ನಡ ನಾಡು-ನುಡಿ, ನೆಲ ಜಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಕನ್ನಡದ ಕುಲಪುತ್ರರು, ಉಪಾಧ್ಯಯರಾಗಿದ್ದ ಅವರು ಕನ್ನಡ ಮಕ್ಕಳಲ್ಲಿ ಉತ್ಸಾಹ ಉಕ್ಕುವಂತೆ ಏಕೀಕರಣದ ಹಾಡು ರಚಿಸಿ ಮಕ್ಕಳಿಗೆ ರಂಜನೆಯ ಜತೆಗೆ ಕನ್ನಡ ಜಾಗೃತಿ ಮೂಡಿಸುತ್ತಿದ್ದರು ಎಂದು ಮುಖ್ಯೋಪಾಧ್ಯಯ ಪಿ.ಸಿ. ಕಲಹಾಳ ಹೇಳಿದರು.ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-40 ಕಾರ್ಯಕ್ರಮದಲ್ಲಿ ಅಬ್ಬಿಗೇರಿ ವೀರುಪಾಕ್ಷಪ್ಪನವರ ಬದುಕು ಮತ್ತು ಹೋರಾಟ ವಿಷಯದ ಕುರಿತು ಮಾತನಾಡಿ, ಹದಿ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಕಾರಾಗೃಹ ವಾಸ ಅನುಭವಿಸಿದ ಅಪ್ಪಟ ಕನ್ನಡ ಮಣ್ಣಿನ ಮಗನಾಗಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ನಿಷ್ಠೆ ಮತ್ತು ಛಲದಿಂದ ಹೋರಾಡಿದ ವೀರುಪಾಕ್ಷಪ್ಪನವರು, ಕನ್ನಡಿಗರನ್ನು ಬಡಿದೆಬ್ಬಿಸಲು ತಮ್ಮ ಹರಿತವಾದ ಲೇಖನಗಳಿಂದ ಜನಜಾಗೃತಿ ಮೂಡಿಸಿ ಏಕೀಕರಣ ಹೋರಾಟಕ್ಕೆ ಶಕ್ತಿಯಾಗಿದ್ದರು ಎಂದರು.

ಸನ್ಮಾನಿತರಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಚಾರ್ಯ ಡಾ. ವೈ.ಎಂ. ಯಾಕೊಳ್ಳಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು, ಕನ್ನಡ ನೆಲ-ಜಲ ಪ್ರತಿಯೊಬ್ಬ ಕನ್ನಡಿನ ಸ್ವತ್ತು ಅದನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ಕನ್ನಡಿಗರಾದ ನಾವೆ ಕನ್ನಡ ಮರೆಯುತ್ತಿರುವುದು ದುರ್ದೈವದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಶಿವಕುಮಾರ ಶೆಲ್ಲಿಕೇರಿ, ಸುವರ್ಣ ಶೆಲ್ಲಿಕೇರಿ ಮತ್ತು ಇತ್ತೀಚೆಗೆ ನಿವೃತ್ತರಾದ ಡಾ.ವೈ.ಎಂ.ಯಾಕೊಳ್ಳಿಯವರನ್ನು ಶ್ರೀಮಠದಿಂದ ಶಾಂತಲಿಂಗ ಶ್ರೀಗಳು ಸನ್ಮಾನಿಸಿ ಗೌರವಿಸಿದರು.

ಶಾಂತಲಿಂಗ ಶ್ರೀಗಳು ಮಾತನಾಡಿ, 12ನೇ ಶತಮಾನದಲ್ಲಿ ಸಮಾನತೆಗಾಗಿ ಬಹುದೊಡ್ಡ ಕ್ರಾಂತಿ ಮಾಡಿದ ಜಗತ್ತಿನ ಪ್ರಥಮ ಸಂಸತ್ತು ಅನುಭವ ಮಂಟಪದಿಂದ ಬಸವಾದಿ ಶಿವಶರಣ ಚಿತ್ರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಳವಡಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ. ಕರ್ನಾಟಕ ಏಕೀಕರಣದ ರೂವಾರಿ ಮುಂಬೈ ವಿಧಾನಸಭೆಯಲ್ಲಿ ಕನ್ನಡ ಮೊಳಗಿಸಿದ ಅಂದಾನಪ್ಪ ದೊಡ್ಡಮೇಟಿ ಸ್ಮಾರಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು ಸಂತಸದಾಯಕ ಆದಷ್ಟು ಶೀಘ್ರದಲ್ಲಿಯೇ ಆ ಸ್ಮಾರಕ ಭವನ ಲೋಕಾರ್ಪಣೆಯಾಗಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನೀಲಗುಂದದ ಮಂಜುನಾಥ ಶರಣರು, ಮಹಾಂತೇಶ ಸಾಲಿಮಠ, ವೀರುಪಾಕ್ಷಪ್ಪ ಶೆಲ್ಲಿಕೇರಿ, ರಮೇಶ ಅಣ್ಣಿಗೇರಿ, ಪ್ರಕಾಶ ಅಣ್ಣಿಗೇರಿ, ಭೀಮಸೇನ್ ಪವಾರ, ಬಿ.ಎಂ. ಗೊಜನೂರ, ವೀರಭದ್ರಪ್ಪ ಅಣ್ಣಿಗೇರಿ, ಪತ್ರಕರ್ತ ರೇವಣಸಿದ್ದಯ್ಯ ಹಿರೇಮಠ, ಪ್ರೊ.ಆರ್.ಬಿ. ಚಿನಿವಾಲರ, ಪ್ರಕಾಶ ಚಂದನ್ನವರ ಸೇರಿದಂತೆ ಮುಂತಾದವರು ಇದ್ದರು.

ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ.ರಮೇಶ ಐನಾಪೂರ ನಿರೂಪಿಸಿ ವಂದಿಸಿದರು.