ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುವಿಜ್ಞಾನ, ತಂತ್ರಜ್ಞಾನದಲ್ಲಿ ನ್ಯೂಟನ್ ನಿಂದ ಇಲ್ಲಿಯವರೆಗೆ ಹಲವಾರು ಹೊಸ ಆವಿಷ್ಕಾರಗಳು ನಡೆದಿದ್ದು, ತಕ್ಷಣದಲ್ಲಿ ಅವರು ಸಮಸ್ಯೆಗಳಿಗೆ ಪರಿಹಾರ ಒದಗಿಸಿದರೂ, ಧೀರ್ಘಕಾಲದಲ್ಲಿ ಜೀವ ವಿರೋಧಿಯಾಗಿ ಪರಿವರ್ತಿತ ವಾಗುವುದನ್ನು ನಾವು ಕಾಣುತಿದ್ದೇವೆ. ಹಾಗಾಗಿ ಕಣ್ಣಿಗೆ ಕಾಣದ ಹಾಗೂ ಕಾಣುವ ಜೀವಿಗಳೆರಡಕ್ಕೂ ಅನುಕೂಲವಾಗುವ ರೀತಿಯ ಸುಸ್ಥಿರ ಸಂಶೋಧನೆಗಳತ್ತ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ಸೈನ್ಸ್ ಅಂಡ್ ಟೆಕ್ನಾಲಜಿ ಅಕಾಡೆಮಿ ರಾಜ್ಯಾಧ್ಯಕ್ಷ ಡಾ.ಎ.ಎಚ್.ರಾಜಾಸಾಬ್ ಪ್ರತಿಪಾದಿಸಿದ್ದಾರೆ.ನಗರದ ಸರ್ಕಾರರಿ ಪ್ರಥಮದರ್ಜೆ ಕಾಲೇಜಿನ ವಿಜ್ಞಾನ ವಿಭಾಗದಿಂದ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನ ಸೈನ್ಸ್ಅಂಡ್ ಸೊಸೈಟಿ ಫಾರ್ ಸಸ್ಟೇನಬಲ್ ಪ್ಯೂಚರ್ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದ ಪರಿಚಯ ಭಾಷಣ ಮಾಡಿದರುಸ್ವಾತಂತ್ರ ನಂತರದಲ್ಲಿ ದೇಶದ 33 ಕೋಟಿ ಜನರಿಗೆ ಆಹಾರ ಒದಗಿಸಲು ಹಸಿರು ಕ್ರಾಂತಿಯನ್ನು ಅಳವಡಿಸಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಭಾರತ ಆಹಾರ ಸ್ವಾವಲಂಬನೆ ಸಾಧಿಸಿದರೂ,ಅಂತರ್ಜಲ ಬಳಕೆ, ಅತಿಯಾದ ರಸಾಯನಿಕ ಬಳಕೆ, ಹೈಬ್ರಿಡ್ ತಳಿಗಳು, ಕೀಟನಾಶಕಗಳ ಪರಿಣಾಮ ಪರಿಸರ ನಾಶವಾಗಿ, ಕುಡಿಯುವ ನೀರು ಸಹ ವಿಷಯುಕ್ತವಾಯಿತು. ಇದರಿಂದ ಹೊರಬರಬೇಕಾದರೆ ನಾವೆಲ್ಲರೂ ಪರಿಸ್ನೇಹಿ ಸಂಶೋಧನೆಯತ್ತ ಗಮನಹರಿಸಬೇಕಾದ ಅಗತ್ಯವಿದೆ.ಇದೊಂದು ಮುಗಿಯದಯುದ್ದ ಎಂದರು.ಗಾಂಧೀಜಿಯವರು ಹೇಳಿದಂತೆ ಭೂಮಿ ನಮ್ಮ ಆಸೆಯನ್ನು ಪೂರೈಸಬಲ್ಲದೇ ಹೊರತು ದುರಾಸೆಯನ್ನಲ್ಲ. ಇದನ್ನು ನಾವೆಲ್ಲರೂ ಅರಿತು ನಡೆಯಬೇಕಿದೆ. ಬುದ್ದ ಹೇಳಿದಂತೆ ಯಾವುದಕ್ಕುಆರಂಭ, ಅಂತ್ಯ ಎಂಬುದಿಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಆದರೆ ಆತನನ್ನು ದೇವರ ಸ್ವರೂಪ ಕೊಟ್ಟು ಪೂಜೆಗೆ ಸೀಮಿತಗೊಳಿಸಿದ್ದೇವೆ. ಕೃತಕ ಬುದ್ದಿಮತ್ತೆಯಿಂದ ಬುದ್ದಿವಂತ ವಿದ್ಯಾರ್ಥಿ, ಅವರೆಜ್ಗೆ ಇಳಿದರೆ, ಸಾಮಾನ್ಯ ವಿದ್ಯಾರ್ಥಿ ಅದಕ್ಕಿಂತಲೂ ಕೆಳಮಟ್ಟಕ್ಕೆ ಕುಸಿಯುತ್ತಿದ್ದಾನೆ. ವಿದ್ಯಾರ್ಥಿಗಳ ಅಸೈನಮೆಂಟ್ ಮತ್ತು ಸಂಶೋಧನಾ ಪ್ರಬಂಧಗಳಲ್ಲಿ ಯಾವುದು ನಕಲು ಮಾಡಿದ್ದು ಎಂದು ಕಂಡು ಹಿಡಿಯಲು ಹೊಸ ಸಂಶೋಧನೆಗೆ ಮುಂದಾಗುವಂತಹ ದುಸ್ಥಿತಿಗೆ ನಾವು ತಲುಪಿದ್ದೇವೆ ಎಂದರು.ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗೀಯ ಜಂಟಿ ನಿರ್ದೇಶಕ ಡಾ.ರಾಮಕೃಷ್ಣಾರೆಡ್ಡಿ, ಸರ್ಕಾರಿ ಕಾಲೇಜುಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಹಾಗಾಗಿಯೇ ಸರ್ಕಾರರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಮುಖವಾಗಿದೆ. ಸರ್ಕಾರರ ಸಹ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಾ ಬಂದಿದೆ.ಸುಮಾರು 20 ಕ್ಕು ಹೆಚ್ಚು ಒಪ್ಪಂದಗಳನ್ನು ಮಾಡಿಕೊಂಡು ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹಗಲಿರುಳು ಶ್ರಮಿಸುತ್ತಿದೆ.ಅಜೀಂ ಪ್ರೇಮಜಿ ಫೌಂಡೇಷನ್ ಸಹಯೋಗದಲ್ಲಿ ರಾಜ್ಯದ ಬೆಂಗಳೂರು ವಿಭಾಗದ ಸುಮಾರು 28 ಸಾವಿರ ವಿದ್ಯಾರ್ಥಿನಿಯರಿಗೆ ವಾರ್ಷಿಕ 30 ಸಾವಿರರೂ ವಿದ್ಯಾರ್ಥಿ ವೇತನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕಾರ್ಯಕ್ರಮದ ಹಿರಿಯ ವಿಜ್ಞಾನಿ ಡಾ.ಶೋಭಾ, ಪ್ರಾಂಶುಪಾಲರಾದ ಪ್ರೊ.ವಸಂತ.ಟಿ.ಡಿ ಕುವೆಂಪು ವಿವಿಯ ಕುಲಪತಿ ಪ್ರೊ. ಶರತ್ ಆನಂತಮೂರ್ತಿ, ಡಾ.ಕೆ.ವಿ.ಅನುಸೂಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನಅಕಾಡೆಮಿ ಸಿಇಒ ಡಾ.ಆನಂದ.ಆರ್., ವಿಚಾರ ಸಂಕಿರಣದ ಸಂಯೋಜಕರಾದ ಡಾ.ಯೋಗೀಶ್.ಎನ್., ಸರ್ಕಾರರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಬಿ.ಆರ್.ಮತ್ತಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))