ಸಾರಾಂಶ
- ಅಪರ ಡಿಸಿ ಸೇರಿ ಅಧಿಕಾರಿಗಳಿಂದ ಅಂಚೆ ಮತದಾನ । ಮೇ 7ರಂದು ದಾವಣಗೆರೆ ಕ್ಷೇತ್ರಕ್ಕೆ ಮತದಾನ
- - - ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತ ಮೇ 7ರಂದು ಮತದಾನ ನಡೆಯುತ್ತದೆ. ಅಗತ್ಯ ಸೇವೆಯಲ್ಲಿ ತೊಡಗಿರುವ ಜಿಲ್ಲೆಯ ಮತ್ತು ಇತರೆ ಜಿಲ್ಲೆಯಲ್ಲಿನ ಮತದಾರರು ಮತ್ತು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮತದಾನ ದಿನ ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಹೊರ ಜಿಲ್ಲೆಯ ಅಧಿಕಾರಿ, ಸಿಬ್ಬಂದಿ ಜಿಲ್ಲಾಡಳಿತ ಭವನದ ಪಕ್ಕದಲ್ಲಿನ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಸ್ಥಾಪಿಸಲಾದ ಮತದಾನ ಸೌಲಭ್ಯ ಕೇಂದ್ರದಲ್ಲಿ ಮೇ 1ರಂದು 228 ಮತದಾರರು ಮತದಾನ ಮಾಡಿದರು.
ಅಗತ್ಯ ಸೇವಾ ಇಲಾಖೆ ಮತದಾರರು ಮತ್ತು ಮತದಾನ ದಿನ ಚುನಾವಣಾ ಕರ್ತವ್ಯದಲ್ಲಿ ತೊಡಗಿದವರಿಗೆ ಮತದಾನ ಮಾಡಲು ಮೇ 1, 2 ಮತ್ತು 3ರಂದು ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ದಾವಣಗೆರೆ ಲೋಕಸಸಭಾ ಕ್ಷೇತ್ರದ ಮತದಾರರಾಗಿ ದಾವಣಗೆರೆ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಕರ್ತವ್ಯನಿರತ 901 ಮತದಾರರು ಅಂಚೆ ಮತದಾನಕ್ಕಾಗಿ 12ಡಿ ಅಡಿ ಘೋಷಣೆ ಮಾಡಿಕೊಂಡಿದ್ದರು. ಇತರೆ ಜಿಲ್ಲೆಯಲ್ಲಿದ್ದರೂ ದಾವಣಗೆರೆಗೆ ಬಂದು ಮತದಾನ ಮಾಡಬೇಕು. ಅವರಿಗೆ ಬಂದು ಮತದಾನ ಮಾಡಲು ಅನ್ಯ ಕಾರ್ಯನಿಮಿತ್ತ ರಜಾ ಸೌಲಭ್ಯವಿತ್ತದೆ. ಮೇ 1ರಂದು ಅಗತ್ಯ ಸೇವಾ ಇಲಾಖೆ 153 ಮತದಾರರು ಅಂಚೆ ಮತದಾನ ಮಾಡಿದರು.ಮತದಾನ ದಿನ ಚುನಾವಣಾ ಕರ್ತವ್ಯನಿರತ ಇತರೆ ಜಿಲ್ಲೆ ಮೂರನೇ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರದ ಮತದಾರರಾಗಿದ್ದು, ಮೇ 7ರಂದು ದಾವಣಗೆರೆ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತಾಗಿರುವ 1128 ಮತದಾರರಲ್ಲಿ 75 ಅಧಿಕಾರಿಗಳು, ಸಿಬ್ಬಂದಿ ಮೇ 1ರಂದು ಮತದಾನ ಮಾಡಿದರು.
ಅಪರ ಡಿಸಿ ಮತದಾನ:ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಅವರು ದಾವಣಗೆರೆಯಲ್ಲಿ ಮತದಾನ ದಿನ ಚುನಾವಣಾ ಕರ್ತವ್ಯದಲ್ಲಿ ತೊಡಗಿರುವುದರಿಂದ ದಾವಣಗೆರೆ ಅಂಚೆ ಸೌಲಭ್ಯ ಕೇಂದ್ರವಿರುವ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಮತದಾನ ಮಾಡಿದರು.
ಭೂ ಮಾಪನ ಇಲಾಖೆ ಉಪನಿರ್ದೇಶಕರು ಹಾಗೂ ಹರಿಹರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಭಾವನ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದಾರೆ. ಅವರು ಮತದಾನ ದಿನ ದಾವಣಗೆರೆಯಲ್ಲಿ ಚುನಾವಣಾ ಕರ್ತವ್ಯದಲ್ಲಿ ತೊಡಗುವುದರಿಂದ ಅಂಚೆ ಮತದಾನ ಮೂಲಕ ಮತ ಚಲಾಯಿಸಿದರು.- - -
ಬಾಕ್ಸ್ ಇಂದೂ ಮತದಾನಕ್ಕೆ ಅವಕಾಶ ಚುನಾವಣಾ ಆಯೋಗವು ಈ ಚುನಾವಣೆಯಲ್ಲಿ 16 ಅಗತ್ಯ ಸೇವಾ ಇಲಾಖೆಯಡಿ ಕೆಲಸ ಮಾಡುತ್ತಿರುವ ಅಂದರೆ, ಮತದಾನ ದಿನ ಮತಗಟ್ಟೆಗೆ ಹೋಗಿ ಮತ ಹಾಕಲು ಸಾಧ್ಯವಾಗದ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಈ ಅವಕಾಶ. ಇದಕ್ಕಾಗಿ 12ಡಿ ರಡಿ ಘೋಷಣೆ ಮಾಡಿರಬೇಕು. ಚುನಾವಣಾ ದಿನ ಮತಗಟ್ಟೆ ಕರ್ತವ್ಯದಲ್ಲಿ ತೊಡಗಿದವರಿಗೆ ಅಂಚೆ ಮತದಾನಕ್ಕೆ ಬ್ಯಾಲೆಟ್ನ್ನು ಅವರ ವಿಳಾಸಕ್ಕೆ ಕಳುಹಿಸಿಕೊಡಲಾಗುತ್ತಿತ್ತು. ಆದರೆ ಈ ಚುನಾವಣೆಯಲ್ಲಿ ಅಂಚೆ ಮತಪತ್ರ ಮನೆಗೆ ಕಳುಹಿಸದೇ ಸೌಲಭ್ಯ ಕೇಂದ್ರದಲ್ಲಿ ಬಂದು ಅಲ್ಲಿಯೇ, ಪಡೆದು ಮತದಾನ ಮಾಡಬೇಕು. ಇಂತಹ ಸುಧಾರಣೆ ತರುವ ಮೂಲಕ ಆಯೋಗ ಅಂಚೆ ಮತಪತ್ರ ಮತ್ತು ಮತದ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷ. ಮೇ 2 ಮತ್ತು 3ರಂದು ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಸ್ಥಾಪಿಸಿರುವ ಸೌಲಭ್ಯ ಕೇಂದ್ರದಲ್ಲಿ ಅಂಚೆ ಮತದಾನ ನಡೆಯಲಿದೆ.- - -
-1ಕೆಡಿವಿಜಿ48ಃ:ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ದಾವಣಗೆರೆಯಲ್ಲಿ ಮತದಾನ ಸೌಲಭ್ಯ ಕೇಂದ್ರವಿರುವ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಮತದಾನ ಮಾಡಿದರು.