ವಿಪ್ರ ಕ್ರೀಡೋತ್ಸವ ಸಮಾರೋಪ: ಸಾಧಕರಿಗೆ ಸನ್ಮಾನ

| Published : Feb 26 2024, 01:34 AM IST

ಸಾರಾಂಶ

ವಿಪ್ರ ಕ್ರೀಡಾಕೂಟದ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಹಾಗೂ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವತಿಯಿಂದ ಆಯೋಜಿಸಲಾದ ವಿಪ್ರ ಕ್ರೀಡಾಕೂಟದ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಹಾಗೂ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಗರದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಿತು.ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ಸಮುದಾಯದ ರವಿಶಂಕರ್ ಬಿ.ಪಿ., ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಸಹನಾ ದಿನೇಶ್ ಹಾಗೂ ರಕ್ಷಾ ಎನ್.ಕೆ., ಸಮಾಜ ಸೇವೆಗೆ ಮುರಳೀಧರ್ ಎಚ್.ಆರ್., ಧಾರ್ಮಿಕ ಕ್ಷೇತ್ರದಲ್ಲಿ ವೆಂಕಟರಮಣ ಭಟ್ ಹಾಗೂ ಶಾಸ್ತ್ರೀಯ ನೃತ್ಯದಲ್ಲಿನ ಸಾಧನೆಗೆ ಪ್ರೇಕ್ಷ ಭಟ್ ಅವರನ್ನು ಸನ್ಮಾನಿಸಲಾಯಿತು. ಎನ್.ಸಿ.ಸಿ. ಪರವಾಗಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ನಡೆದ ಪಥಸಂಚಲನದಲ್ಲಿ ಭಾಗವಹಿಸಿದ್ದ ರಘುವಂಶಿ ಸಿ.ಎಸ್. ಹಾಗೂ ಆಯುಷ್ ಎಂ.ಡಿ. ಅವರನ್ನು ಗೌರವಿಸಲಾಯಿತು.ಪ್ರತಿಭಾ ಪುರಸ್ಕಾರ: ಕಳೆದ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಸಾಕ್ಷಿ, ಪ್ರಣಮ್ಯ ಕಿರಣ್, ಶ್ರೀಲಕ್ಷ್ಮೀ, ಆಂಚಲ್ ಜೋಶಿ, ನಿರೂಪಮ ಹಾಗೂ ಪದವಿ ಶಿಕ್ಷಣದಲ್ಲಿ ಹೆಚ್ಚು ಅಂಕ ಗಳಿಸಿದ ಅಪೂರ್ವ, ಸುಪ್ರಿಯಾ ಹಾಗೂ ಸುಪ್ರಭಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ವಿಜೇತರಿಗೆ ಬಹುಮಾನ: ವಿಪ್ರ ಕ್ರೀಡಾಕೂಟದ ಅಂಗವಾಗಿ ಹಲವು ದಿನಗಳಿಂದ ಸಮುದಾಯದ ಬಾಂಧವರಿಗೆ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕ್ರಿಕೆಟ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಒಳಾಂಗಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.ಜಿಲ್ಲಾಮಟ್ಟದ ಮಹಿಳೆಯರ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಈಶ್ವರಿ ಉದಯಶಂಕರ್ ಪ್ರಥಮ ಹಾಗೂ ಸೌಮ್ಯ ಸಂತೋಷ್ ಭಟ್ ದ್ವಿತೀಯ ಬಹುಮಾನದ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು. ಮಕ್ಕಳ ವಿಭಾಗದಲ್ಲಿ ಅವನೀಶ್ ಕೃಷ್ಣ ಪ್ರಥಮ ಹಾಗೂ ಶಿಶಿರ್ ದ್ವಿತೀಯ ಸ್ಥಾನ ಗಳಿಸಿ ಟ್ರೋಫಿ ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ಸುಮೇಧ ಪ್ರಥಮ ಹಾಗೂ ಅನುಕ್ತ ದ್ವಿತೀಯ ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ಶ್ರೀನಿವಾಸ್ ಕುಶಾಲನಗರ ಪ್ರಥಮ ಹಾಗೂ ಶಶಿಕಾಂತ್ ದ್ವಿತೀಯ ಬಹುಮಾನ ಪಡೆದರು. ಪುರುಷರ ಡಬಲ್ಸ್‌ನಲ್ಲಿ ಅಚಲ್ ಮಯ್ಯ ಹಾಗೂ ಪ್ರಶಾಂತ್ ಮಯ್ಯ ಜೋಡಿ ಪ್ರಥಮ, ಡಾ.