ಸಾರಾಂಶ
ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪೂಜ್ಯ ಶ್ರೀ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಚಾಚುತಪ್ಪದೇ ಪಾಲನೆ ಮಾಡುತ್ತಾ ಮಹಿಳೆಯರು, ಚಳಿ, ಮಳೆ, ಗಾಳಿ ಅಥವಾ ಯಾವುದೇ ಸಂದರ್ಭದಲ್ಲೂ ಮನೆಯ ಒಳಗೆ ತಮ್ಮ ನಿತ್ಯ ಕಾಯಕವನ್ನು ತಪ್ಪದೇ ಮಾಡುತ್ತಾ ಕುಟುಂಬದ ಶ್ರೇಯಸ್ಸಿಗೆ ತಮ್ಮ ಜೀವನವನ್ನೇ ಸವೆಸುವ ಮಹಿಳೆಯೂ ಪುರಾಣದಲ್ಲಿ ತಿಳಿಸಿರುವಂತೆ ಪೂಜ್ಯನೀಯರು ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳೆಯರಿಗೆ ಕೈ ಮುಗಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಸಬಲೀಕರಣ ಎಂಬುದು ನಮ್ಮಗಳ ಮನದಲ್ಲಿ ಬರಬೇಕು, ನಾವುಗಳು ಪಾಲನೆ ಮಾಡದೇ ಇದ್ದ ಸಂದರ್ಭದಲ್ಲಿ ಕಾಯ್ದೆ ಕಾನೂನುಗಳ ಅನುಷ್ಟಾನ ಅವಶ್ಯ, ಆದರೆ ಮಹಿಳೆಯಿಂದ ನಾನಾ ರೀತಿಯ ಸಹಾಯ ಪಡೆಯುವ ನಾವುಗಳು, ಮಹಿಳಾ ಸಬಲೀಕರಣಕ್ಕೆ ಕಾಯ್ದೆ ಕಾನೂನಿನ ಮೂಲಕ ಅನುಷ್ಟಾನ ಎಷ್ಟು ಸರಿ ಎಂದು ಬೇಸರ ವ್ಯಕ್ತಪಡಿಸಿದರು.ಮಹಿಳೆಯರಿಗೆ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ನಾನಾ ರೀತಿಯ ದೈಹಿಕ ಕಸರತ್ತು ಜರಗುವ ಕಾರಣದಿಂದ ಅವರಿಗೆ ಯೋಗದ ಅವಶ್ಯಕತೆ ಇಲ್ಲ ಮತ್ತು ಹೃದಯಾಘಾತವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು. ಇದಕ್ಕೆ ನಾನಾ ರೀತಿಯ ಕಾರಣಗಳು ಇದ್ದೂರೂ ಸಹ ಮಹಿಳೆ ತನ್ನ ಕಾಯಕವನ್ನು ತನ್ಮಯತೆಯಿಂದ ತೊಡಗಿಸಿಕೊಳ್ಳುವ ಕಾರಣದಿಂದ ಅವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯ ಮತ್ತು ಸಮಚಿತ್ತ ವಿರುತ್ತದೆ ಎಂದು ಶ್ಲಾಘಿಸಿದರು. ಸ್ವಸಹಾಯ ಸಂಘದ ರೂಪ ಎಂಬ ಗೃಹಣಿ ಮಾತನಾಡಿ, ಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ, ತಾಯಿಯಾಗಿ ನಾನಾ ಸ್ತರದಲ್ಲಿ ಕರ್ತವ್ಯ ನಿರ್ವಹಿಸುವ ನಾವುಗಳು ನಮ್ಮ ಜವಾಬ್ದಾರಿ ಅರಿತು ನಮ್ಮ ತಂತೆ ತಾಯಿಗೆ ನೀಡವಂತೆ ಪ್ರೀತಿ ಹಾಗೂ ಗೌರವವನ್ನು ತನ್ನ ಅತ್ತೆ ಮಾವನವರಿಗೆ ನೀಡಬೇಕು, ಜೀವನದಲ್ಲಿ ಅವರೂ ಸಹ ಸಾಕಷ್ಟು ಶ್ರಮದಿಂದ ಮಕ್ಕಳ ಪಾಲನೆ ಮಾಡಿರುವಾಗ ನಾವುಗಳು ಅವರನ್ನು ವೃದ್ಧಾ ಶ್ರಮಕ್ಕೆ ಕಳುಹಿಸುವುದು ಎಷ್ಟು ಸರಿ, ಮುಂದೊಂದು ದಿನ ನಾವುಗಳೂ ಸಹ ಅತ್ತೆಮಾವ ಆಗುತ್ತೇವೆ ಎಂಬ ಜ್ಞಾನವಿಟ್ಟುಕೊಂಡು, ದಯವಿಟ್ಟು ಪೂರ್ವಿಕರು ತೋರಿರುವ ಮಾರ್ಗದಲ್ಲಿ ಸಾಗುತ್ತಾ, ಎಲ್ಲರನ್ನೂ ಪ್ರೀತಿ, ವಿಶ್ವಾಸ ಹಾಗೂ ಗೌರವದಿಂದ ಕಾಣೋಣ ಎಂದುರು. ಪುರಸಭೆ ಮಾಜಿ ಅಧ್ಯಕ್ಷ ಸುದಾನಳಿನಿ, ಜ್ಯೋತಿ ಹಾಗೂ ವೀಣಾ, ಪುರಸಭಾ ಸದಸ್ಯ ನಿಂಗಯ್ಯ ಮತ್ತು ಇಂದು ನಾಗರಾಜ್ ಮಾತನಾಡಿದರು. ಪೌರ ಕಾರ್ಮಿಕರಾದ ರಾಮಮ್ಮ , ಗೌರಿ ಮತ್ತು ಪರಸಭೆ ಕಚೇರಿ ವ್ಯವಸ್ಥಾಪಕಿ ಮೋಹನಕುಮಾರಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪುರಸಭೆ ಮಹಿಳಾ ಸದಸ್ಯರಾದ ತ್ರಿಲೋಚನಾ, ಶಫಿನಾಜ್, ಟಿ.ಶಾಂತಿ, ನಾಗಮಣಿ, ಡಿ.ಜಯಲಕ್ಷ್ಮಿ, ಸಾವಿತ್ರಿ, ಮಮತಾಕುಮಾರಿ, ಪುರಸಭೆಯ ಅಧಿಕಾರಿಗಳಾದ ರುಚಿದರ್ಶಿನಿ, ಪಂಕಜಾ, ಮೋಹನಕುಮಾರಿ, ನಾಗೇಂದ್ರ ಕುಮಾರ್, ರಮೇಶ್ ಮತ್ತಿತರರಿದ್ದರು.