ಪ್ರಜಾಪ್ರಭುತ್ವ ಬಲಪಡಿಸಲು ಮತ ಚಲಾಯಿಸಿ : ಸುಮಲತಾ

| Published : Apr 19 2024, 01:07 AM IST / Updated: Apr 19 2024, 01:04 PM IST

ಸಾರಾಂಶ

ಪ್ರಜಾಪ್ರಭುತ್ವ ಯಶಸ್ವಿಗೊಳಿಸುವ ಹಕ್ಕು ಮತದಾರರ ಕೈಯಲ್ಲಿದೆ. ಸಂವಿಧಾನ ನಮಗೆ ಮತ ಚಲಾಯಿಸುವ ಹಕ್ಕು ನೀಡಿದ್ದು ಅದನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಾಪಂ ಇಒ ಸುಮಲತಾ ಎಸ್.ಪಿ. ಹೇಳಿದರು.

   ರಾಣಿಬೆನ್ನೂರು :  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಮತದಾನದ ದಿನವಾದ ಮೇ 7ರಂದು ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಮಲತಾ ಎಸ್.ಪಿ. ಕರೆ ನೀಡಿದರು

ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ಬುಧವಾರ ಸಂಜೆ ತಾಲೂಕ ಸ್ವೀಪ್ ಸಮಿತಿ ಹಾಗೂ ಎನ್‌ಆರ್‌ಎಲ್‌ಎಂ ಮಹಿಳಾ ಸಂಘದ ಪ್ರತಿನಿಧಿಗಳು ಕಾರ್ಯಕರ್ತರ ಸಂಯುಕ್ತ ಆಶ್ರಯದಲ್ಲಿ ಮತದಾನ ಜಾಗೃತಿ ಅಂಗವಾಗಿ ನಡೆದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರಜಾಪ್ರಭುತ್ವ ಯಶಸ್ವಿಗೊಳಿಸುವ ಹಕ್ಕು ಮತದಾರರ ಕೈಯಲ್ಲಿದೆ. ಸಂವಿಧಾನ ನಮಗೆ ಮತ ಚಲಾಯಿಸುವ ಹಕ್ಕು ನೀಡಿದ್ದು ಅದನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಿದರು.

ರಂಗೋಲಿ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಕಾರ್ಯಕರ್ತರಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನವನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ವಿತರಿಸಿದರು.

ಪಿಡಿಒ ಮಾಲತೇಶ ಮಡಿವಾಳರ, ಎಂಐಎಸ್ ಸಂಯೋಜಕ ಸುನಿತಾ, ತಾಂತ್ರಿಕ ಸಂಯೋಜಕ ರವಿಕುಮಾರ ಯಾಳಗಿ, ನರೇಗಾ ಐಇಸಿ ಸಂಯೋಜಕ ದಿಂಗಾಲೇಶ್ವರ ಅಂಗೂರ, ಎನ್‌ಆರ್‌ಎಲ್‌ಎಂ ತಾಲೂಕ ವ್ಯವಸ್ಥಾಪಕ ಅನಿಲಕುಮಾರ, ಸುನಿತಾ ಮುನೇನಕೊಪ್ಪ, ಸಾರಥಿ ಹಾಗೂ ತಾಲೂಕಿನ 40 ಗ್ರಾಮ ಪಂಚಾಯಿತಿಗಳ ಎಂಬಿಕೆ ಎಲ್‌ಸಿಆರ್‌ಪಿ ಗಳು ಉಪಸ್ಥಿತರಿದ್ದರು