ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರುಗುಂದ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ 35 ವರ್ಷದಿಂದ ವಾಸಿಸುತ್ತಿದ್ದ ಶಾರದಾ (75) ಎಂಬ ವೃದ್ಧೆಯನ್ನು ಗ್ರಾಮಸ್ಥರು ಸೋಮವಾರ ಬೇರೆ ರಾಜ್ಯದಲ್ಲಿದ್ದ ಮಕ್ಕಳ ಜೊತೆಗೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.
ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರುಗುಂದ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ 35 ವರ್ಷದಿಂದ ವಾಸಿಸುತ್ತಿದ್ದ ಶಾರದಾ (75) ಎಂಬ ವೃದ್ಧೆಯನ್ನು ಗ್ರಾಮಸ್ಥರು ಸೋಮವಾರ ಬೇರೆ ರಾಜ್ಯದಲ್ಲಿದ್ದ ಮಕ್ಕಳ ಜೊತೆಗೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.
ಕರುಗುಂದ ಗ್ರಾಮದಲ್ಲಿ ಶಾರದಾ ಎಂಬ ಮಹಿಳೆ ನಿರ್ಜನ ಪ್ರದೇಶದಲ್ಲಿ 35 ವರ್ಷದಿಂದಲೂ ಒಂಟಿಯಾಗೇ ಬದುಕುತ್ತಿದ್ದರು. ಗ್ರಾಮಸ್ಥರ ಮನೆಗೆ ಹೋಗಿ ಊಟ ತರುತ್ತಿದ್ದರು. ಇತ್ತೀಚಿಗೆ ಮಾನಸಿಕ ರೋಗ ಹಾಗೂ ಇತರೆ ಕಾಯಿಲೆ ಯಿಂದಲೂ ನರಳುತ್ತಿದ್ದ ಇವರಿಗೆ ಗ್ರಾಮಸ್ಥರೇ ಚಿಕಿತ್ಸೆ ಕೊಡಿಸಿದ್ದರು. ವೃದ್ಧೆಯ ಇಬ್ಬರು ಹೆಣ್ಣು ಮಕ್ಕಳು ಬೇರೆ ರಾಜ್ಯದಲ್ಲಿದ್ದರು. ಮಕ್ಕಳೊಂದಿಗೆ ಹೋಗಲು ಒಪ್ಪದ ಮಹಿಳೆ ಇಲ್ಲೇ ಉಳಿದಿದ್ದರು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಬೇರೆ ರಾಜ್ಯದಲ್ಲಿದ್ದ ಮಗಳನ್ನು ಸಹ ಕರೆಸಿದ್ದರು.ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ವೀರೇಶ್, ಸಮಾಜ ಸೇವಕಿ ಜುಬೇದಾ, ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್ ಕುಮಾರ್, ಸದಸ್ಯೆ ವಾಣಿ ನರೇಂದ್ರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವೃದ್ಧೆಯನ್ನು ಮಗಳೊಂದಿಗೆ ಕಳುಹಿಸಲಾಯಿತು.