ನಕ್ಸಲರ ಶರಣಾಗತಿ ತರಾತುರಿ ಆಗಿದ್ದೇಕೆ?: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

| Published : Jan 12 2025, 01:15 AM IST

ನಕ್ಸಲರ ಶರಣಾಗತಿ ತರಾತುರಿ ಆಗಿದ್ದೇಕೆ?: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ನಕ್ಸಲರ ಶರಣಾಗತಿಗೆ ನಾನು ವಿರೋಧ ಮಾಡುತ್ತಿಲ್ಲ. ನಕ್ಸಲರಿ​ಗೆ ಪ್ಯಾಕೇಜ್‌ ವ್ಯವಸ್ಥೆ ಎಲ್ಲ ಸರ್ಕಾರದಲ್ಲಿದೆ. ನಕ್ಸಲ ಚಳವಳಿಯನ್ನು ಬೇರು ಸಮೇತ ಕಿ​ತ್ತು ಹಾಕುವ ಚಿಂತನೆ ಕೇಂದ್ರ ಸರ್ಕಾರ ಮಾಡುತ್ತಿದೆ. ನ​ಕ್ಸಲ ಚ​ಟು​ವ​ಟಿ​ಕೆ​ಯಲ್ಲಿ ರಾಜ್ಯದ ಯುವಕರು ಸಿಲುಕಿದ್ದಾರೆ.

ಹು​ಬ್ಬ​ಳ್ಳಿ:

ತರಾತುರಿಯಲ್ಲಿ ಆರು ಜನ ನಕ್ಸಲರನ್ನು ಶರಣಾಗತಿ ಮಾಡಿಸಲಾಗಿದೆ. ಶರಣಾಗತಿಯಾದ ನಕ್ಸಲರು ಎಷ್ಟು ಶಸ್ತ್ರಾಸ್ತ್ರಗಳು ಒಪ್ಪಿಸಿದ್ದಾರೆ? ಅವರು ನೀಡಿರುವ ಮಾಹಿತಿ ಏನು? ಎಂದು ಪ್ರಶ್ನಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಈ ಬಗ್ಗೆ ಸಿಎಂ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಸು​ದ್ದಿ​ಗಾ​ರ​ರೊಂದಿಗೆ ಶ​ನಿ​ವಾರ ಮಾ​ತ​ನಾ​ಡಿದ ಅ​ವ​ರು, ನಕ್ಸಲರಿಗೆ ವಿದೇಶಿದಿಂದ ಹಣಕಾ​ಸಿನ ಸಹಾಯವಾಗುತ್ತದೆ. ಇದರಲ್ಲಿ ನಮ್ಮ ರಾಜ್ಯದ ಯುವಕರೂ ಸಿಲುಕಿದ್ದಾರೆ. ಬೇರೆ ಬೇರೆ ಭಾಗಗಳಲ್ಲಿ ಶರಣಾಗತಿ ಆದ ನಕ್ಸಲರು ತಮ್ಮ ಬಳಿ ಇದ್ದ ಎಲ್ಲ ಶಸ್ತಾಸ್ತ್ರಗಳನ್ನು ಒಪ್ಪಿಸಿದ್ದಾರೆ. ಆ​ದರೆ, ರಾಜ್ಯದಲ್ಲಿ ನ​ಡೆದ ನ​ಕ್ಸ​ಲರ ಶ​ರ​ಣಾ​ಗ​ತಿ​ಯಲ್ಲಿ ಅದು ಆ​ಗ​ದಿ​ರು​ವುದು ಹ​ಲವು ಅ​ನು​ಮಾ​ನಕ್ಕೆ ಕಾ​ರ​ಣ​ವಾ​ಗಿದೆ ಎಂದ​ರು.

ನಕ್ಸಲರ ಶರಣಾಗತಿಗೆ ನಾನು ವಿರೋಧ ಮಾಡುತ್ತಿಲ್ಲ. ನಕ್ಸಲರಿ​ಗೆ ಪ್ಯಾಕೇಜ್‌ ವ್ಯವಸ್ಥೆ ಎಲ್ಲ ಸರ್ಕಾರದಲ್ಲಿದೆ. ನಕ್ಸಲ ಚಳವಳಿಯನ್ನು ಬೇರು ಸಮೇತ ಕಿ​ತ್ತು ಹಾಕುವ ಚಿಂತನೆ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದ ಅವರು, ನ​ಕ್ಸಲ ಚ​ಟು​ವ​ಟಿ​ಕೆ​ಯಲ್ಲಿ ರಾಜ್ಯದ ಯುವಕರು ಸಿಲುಕಿದ್ದಾರೆ. ನಕ್ಸಲ್‌ ಪ್ಯಾಕೇಜ್‌ ಇತರೇ ನಕ್ಸಲರಿಗೆ ಸಲುಗೆಯಾಗದಿರಲಿ. ಆರು ಜನ ನಕ್ಸಲ್‌ ಶರಣಾದರೆ, ರಾಜ್ಯದಲ್ಲಿ ನಕ್ಸಲ ಚಳವಳಿ ಮುಗಿಯಿತು ಎಂದು ಬಿಂಬಿಸಲಾಗುತ್ತಿದೆ. ಆ್ಯಂಟಿ ನಕ್ಸಲ ತಂಡದ ಕಾರ್ಯಾಚರಣೆ ನಿಲ್ಲಿಸುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಜೋ​ಶಿ ಪ್ರಶ್ನಿಸಿದರು.