ರಾಘವನ್ ಹಾಗೂ ಎ.ವಿ. ಮಂಜುನಾಥ್ ಜೋಡಿ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸುಮನಾ ಶ್ರೀ ಹರಿ-ಸೌಮ್ಯ ಸಂತೋಷ್ ಭಟ್ ಜೋಡಿ ಪ್ರಥಮ ಹಾಗೂ ಸುಧಾ ಶಂಕರ್ ಪ್ರಸಾದ್ - ಈಶ್ವರಿ ಉದಯಶಂಕರ್ ಜೋಡಿ ದ್ವಿತೀಯ ಸ್ಥಾನ ಗಳಿಸಿದರು. ಟೇಬಲ್ ಟೆನ್ನಿಸ್‌ನಲ್ಲಿ ವಿಜೇತರಾದ ಹರಿಶಂಕರ್ ಹಾಗೂ ಸುಬ್ರಹ್ಮಣ್ಯ ಕೆ.ಪಿ. ಪ್ರಥಮ, ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡರು.ಜಿಲ್ಲಾ ಮಟ್ಟದ ಪುರುಷರ ಕೇರಂನಲ್ಲಿ ಸಂತೋಷ್ ಕಾಲೂರು ಪ್ರಥಮ, ಶ್ಯಾಮ್ ಸುಂದರ್ ದ್ವಿತೀಯ ಬಹುಮಾನ ಗಳಿಸಿದರು.ಚೆಸ್‌ನಲ್ಲಿ ವಿಷ್ಣು ಶಾಸ್ತ್ರಿ ಪ್ರಥಮ, ಕಾವ್ಯಶ್ರೀ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರಿಗೆ ಆಯೋಜಿಸಲಾದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಶೈಲಜ ಪ್ರಥಮ ಹಾಗೂ ಚಂದ್ರಾವತಿ ಶ್ರೀನಿವಾಸ್ ದ್ವಿತೀಯ ಸ್ಥಾನ ಗಳಿಸಿದರು. ಪುರುಷರಿಗೆ ಆಯೋಜಿಸಲಾದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಜಗದೀಶ್ ಬಿ.ಕೆ. ಪ್ರಥಮ ಹಾಗೂ ಸುದೀಪ್ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರಿಗೆ ಆಯೋಜನೆಗೊಂಡಿದ್ದ ಸಂಗೀತಾ ಕುರ್ಚಿ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಪ್ರಥಮ, ದೀಪಿಕಾ ದ್ವಿತೀಯ ಬಹುಮಾನ ಗಳಿಸಿದರು. ಮಕ್ಕಳ ವಿಭಾಗದ ಸಂಗೀತಾ ಕುರ್ಚಿ ಸ್ಪರ್ಧೆಯಲ್ಲಿ ಸಮನ್ಯು ಪ್ರಥಮ ಹಾಗೂ ಅನನ್ಯ ದ್ವಿತೀಯ ಸ್ಥಾನ ಗಳಿಸಿದರು. ಹೂ ಜೋಡಣೆ ಸ್ಪರ್ಧೆಯಲ್ಲಿ ದೀಪಿಕಾ ಪ್ರಥಮ ಹಾಗೂ ಸವಿತಾ ಭಟ್ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಶ್ರೀದೇವಿ ತಂಡ ಪೊನ್ನಂಪೇಟೆ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಮಡಿಕೇರಿ ವಿಪ್ರಾಸ್ ತಂಡದವರು ಟ್ರೋಫಿ ಹಾಗೂ ಪದಕಗಳನ್ನು ತಮ್ಮದಾಗಿಸಿಕೊಂಡರು. ಪುರುಷರ ಹಗ್ಗಜಗ್ಗಾಟದಲ್ಲಿ ವಿಜೇತರಾದ ಈಗಲ್ಸ್ ವಿರಾಜಪೇಟೆ ತಂಡ ಪ್ರಥಮ ಹಾಗೂ ಅಡ್ವೋಕೇಟ್ ಬ್ರಹ್ಮಾಸ್ ತಂಡ ಎರಡನೇ ಸ್ಥಾನ ಪಡೆಯಿತು. ನಿಧಿಯ ನಿರ್ದೇಶಕ ಸಂಪತ್ ಕುಮಾರ್ ಹಗ್ಗಜಗ್ಗಾಟ ಟ್ರೋಫಿ ಪ್ರಾಯೋಜಿಸಿದ್ದರು.