ಪಕ್ಷದ ಸಭೆ ಅಷ್ಟೇ:

ವಿಜಯೇಂದ್ರ ಯಾವುದೇ ಡಿನ್ನರ್‌ ಪಾರ್ಟಿ ಎಂದು ಕರೆದಿಲ್ಲ. ಪಕ್ಷದ ಸಭೆ ಕರೆದಿದ್ದರು. ನನಗೂ ಕರೆದಿದ್ದರು ನಾನೂ ಹೋಗಿದ್ದೆ ಎಂದು ಪ್ರಶ್ನೆಯೊಂದಕ್ಕೆ ಜೋಶಿ ಉತ್ತರಿಸಿದರು. ಕಾಂಗ್ರೆಸ್‌ನ ಒಳಜಗಳದಿಂದ ಭ್ರಷ್ಟಾಚಾರ, ಅನೇಕ ರೀತಿಯ ಹಗರಣದಿಂದ ಸರ್ಕಾರ ನಿ​ಯಂತ್ರಣ ತ​ಪ್ಪಿ​ದೆ. ಕೆಎಸ್‌ಆರ್‌ಟಿಸಿ ಮತ್ತು ಎಲ್ಲ ಅಂಗ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ ಎಂದರು.

ದಲಿತರ ಪರ ಅಲ್ಲ:

ಇತ್ತೀಚಿಗೆ ಗೃಹ ಸಚಿವ ಡಾ.ಪರಮೇಶ್ವರ ದಲಿತ ಶಾಸಕರು, ಸಚಿವರ ಸಭೆ ಕರೆದಿದ್ದು ಅದು ದಿಢೀರನೆ ಮುಂದೂಡಲ್ಪಟ್ಟಿತು. ದಲಿತರ ಸಭೆಗೆ ಬ್ರೇಕ್‌ ಹಾಕಿದ್ಯಾರು, ದಲಿತರ ಕಾರ್ಯಕ್ರಮವನ್ನು ಯಾರು ಸಹಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ ಬ​ಹಿ​ರಂಗಪ​ಡಿ​ಸಲಿ. ಕಾಂಗ್ರೆಸ್‌ ಯಾವತ್ತೂ ದಲಿತರ ಪರವಾಗಿಲ್ಲ ಎಂದರು.

ಕಾಂಗ್ರೆಸ್‌ ಅಂಬೇಡ್ಕರ್‌ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ. ಅವರಿಗೆ ಗೌರವ ಕೊಟ್ಟಿಲ್ಲ. ಈಗಿನ ದಲಿತ ನಾಯಕರಿಗೆ ಗೌರವ ನೀಡುತ್ತೆ ಎಂದು ಕೆ​ಲ​ವರು ಭ್ರ​ಮೆ​ಯ​ಲ್ಲಿ​ದ್ದಾ​ರೆ. ದ​ಲಿ​ತ​ರನ್ನು ತಪ್ಪು ದಾರಿಗೆಳೆಯುವ, ಕತ್ತಲಲ್ಲಿ ಇಡುವ ಕಾರ್ಯ ಕಾಂಗ್ರೆಸ್‌ನಲ್ಲಿ ನ​ಡೆ​ಯುತ್ತಿದೆ. ದಲಿತ ನಾಯಕರು ಎಚ್ಚರಿಕೆಯಿಂದ ಇರಬೇಕು ಎಂದು ಜೋಶಿ ಕಿವಿಮಾತು ಹೇಳಿದರು.

ಇಂಡಿಯಿಂದ ಕಾಂಗ್ರೆಸ್‌ ಔ​ಟ್‌:

ಇಂಡಿ ಘಟಬಂಧನದಿಂದ ಕಾಂಗ್ರೆಸ್‌ನ್ನೇ ಹೊರಹಾಕಲಾಗಿದೆ. ಕಾಂಗ್ರೆಸ್‌ಗೆ ಎಲ್ಲಿಯೂ ನೆಲೆ ಇಲ್ಲದಂತಾ​ಗಿ​ದೆ. ಅ​ವ​ರ​ಲ್ಲಿನ ಒಳ ಜಗಳದ ಪರಿಣಾಮ ಈ ರೀತಿಯಲ್ಲಿ ಆಗುತ್ತಿದೆ. ದೆಹಲಿ ಚು​ನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನವನ್ನು ಗೆ​ಲ್ಲು​ವು​ದಿ​ಲ್ಲ. ಅದು ರಾಷ್ಟ್ರೀಯ ಪಕ್ಷದಿಂದ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದು ಲೇ​ವಡಿ ಮಾ​ಡಿ​ದ​ರು.