ಕ್ರಿಕೆಟ್ ನಲ್ಲಿ ಜಯಗಳಿಸಿದ ಕರಡ ಬುಲ್ಸ್ ತಂಡಕ್ಕೆ ಹಾಗೂ 2ನೇ ಸ್ಥಾನ ಗಳಿಸಿದ ಮಡಿಕೇರಿ ವಿಪ್ರಾಸ್ ತಂಡಕ್ಕೆ ದಿ.ರಾಮಚಂದ್ರ ರಾವ್ ಸ್ಮರಣಾರ್ಥ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಲೀಡ್ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ಮುಂದಿನ ತಲೆಮಾರನ್ನು ಯೋಗ್ಯ, ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವ ದೊಡ್ಡ ಹೊಣೆಗಾರಿಕೆ ಸಮಾಜದ ಸದಸ್ಯರಿಗೆ ಇದೆ. ಜನಾಂಗದ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಹೊಂದಿ ಸರ್ಕಾರಿ ಕೆಲಸವನ್ನು ನಿರೀಕ್ಷಿಸದೆ ಸ್ವ ಉದ್ಯೋಗದತ್ತ ಗಮನ ಹರಿಸಬೇಕು ಎಂದರು.

ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷೆ ಗೀತಾ ಗಿರೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಜನವರಿಯಲ್ಲಿ ಮೂರು ಭಾನುವಾರಗಳಂದು ಬ್ರಾಹ್ಮಣ ಸಮಾಜದವರಿಗೆ ಕ್ರೀಡಾಕೂಟಗಳನ್ನು ಆಯೋಜಿಸಿದ್ದು, ಇಂದು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕಾರ್ಯದರ್ಶಿ ಬಿ.ಕೆ. ಜಗದೀಶ್, ಖಜಾಂಚಿ ಜಿ.ಆರ್. ರವಿಶಂಕರ್, ನಿರ್ದೇಶಕರಾದ ಸವಿತಾ ಭಟ್, ಪ್ರಭಾಕರ ನೆಲ್ಲಿತ್ತಾಯ, ಎ.ವಿ. ಮಂಜುನಾಥ, ಜಯಶೀಲಾ ಪ್ರಕಾಶ್, ಸಂಪತ್ ಕುಮಾರ್, ವೀಣಾ ಹೊಳ್ಳ, ರಾಜಶೇಖರ್, ಭರತೇಶ್ ಖಂಡಿಗೆ, ಹಿರಿಯರಾದ ಜಿ.ಟಿ. ರಾಘವೇಂದ್ರ ಹಾಗೂ ಇತರರು ಇದ್ದರು.